ಯಾದಗಿರಿ: ನಗರ ಸೇರಿದಂತೆ ತಾಲ್ಲೂಕಿನಲ್ಲಿ ಸೋಮವಾರ ಸಂಜೆ ಸುರಿದ ಗುಡುಗು, ಸಿಡಿಲಿನ ಸಹಿತ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಸುಮಾರು 10ರಿಂದ 15 ನಿಮಿಷ ಜೋರಾದ ಮಳೆಗೆ ರಸ್ತೆ ಮೇಲೆ ನೀರು ನಿಂತು ವಾಹನ ಸವಾರರು ಪರದಾಡಿದರು. ನಗರದ ಶುಭಾಷ ವೃತ್ತದ ಬಳಿ ಉಳ್ಳೆಸೂಗುರ ಕಾಂಪ್ಲೆಕ್ಸ್ ಬಳಿ ನಿರ್ಮಾಣ ಹಂತದ ಆವರಣ ಗೋಡೆ ಬಿದ್ದು, 7–8 ಬೈಕ್ಗಳು ಜಖಂ ಆಗಿವೆ. ಗಾಳಿ, ಮಳೆಗೆ ಕೆಲವೆಡೆ ಗಿಡಗಳು ಕುಸಿದು ಬಿದ್ದಿವೆ.