<p><strong>ಜಿನಿವಾ:</strong> ‘ಸೂಕ್ತ ಸಮಯದಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳದೇ ಇರುವುದು ಮತ್ತು ರಾಷ್ಟ್ರ-ರಾಷ್ಟ್ರಗಳ ಮಧ್ಯೆ ಸಮನ್ವಯದ ಕೊರತೆಯಿಂದ ಕೋವಿಡ್ ಮಹಾದುರಂತವಾಗಿ ಬೆಳೆದಿದೆ. ಅಗತ್ಯ ಕ್ರಮ ತೆಗೆದುಕೊಂಡಿದ್ದರೆ ಮತ್ತು ಸಮನ್ವಯ ಸಾಧಿಸಿದ್ದರೆ ಕೋವಿಡ್ ಮಹಾದುರಂತವಾಗುವುದನ್ನು ತಡೆಯಬಹುದಿತ್ತು’ ಎಂದು ಜಾಗತಿಕ ಅಧ್ಯಯನ ವರದಿಯೊಂದು ಹೇಳಿದೆ.</p>.<p>ಇಂಡಿಪೆಂಡೆಂಟ್ ಪ್ಯಾನೆಲ್ ಫಾರ್ ಪ್ಯಾಂಡೆಮಿಕ್ ಪ್ರಿಪೇರ್ಡ್ನೆಸ್ ಅಂಡ್ ರೆಸ್ಪಾನ್ಸ್ (ಐಪಿಪಿಪಿಆರ್) ತಂಡವು ಸಿದ್ಧಪಡಿಸಿರುವ ‘ಕೋವಿಡ್-19: ಇದೇ ಕೊನೆಯ ಪಿಡುಗಾಗಲಿ’ ಎಂಬ ವರದಿಯಲ್ಲಿ ಈ ಮಾಹಿತಿ ಇದೆ. ಈ ವರದಿಯನ್ನು ಸಿದ್ಧಪಡಿಸುವಂತೆ ವಿಶ್ವ ಆರೋಗ್ಯ ಸಂಸ್ಥೆಯು ಐಪಿಪಿಪಿಆರ್ ಅನ್ನು ಕೇಳಿಕೊಂಡಿತ್ತು. ಈಗ ಈ ವರದಿ ಬಹಿರಂಗವಾಗಿದೆ.</p>.<p>‘ಕೆಲವು ಆತುರದ ನಿರ್ಧಾರಗಳು, ತ್ವರಿತ ಕ್ರಮಗಳು ಮತ್ತು ವಿಳಂಬ, ನಿರ್ಲಕ್ಷ್ಯ ಮತ್ತು ವೈಜ್ಞಾನಿಕ ಮಾಹಿತಿಯ ನಿರಾಕರಣೆ ಎಲ್ಲವೂ ಸೇರಿ ‘ವಿಷದ ಮಿಶ್ರಣ’ ಸಿದ್ಧವಾಯಿತು. ಕೋವಿಡ್-19 ಒಂದು ಮಹಾದುರಂತವಾಗಿ ಬದಲಾಯಿತು. ಕೋವಿಡ್ ಕಾಣಿಸಿಕೊಂಡ ಪ್ರತಿಹಂತದಲ್ಲೂ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಕೋವಿಡ್ ಒಂದು ಮಹಾದುರಂತವಾಗಿ ಬದಲಾಗುವಲ್ಲಿ ಯಾರೋ ಒಬ್ಬರದ್ದು ಮಾತ್ರ ತಪ್ಪು ಇದೆ ಎಂದು ಬೊಟ್ಟುಮಾಡಲಾಗದು. ಎಲ್ಲೆಡೆಯೂ ತಪ್ಪಾಗಿದೆ. ಈ ತಪ್ಪುಗಳ ಕಾರಣದಿಂದ ವಿಶ್ವದಾದ್ಯಂತ 33 ಲಕ್ಷಕ್ಕೂ ಹೆಚ್ಚು ಜನರು ಸತ್ತಿದ್ದಾರೆ. ಜಾಗತಿಕ ಆರ್ಥಿಕ ವ್ಯವಸ್ಥೆ ಕುಸಿದುಬಿದ್ದಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.</p>.