<p>ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದಾಗ ದೇವರ ಆಶೀರ್ವಾದ ಪಡೆಯುವುದು ಸಹಜ. ಆದರೆ ನೀವು ದೇವರ ಆಶೀರ್ವಾದವನ್ನು ಹಣಕ್ಕಾಗಿ ಮಾರಾಟ ಮಾಡುವುದನ್ನು ಎಂದಾದರೂ ನೋಡಿದ್ದಿರಾ? ₹10ಕ್ಕೆ ದೇವರ ಆಶೀರ್ವಾದವನ್ನು ಮಾರಾಟ ಮಾಡುತ್ತಿರುವ ಬಾಲಕನ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. </p><p>ವಿಡಿಯೊದಲ್ಲಿ ಬಾಲಕನು ಒಂದು ಕಟ್ಟೆಯ ಮೇಲೆ ಶಿವಲಿಂಗವನ್ನು ಇಟ್ಟುಕೊಂಡಿದ್ದಾನೆ. ಅವನ ಬಳಿ ಬಂದ ಮಹಿಳೆಯರು ಬಾಲಕನಿಗೆ ₹10 ನೀಡಿ ಶಿವಲಿಂಗವನ್ನು ಮುಟ್ಟುತ್ತಾರೆ. ಆಗ ಬಾಲಕ ತಾನೂ ಲಿಂಗವನ್ನು ಮುಟ್ಟಿ ಮಹಿಳೆಯರ ತಲೆ ಮೇಲೆ ಕೈ ಇಟ್ಟಿ ದೇವರ ಪರವಾಗಿ ತಾನೇ ಆಶೀರ್ವಾದ ಮಾಡುತ್ತಾನೆ.</p>.ಗಂಗಾ ನದಿ ನೀರು ಕಲುಷಿತ; ವಿಡಿಯೊ ಹಂಚಿಕೊಂಡ ಬ್ರಿಟಿಷ್ ಜೀವಶಾಸ್ತ್ರಜ್ಞ.<p>‘₹10 ಕೊಡಿ, ಆಶೀರ್ವಾದ ಪಡೆಯಿರಿ. ವಿಭಿನ್ನ ವ್ಯವಹಾರ ಪ್ರಯತ್ನಿಸಿ ಬಾಲಕ ಯಶಸ್ವಿಯಾಗಿದ್ದಾನೆ. ಬುದ್ದಿವಂತನಾದ ಬಾಲಕ ಸಮಾಜದ ತಿರುಳನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದಾನೆ. ಅವನು ಇದರಿಂದ ಹೆಚ್ಚು ಹಣಗಳಿಸುತ್ತಾನೆ’ ಎಂದು ವಿಡಿಯೊಗೆ ಅಡಿಬರಹ ನೀಡಲಾಗಿದೆ.</p><p>ಧಾರ್ಮಿಕ ನಂಬಿಕೆಯನ್ನು ಬಳಸಿಕೊಂಡು ಹೀಗೂ ಹಣ ಗಳಿಕೆ ಮಾಡಬಹುದು ಎಂಬುದನ್ನು ಬಾಲಕ ತೋರಿಸಿಕೊಟ್ಟಿದ್ದಾನೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ವಿಡಿಯೊ 50 ಸಾವಿರಕ್ಕೂ ಹೆಚ್ಚಿನ ವೀಕ್ಷಣೆ ಪಡೆದಿದೆ.</p><p>‘ಬೇಡಿಕೆ ಹೆಚ್ಚಾದ ತಕ್ಷಣ ಬೆಲೆ ಹೆಚ್ಚಾಗುತ್ತದೆ. ಭವಿಷ್ಯದತ್ತ ಗಮನ ಹರಿಸುತ್ತಿರುವ ಬಾಲಕನು ಭಾರತದಲ್ಲಿ ಬದುಕುಳಿಯುವ ತಂತ್ರವನ್ನು ಕರಗತ ಮಾಡಿಕೊಂಡಿದ್ದಾನೆ’ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ.