ಯಾದಗಿರಿ: ‘ನನಗೆ ಸುಮಾರು 15–20 ವರ್ಷ ಇರುವಾಗಲಿಂದ ತಾಯಿ, ಅಕ್ಕಪಕ್ಕದ ಮನೆಯವರನ್ನು ನೋಡಿ ಕೌದಿ ಹೊಲಿಯುವುದನ್ನು ಕಲಿತೆ. ಇದೇ ನನಗೆ ರಾಜ್ಯೋತ್ಸವ ಪ್ರಶಸ್ತಿ ತಂದುಕೊಟ್ಟಿದೆ’.
ಹೀಗೆ ಹೇಳುವ ಶರಣಮ್ಮ ಮಲ್ಲಪ್ಪ ಅವರು ಇಲ್ಲಿನ ಅಂಬೇಡ್ಕರ್ ನಗರದ ನಿವಾಸಿ. ಮನೆಯಲ್ಲಿ ತಾಯಿಯಿಂದ ಕೌದಿ ಹೊಲಿಯುವುದು ಕಲಿತ ಅವರು ಮದುವೆಯಾದ ಬಳಿಕ ಪತಿಯ ನೆರವಿನೊಂದಿಗೆ ಚಪ್ಪಲಿ ಹೊಲಿಯುವುದು ಕಲಿತರು.