<p>‘ಕೋವಿಡ್ ಒಂದು ಜಾಗತಿಕ ಮಹಾಪಿಡುಗಾಗಬಹುದು ಎಂಬ ಎಚ್ಚರಿಕೆ ಆರಂಭದಲ್ಲೇ ಲಭ್ಯವಾಗಿತ್ತು. ವಿಜ್ಞಾನಿಗಳು ಮತ್ತು ತಜ್ಞರೂ ಕಾಲಕಾಲಕ್ಕೆ ಈ ಎಚ್ಚರಿಕೆಯನ್ನು ನೀಡುತ್ತಲೇ ಬಂದಿದ್ದಾರೆ. ಆದರೆ ಅವೆಲ್ಲವನ್ನೂ ಕಡೆಗಣಿಸಲಾಯಿತು. 2019ರ ಡಿಸೆಂಬರ್ನಲ್ಲಿಯೇ ವುಹಾನ್ನಲ್ಲಿ ಸೋಂಕು ಕಾಣಿಸಿಕೊಂಡರೂ, ಅಗತ್ಯ ಕ್ರಮವನ್ನು ತೆಗೆದುಕೊಳ್ಳುವಲ್ಲಿ ವಿಳಂಬ ಮಾಡಲಾಯಿತು. ಸೋಂಕು ಜಾಗತಿಕವಾಗಿ ಹರಡಿದ್ದು, ಫೆಬ್ರುವರಿಯಲ್ಲಿ. ಸೋಂಕು ಜಾಗತಿಕವಾಗಿ ಹರಡುವುದನ್ನು ತಡೆಯಲು ಫೆಬ್ರುವರಿಯಲ್ಲಿ ಅವಕಾಶವಿತ್ತು.ಇಲ್ಲಿ ದೊರೆತಿದ್ದ ಎಚ್ಚರಿಕೆಯನ್ನು ರಾಷ್ಟ್ರಗಳು ಕಡೆಗಣಿಸಿದವು. ಈ ಅವಕಾಶವನ್ನು ಕಳೆದುಕೊಂಡವು’ ಎಂದು ವರದಿಯಲ್ಲಿ ವಿವರಿಸಲಾಗಿದೆ.</p>.<p><strong>ಪಿಡುಗು ತೀವ್ರವಾಗಲು ಕಾರಣಗಳು</strong></p>.<p>* ಸೋಂಕು ತಡೆಗಟ್ಟಲು ಚೀನಾ ವಿಳಂಬ ಮಾಡಿತು. ಸೋಂಕು ವ್ಯಾಪಕವಾಗಿ ಹರಡುವವರೆಗೂ ಕಾಯಿತು</p>.<p>* ಕೋವಿಡ್ ಒಂದು ಜಾಗತಿಕ ಪಿಡುಗು ಎಂದು ಘೋಷಿಸುವಲ್ಲಿ ವಿಶ್ವ ಆರೋಗ್ಯ ಸಂಸ್ಥೆ ವಿಳಂಬ ಮಾಡಿತು. ಅಗತ್ಯ ಕ್ರಮಗಳನ್ನು ಘೋಷಿಸುವಲ್ಲಿಯೂ ವಿಳಂಬ ಮಾಡಿತು. ಸೋಂಕು ವಿಶ್ವದಾದ್ಯಂತ ಹರಡಿದ ನಂತರ ಕ್ರಮಕ್ಕೆ ಮುಂದಾಯಿತು</p>.<p>* ವಿಶ್ವ ಆರೋಗ್ಯ ಸಂಸ್ಥೆಯು ತಡವಾಗಿಯಾದರೂ ನೀಡಿದ ಎಚ್ಚರಿಕೆಯನ್ನು ಬಹುತೇಕ ರಾಷ್ಟ್ರಗಳು ಕಡೆಗಣಿಸಿದವು. ಎಲ್ಲಾ ರಾಷ್ಟ್ರಗಳೂ ತಮ್ಮಲ್ಲಿ ಸೋಂಕು ತೀವ್ರವಾದಾಗ ಮಾತ್ರ ಅದನ್ನು ತಡೆಯಲು ಮುಂದಾದವು.</p>.<p>* ಕೋವಿಡ್ ನಿಯಂತ್ರಣಕ್ಕೆ ತೆಗೆದುಕೊಂಡಿದ್ದ ಕ್ರಮಗಳನ್ನು, ಹಲವು ರಾಷ್ಟ್ರಗಳು ತ್ವರಿತವಾಗಿ ಹಿಂಪಡೆದವು. ಕೋವಿಡ್ ನಿರ್ನಾಮವಾಗಿದೆಯೆಂಬಂತೆ ವರ್ತಿಸಿದವು. ಈ ಆತುರದ ನಿರ್ಧಾರವು ಈಗಿನ ಮಹಾದುರಂತಕ್ಕೆ ಕಾರಣವಾಗಿವೆ.