ರಾಯಚೂರಿನಲ್ಲಿ ಮುಂಗಾರು ಮಳೆ ಬಿರುಸುಗೊಂಡಿದೆ. ನಗರದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ವಾಹನ ಸವಾರರಿಗೂ ತೊಂದರೆ ಎದುರಾಗಿತ್ತು.
ಜೂನ್ ಕೊನೆಯವರೆಗೂ ಜಿಲ್ಲೆಯಲ್ಲಿ ಮುಂಗಾರು ಮಳೆ ಸಮರ್ಪಕವಾಗಿ ಸುರಿಯದ ಕಾರಣ, ಭತ್ತದ ಸಸಿ ಮಾಡುವುದು ಸೇರಿದಂತೆ ತೊಗರಿ, ಹತ್ತಿ ಬಿತ್ತನೆಗೂ ಆತಂಕ ಎದುರಾಗಿತ್ತು.
ಜುಲೈ ಆರಂಭವಾಗುತ್ತಿದ್ದಂತೆ ಭೂಮಿಯಲ್ಲಿ ತೇವಾಂಶ ಹೆಚ್ಚಳವಾಗುವುದಕ್ಕೆ ಪೂರಕವಾಗಿ ಮಳೆ ಸುರಿದಿದ್ದರಿಂದ ಖುಷ್ಕಿ ಆಶ್ರಿತ ರೈತರು ಬಿತ್ತನೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬಿತ್ತನೆಯು ಇದುವರೆಗೂ ಶೇ 48 ರಷ್ಟು ಪೂರ್ಣವಾಗಿದೆ.