</p><p>ಕೆಲವರು ‘ಅಧ್ಯಾತ್ಮಿಕ ನಾಯಕ’, ‘ಭವಿಷ್ಯದ ಬಾಬಾಗಿರಿಯ ಅಭ್ಯಾಸ, ಇವನು ದೇವರ ಸಂದೇಶವಾಹಕ‘ ಎಂದು ಕಮೆಂಟ್ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದಾಗ ದೇವರ ಆಶೀರ್ವಾದ ಪಡೆಯುವುದು ಸಹಜ. ಆದರೆ ನೀವು ದೇವರ ಆಶೀರ್ವಾದವನ್ನು ಹಣಕ್ಕಾಗಿ ಮಾರಾಟ ಮಾಡುವುದನ್ನು ಎಂದಾದರೂ ನೋಡಿದ್ದಿರಾ? ₹10ಕ್ಕೆ ದೇವರ ಆಶೀರ್ವಾದವನ್ನು ಮಾರಾಟ ಮಾಡುತ್ತಿರುವ ಬಾಲಕನ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. </p><p>ವಿಡಿಯೊದಲ್ಲಿ ಬಾಲಕನು ಒಂದು ಕಟ್ಟೆಯ ಮೇಲೆ ಶಿವಲಿಂಗವನ್ನು ಇಟ್ಟುಕೊಂಡಿದ್ದಾನೆ. ಅವನ ಬಳಿ ಬಂದ ಮಹಿಳೆಯರು ಬಾಲಕನಿಗೆ ₹10 ನೀಡಿ ಶಿವಲಿಂಗವನ್ನು ಮುಟ್ಟುತ್ತಾರೆ. ಆಗ ಬಾಲಕ ತಾನೂ ಲಿಂಗವನ್ನು ಮುಟ್ಟಿ ಮಹಿಳೆಯರ ತಲೆ ಮೇಲೆ ಕೈ ಇಟ್ಟಿ ದೇವರ ಪರವಾಗಿ ತಾನೇ ಆಶೀರ್ವಾದ ಮಾಡುತ್ತಾನೆ.</p>.ಗಂಗಾ ನದಿ ನೀರು ಕಲುಷಿತ; ವಿಡಿಯೊ ಹಂಚಿಕೊಂಡ ಬ್ರಿಟಿಷ್ ಜೀವಶಾಸ್ತ್ರಜ್ಞ.<p>‘₹10 ಕೊಡಿ, ಆಶೀರ್ವಾದ ಪಡೆಯಿರಿ. ವಿಭಿನ್ನ ವ್ಯವಹಾರ ಪ್ರಯತ್ನಿಸಿ ಬಾಲಕ ಯಶಸ್ವಿಯಾಗಿದ್ದಾನೆ. ಬುದ್ದಿವಂತನಾದ ಬಾಲಕ ಸಮಾಜದ ತಿರುಳನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದಾನೆ. ಅವನು ಇದರಿಂದ ಹೆಚ್ಚು ಹಣಗಳಿಸುತ್ತಾನೆ’ ಎಂದು ವಿಡಿಯೊಗೆ ಅಡಿಬರಹ ನೀಡಲಾಗಿದೆ.</p><p>ಧಾರ್ಮಿಕ ನಂಬಿಕೆಯನ್ನು ಬಳಸಿಕೊಂಡು ಹೀಗೂ ಹಣ ಗಳಿಕೆ ಮಾಡಬಹುದು ಎಂಬುದನ್ನು ಬಾಲಕ ತೋರಿಸಿಕೊಟ್ಟಿದ್ದಾನೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ವಿಡಿಯೊ 50 ಸಾವಿರಕ್ಕೂ ಹೆಚ್ಚಿನ ವೀಕ್ಷಣೆ ಪಡೆದಿದೆ.</p><p>‘ಬೇಡಿಕೆ ಹೆಚ್ಚಾದ ತಕ್ಷಣ ಬೆಲೆ ಹೆಚ್ಚಾಗುತ್ತದೆ. ಭವಿಷ್ಯದತ್ತ ಗಮನ ಹರಿಸುತ್ತಿರುವ ಬಾಲಕನು ಭಾರತದಲ್ಲಿ ಬದುಕುಳಿಯುವ ತಂತ್ರವನ್ನು ಕರಗತ ಮಾಡಿಕೊಂಡಿದ್ದಾನೆ’ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ.</p><p>ಕೆಲವರು ‘ಅಧ್ಯಾತ್ಮಿಕ ನಾಯಕ’, ‘ಭವಿಷ್ಯದ ಬಾಬಾಗಿರಿಯ ಅಭ್ಯಾಸ, ಇವನು ದೇವರ ಸಂದೇಶವಾಹಕ‘ ಎಂದು ಕಮೆಂಟ್ ಮಾಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>