</p>.<p><strong>ಶಿಫಾರಸುಗಳು</strong></p>.<p>* ವಿಶ್ವದ ಶ್ರೀಮಂತ ರಾಷ್ಟ್ರಗಳು ಕೋವಿಡ್ ಲಸಿಕೆ ಕಾರ್ಯಕ್ರಮ ನಡೆಸಲು, ವಿಶ್ವದ 92 ಬಡ ರಾಷ್ಟ್ರಗಳಿಗೆ ಆರ್ಥಿಕ ನೆರವು ಒದಗಿಸಬೇಕು</p>.<p>* ಇದೇ ಸೆಪ್ಟೆಂಬರ್ ಅಂತ್ಯದ ವೇಳೆಗೆ 92 ಬಡ ರಾಷ್ಟ್ರಗಳಿಗೆ 100 ಕೋಟಿ ಡೋಸ್ ಲಸಿಕೆ ಪೂರೈಸಬೇಕು. 2022ರ ಮಧ್ಯಂತರದ ವೇಳೆಗೆ ಈ ರಾಷ್ಟ್ರಗಳಿಗೆ 200 ಕೋಟಿಗಿಂತಲೂ ಹೆಚ್ಚು ಡೋಸ್ ಲಸಿಕೆಯನ್ನು ಪೂರೈಸಬೇಕು</p>.<p>* ಕೋವಿಡ್ ಪತ್ತೆ, ಚಿಕಿತ್ಸೆ ಮತ್ತು ಲಸಿಕೆ ಕಾರ್ಯಕ್ರಮಗಳಗೆ<br />ತಗಲುವ ವೆಚ್ಚದಲ್ಲಿ ಶೇ 60ರಷ್ಟನ್ನು ಜಿ7 ರಾಷ್ಟ್ರಗಳು ಭರಿಸಬೇಕು. ಉಳಿದ ಶೇ 40ರಷ್ಟು ವೆಚ್ಚವನ್ನು ಜಿ20 ರಾಷ್ಟ್ರಗಳು ಪೂರೈಸಬೇಕು</p>.<p>* ಇದಕ್ಕೆ ಸಂಬಂಧಿಸಿದ ಎಲ್ಲಾ ಕ್ರಮಗಳನ್ನು ವಿಶ್ವ ಆರೋಗ್ಯ ಸಂಸ್ಥೆ ತಕ್ಷಣವೇ ತೆಗೆದುಕೊಳ್ಳಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಿನಿವಾ:</strong> ‘ಸೂಕ್ತ ಸಮಯದಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳದೇ ಇರುವುದು ಮತ್ತು ರಾಷ್ಟ್ರ-ರಾಷ್ಟ್ರಗಳ ಮಧ್ಯೆ ಸಮನ್ವಯದ ಕೊರತೆಯಿಂದ ಕೋವಿಡ್ ಮಹಾದುರಂತವಾಗಿ ಬೆಳೆದಿದೆ. ಅಗತ್ಯ ಕ್ರಮ ತೆಗೆದುಕೊಂಡಿದ್ದರೆ ಮತ್ತು ಸಮನ್ವಯ ಸಾಧಿಸಿದ್ದರೆ ಕೋವಿಡ್ ಮಹಾದುರಂತವಾಗುವುದನ್ನು ತಡೆಯಬಹುದಿತ್ತು’ ಎಂದು ಜಾಗತಿಕ ಅಧ್ಯಯನ ವರದಿಯೊಂದು ಹೇಳಿದೆ.</p>.<p>ಇಂಡಿಪೆಂಡೆಂಟ್ ಪ್ಯಾನೆಲ್ ಫಾರ್ ಪ್ಯಾಂಡೆಮಿಕ್ ಪ್ರಿಪೇರ್ಡ್ನೆಸ್ ಅಂಡ್ ರೆಸ್ಪಾನ್ಸ್ (ಐಪಿಪಿಪಿಆರ್) ತಂಡವು ಸಿದ್ಧಪಡಿಸಿರುವ ‘ಕೋವಿಡ್-19: ಇದೇ ಕೊನೆಯ ಪಿಡುಗಾಗಲಿ’ ಎಂಬ ವರದಿಯಲ್ಲಿ ಈ ಮಾಹಿತಿ ಇದೆ. ಈ ವರದಿಯನ್ನು ಸಿದ್ಧಪಡಿಸುವಂತೆ ವಿಶ್ವ ಆರೋಗ್ಯ ಸಂಸ್ಥೆಯು ಐಪಿಪಿಪಿಆರ್ ಅನ್ನು ಕೇಳಿಕೊಂಡಿತ್ತು. ಈಗ ಈ ವರದಿ ಬಹಿರಂಗವಾಗಿದೆ.