<p><strong>ಬೆಂಗಳೂರು:</strong> ಇತ್ತೀಚೆಗೆ ಇನ್ಸ್ಟಾಗ್ರಾಂನ ರೀಲ್ಸ್, ಯೂಟ್ಯೂಬ್ ಶಾರ್ಟ್ ವಿಡಿಯೊ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ‘ಈ ಸುಂದರನ ಸನ್ಯಾಸಿ ಮಾಡಬಹುದೇ’ ಎಂಬ ಹಾಡು ಸಕತ್ ವೈರಲ್ ಆಗುತ್ತಿದೆ.</p><p>ಅನೇಕರು ಈ ಹಾಡಿನ ತುಣಕನ್ನು ಇಟ್ಟುಕೊಂಡೇ ಶಾರ್ಟ್ ವಿಡಿಯೊಗಳನ್ನು ರಚಿಸುತ್ತಿದ್ದಾರೆ. ಆದರೆ, ಆ ಹಾಡಿನ ಮೂಲ ಯಾವುದು? ಯಾರು ಹಾಡಿದ್ದು? ಪೂರ್ಣ ಹಾಡು ಎಲ್ಲಿದೆ? ಎಂಬುದು ಬಹುತೇಕರಿಗೆ ಗೊತ್ತಿಲ್ಲ.</p><p>ಈ ಹಾಡನ್ನು ಖ್ಯಾತ ಜಾನಪದ ಗಾಯಕ ಮಳವಳ್ಳಿ ಮಹದೇವಸ್ವಾಮಿ ಹಾಡಿದ್ದಾರೆ. ಇವರು ಮಂಡ್ಯ ಮೂಲದವರು.</p>.<p>ಝೇಂಕಾರ್ ಮ್ಯೂಸಿಕ್ಗಾಗಿ ಅವರು ‘ಅರ್ಜುನನ ಜೋಗಿ ಪದಗಳು’ ಎಂಬ ಆಲ್ಬಂಗೆ ಈ ಜಾನಪದ ಗೀತೆಗಳನ್ನು ಹಾಡಿದ್ದಾರೆ. ಅದರಲ್ಲಿನ ಮೂರನೇ ಭಾಗದಲ್ಲಿ ‘ಅನ್ಯಾಯಕಾರಿ ಬ್ರಹ್ಮ.. ಈ ಸುಂದರನ ಸನ್ಯಾಸಿ ಮಾಡಬಹುದೇ’ ಎಂಬ ಹಾಡು ಇದೀಗ ವೈರಲ್ ಆಗಿದೆ.</p><p>ಮಹದೇವಸ್ವಾಮಿ ಅವರು ಅನೇಕ ಜಾನಪದ ಗೀತೆಗಳನ್ನು ಹಾಡಿದ್ದಾರೆ. ಅದರಲ್ಲಿ ‘ಮಹದೇಶ್ವರ ದಯ ಬಾರದೇ’ ಗೀತೆ ಹೆಚ್ಚು ಪ್ರಸಿದ್ದಿ ತಂದು ಕೊಟ್ಟಿದೆ.</p>.<p>ಮಳವಳ್ಳಿ ಮಹದೇವಸ್ವಾಮಿ ಅವರ ಸಂದರ್ಶನ ನೋಡಲು ಇಲ್ಲಿ ಕ್ಲಿಕ್ಕಿಸಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಇತ್ತೀಚೆಗೆ ಇನ್ಸ್ಟಾಗ್ರಾಂನ ರೀಲ್ಸ್, ಯೂಟ್ಯೂಬ್ ಶಾರ್ಟ್ ವಿಡಿಯೊ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣಗಳಲ್ಲಿ ‘ಈ ಸುಂದರನ ಸನ್ಯಾಸಿ ಮಾಡಬಹುದೇ’ ಎಂಬ ಹಾಡು ಸಕತ್ ವೈರಲ್ ಆಗುತ್ತಿದೆ.</p><p>ಅನೇಕರು ಈ ಹಾಡಿನ ತುಣಕನ್ನು ಇಟ್ಟುಕೊಂಡೇ ಶಾರ್ಟ್ ವಿಡಿಯೊಗಳನ್ನು ರಚಿಸುತ್ತಿದ್ದಾರೆ. ಆದರೆ, ಆ ಹಾಡಿನ ಮೂಲ ಯಾವುದು? ಯಾರು ಹಾಡಿದ್ದು? ಪೂರ್ಣ ಹಾಡು ಎಲ್ಲಿದೆ? ಎಂಬುದು ಬಹುತೇಕರಿಗೆ ಗೊತ್ತಿಲ್ಲ.</p><p>ಈ ಹಾಡನ್ನು ಖ್ಯಾತ ಜಾನಪದ ಗಾಯಕ ಮಳವಳ್ಳಿ ಮಹದೇವಸ್ವಾಮಿ ಹಾಡಿದ್ದಾರೆ. ಇವರು ಮಂಡ್ಯ ಮೂಲದವರು.</p>.<p>ಝೇಂಕಾರ್ ಮ್ಯೂಸಿಕ್ಗಾಗಿ ಅವರು ‘ಅರ್ಜುನನ ಜೋಗಿ ಪದಗಳು’ ಎಂಬ ಆಲ್ಬಂಗೆ ಈ ಜಾನಪದ ಗೀತೆಗಳನ್ನು ಹಾಡಿದ್ದಾರೆ. ಅದರಲ್ಲಿನ ಮೂರನೇ ಭಾಗದಲ್ಲಿ ‘ಅನ್ಯಾಯಕಾರಿ ಬ್ರಹ್ಮ.. ಈ ಸುಂದರನ ಸನ್ಯಾಸಿ ಮಾಡಬಹುದೇ’ ಎಂಬ ಹಾಡು ಇದೀಗ ವೈರಲ್ ಆಗಿದೆ.</p><p>ಮಹದೇವಸ್ವಾಮಿ ಅವರು ಅನೇಕ ಜಾನಪದ ಗೀತೆಗಳನ್ನು ಹಾಡಿದ್ದಾರೆ. ಅದರಲ್ಲಿ ‘ಮಹದೇಶ್ವರ ದಯ ಬಾರದೇ’ ಗೀತೆ ಹೆಚ್ಚು ಪ್ರಸಿದ್ದಿ ತಂದು ಕೊಟ್ಟಿದೆ.</p>.<p>ಮಳವಳ್ಳಿ ಮಹದೇವಸ್ವಾಮಿ ಅವರ ಸಂದರ್ಶನ ನೋಡಲು ಇಲ್ಲಿ ಕ್ಲಿಕ್ಕಿಸಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>