<p><strong>ಕೋಲ್ಕತ್ತ</strong>: ಟಿಎಂಸಿಯ ವಿದ್ಯಾರ್ಥಿ ಪರಿಷತ್ ಘಟಕದ ಕೆಲ ವಿದ್ಯಾರ್ಥಿ ನಾಯಕರು ಕಾಲೇಜು ಒಂದರಲ್ಲಿ ಮದ್ಯ ಸೇವಿಸಿ ಪಾರ್ಟಿ ಮಾಡಿರುವ ಘಟನೆ ನಡೆದಿದೆ.</p><p>ಹೌರಾ ಜಿಲ್ಲೆಯ ನರಸಿಂಹ ದತ್ತ ಕಾಲೇಜಿನಲ್ಲಿ ವಿದ್ಯಾರ್ಥಿ ನಾಯಕರು ಈ ದುಂಡಾವರ್ತನೆ ತೋರಿದ್ದಾರೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಘಟಕ ಎಕ್ಸ್ನಲ್ಲಿ ವಿಡಿಯೊ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದೆ.</p><p>ಟಿಎಂಸಿಯ ವಿದ್ಯಾರ್ಥಿ ಪರಿಷತ್ ರಾಜ್ಯ ಘಟಕದ ಉಪಾಧ್ಯಕ್ಷ ಸೌವಿಕ್ ರಾಯ್ ಅವರು ಈ ವಿಡಿಯೊದಲ್ಲಿರುವುದು ವಿವಾದ ಹುಟ್ಟಿಸಿದೆ. ಇಂಟರ್ನೆಟ್ನಲ್ಲಿ ವಿಡಿಯೊ ಸಾಕಷ್ಟು ಹರಿದಾಡುತ್ತಿದೆ.</p><p>ಸೌವಿಕ್ ರಾಯ್ ಸೇರಿದಂತೆ ಕೆಲವರು ಕೆಎಫ್ ಬಿಯರ್ ಬಾಟಲ್ ಹಿಡಿದುಕೊಂಡು ಮದ್ಯ ಸೇವಿಸುತ್ತಿರುವುದು ವಿಡಿಯೊದಲ್ಲಿ ಕಾಣಿಸುತ್ತದೆ.</p><p>ಆದರೆ, ಸೌವಿಕ್ ರಾಯ್ ಆರೋಪವನ್ನು ಅಲ್ಲಗಳೆದಿದ್ದು, ಇದನ್ನು ತಿರುಚಲಾಗಿದೆ. ವಿಡಿಯೊದಲ್ಲಿರುವುದು ನಾನಲ್ಲ ಎಂದಿದ್ದಾರೆ. ಅದಾಗ್ಯೂ ಟಿಎಂಸಿ ಕೇಂದ್ರ ಕಚೇರಿಯಿಂದ ಕಾರಣ ಕೇಳಿ ಸೌವಿಕ್ ರಾಯ್ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಪಿಟಿಐಗೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲ್ಕತ್ತ</strong>: ಟಿಎಂಸಿಯ ವಿದ್ಯಾರ್ಥಿ ಪರಿಷತ್ ಘಟಕದ ಕೆಲ ವಿದ್ಯಾರ್ಥಿ ನಾಯಕರು ಕಾಲೇಜು ಒಂದರಲ್ಲಿ ಮದ್ಯ ಸೇವಿಸಿ ಪಾರ್ಟಿ ಮಾಡಿರುವ ಘಟನೆ ನಡೆದಿದೆ.</p><p>ಹೌರಾ ಜಿಲ್ಲೆಯ ನರಸಿಂಹ ದತ್ತ ಕಾಲೇಜಿನಲ್ಲಿ ವಿದ್ಯಾರ್ಥಿ ನಾಯಕರು ಈ ದುಂಡಾವರ್ತನೆ ತೋರಿದ್ದಾರೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಘಟಕ ಎಕ್ಸ್ನಲ್ಲಿ ವಿಡಿಯೊ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದೆ.</p><p>ಟಿಎಂಸಿಯ ವಿದ್ಯಾರ್ಥಿ ಪರಿಷತ್ ರಾಜ್ಯ ಘಟಕದ ಉಪಾಧ್ಯಕ್ಷ ಸೌವಿಕ್ ರಾಯ್ ಅವರು ಈ ವಿಡಿಯೊದಲ್ಲಿರುವುದು ವಿವಾದ ಹುಟ್ಟಿಸಿದೆ. ಇಂಟರ್ನೆಟ್ನಲ್ಲಿ ವಿಡಿಯೊ ಸಾಕಷ್ಟು ಹರಿದಾಡುತ್ತಿದೆ.</p><p>ಸೌವಿಕ್ ರಾಯ್ ಸೇರಿದಂತೆ ಕೆಲವರು ಕೆಎಫ್ ಬಿಯರ್ ಬಾಟಲ್ ಹಿಡಿದುಕೊಂಡು ಮದ್ಯ ಸೇವಿಸುತ್ತಿರುವುದು ವಿಡಿಯೊದಲ್ಲಿ ಕಾಣಿಸುತ್ತದೆ.</p><p>ಆದರೆ, ಸೌವಿಕ್ ರಾಯ್ ಆರೋಪವನ್ನು ಅಲ್ಲಗಳೆದಿದ್ದು, ಇದನ್ನು ತಿರುಚಲಾಗಿದೆ. ವಿಡಿಯೊದಲ್ಲಿರುವುದು ನಾನಲ್ಲ ಎಂದಿದ್ದಾರೆ. ಅದಾಗ್ಯೂ ಟಿಎಂಸಿ ಕೇಂದ್ರ ಕಚೇರಿಯಿಂದ ಕಾರಣ ಕೇಳಿ ಸೌವಿಕ್ ರಾಯ್ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಪಿಟಿಐಗೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>