ಸೇನೆಯಲ್ಲಿ ಪಳಗಿರುವ ಕ್ಯಾಪ್ಟನ್ ಸಂತೋಷ್ ಕುಮಾರ್ ಬೆಂಗಳೂರಿನ ಆನೇಕಲ್ ತಾಲ್ಲೂಕಿನಲ್ಲಿ ರಾಜಕಾಲುವೆಗಳ ತೆರವಿನಲ್ಲಿ ಜಾಣ್ಮೆಯ ಅಸ್ತ್ರ ಬಳಸಿ ಮತ್ತೆ ಜಲ ಹರಿವು ಕಾಣುವಂತೆ ಮಾಡಿದ್ದಾರೆ. ಚಂಪಕಾ ನದಿಗೆ ಮರುಜನ್ಮ ನೀಡುತ್ತಿದ್ದಾರೆ. ಅಷ್ಟೇ ಅಲ್ಲ, ದೇಶಕ್ಕಾಗಿ ಮಡಿದ ಸೈನಿಕ ಹೆಸರಲ್ಲಿ ಫುಡ್ ಫಾರೆಸ್ಟ್ ಸೃಷ್ಟಿಸುತ್ತಿದ್ದಾರೆ. ಈ ಮೂಲಕ ಪ್ರಾಣಿ–ಪಕ್ಷಿಗಳಿಗೆ ಆಹಾರ ಸಿಗುವಂತೆ ಮಾಡುತ್ತಿದ್ದಾರೆ.