</p>.<p>‘ಕೆಲವು ಆತುರದ ನಿರ್ಧಾರಗಳು, ತ್ವರಿತ ಕ್ರಮಗಳು ಮತ್ತು ವಿಳಂಬ, ನಿರ್ಲಕ್ಷ್ಯ ಮತ್ತು ವೈಜ್ಞಾನಿಕ ಮಾಹಿತಿಯ ನಿರಾಕರಣೆ ಎಲ್ಲವೂ ಸೇರಿ ‘ವಿಷದ ಮಿಶ್ರಣ’ ಸಿದ್ಧವಾಯಿತು. ಕೋವಿಡ್-19 ಒಂದು ಮಹಾದುರಂತವಾಗಿ ಬದಲಾಯಿತು. ಕೋವಿಡ್ ಕಾಣಿಸಿಕೊಂಡ ಪ್ರತಿಹಂತದಲ್ಲೂ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಕೋವಿಡ್ ಒಂದು ಮಹಾದುರಂತವಾಗಿ ಬದಲಾಗುವಲ್ಲಿ ಯಾರೋ ಒಬ್ಬರದ್ದು ಮಾತ್ರ ತಪ್ಪು ಇದೆ ಎಂದು ಬೊಟ್ಟುಮಾಡಲಾಗದು. ಎಲ್ಲೆಡೆಯೂ ತಪ್ಪಾಗಿದೆ. ಈ ತಪ್ಪುಗಳ ಕಾರಣದಿಂದ ವಿಶ್ವದಾದ್ಯಂತ 33 ಲಕ್ಷಕ್ಕೂ ಹೆಚ್ಚು ಜನರು ಸತ್ತಿದ್ದಾರೆ. ಜಾಗತಿಕ ಆರ್ಥಿಕ ವ್ಯವಸ್ಥೆ ಕುಸಿದುಬಿದ್ದಿದೆ’ ಎಂದು ವರದಿಯಲ್ಲಿ ಹೇಳಲಾಗಿದೆ.</p>.<p>‘ಕೋವಿಡ್ ಒಂದು ಜಾಗತಿಕ ಮಹಾಪಿಡುಗಾಗಬಹುದು ಎಂಬ ಎಚ್ಚರಿಕೆ ಆರಂಭದಲ್ಲೇ ಲಭ್ಯವಾಗಿತ್ತು. ವಿಜ್ಞಾನಿಗಳು ಮತ್ತು ತಜ್ಞರೂ ಕಾಲಕಾಲಕ್ಕೆ ಈ ಎಚ್ಚರಿಕೆಯನ್ನು ನೀಡುತ್ತಲೇ ಬಂದಿದ್ದಾರೆ. ಆದರೆ ಅವೆಲ್ಲವನ್ನೂ ಕಡೆಗಣಿಸಲಾಯಿತು. 2019ರ ಡಿಸೆಂಬರ್ನಲ್ಲಿಯೇ ವುಹಾನ್ನಲ್ಲಿ ಸೋಂಕು ಕಾಣಿಸಿಕೊಂಡರೂ, ಅಗತ್ಯ ಕ್ರಮವನ್ನು ತೆಗೆದುಕೊಳ್ಳುವಲ್ಲಿ ವಿಳಂಬ ಮಾಡಲಾಯಿತು. ಸೋಂಕು ಜಾಗತಿಕವಾಗಿ ಹರಡಿದ್ದು, ಫೆಬ್ರುವರಿಯಲ್ಲಿ. ಸೋಂಕು ಜಾಗತಿಕವಾಗಿ ಹರಡುವುದನ್ನು ತಡೆಯಲು ಫೆಬ್ರುವರಿಯಲ್ಲಿ ಅವಕಾಶವಿತ್ತು.ಇಲ್ಲಿ ದೊರೆತಿದ್ದ ಎಚ್ಚರಿಕೆಯನ್ನು ರಾಷ್ಟ್ರಗಳು ಕಡೆಗಣಿಸಿದವು. ಈ ಅವಕಾಶವನ್ನು ಕಳೆದುಕೊಂಡವು’ ಎಂದು ವರದಿಯಲ್ಲಿ ವಿವರಿಸಲಾಗಿದೆ.</p>.<p><strong>ಪಿಡುಗು ತೀವ್ರವಾಗಲು ಕಾರಣಗಳು</strong></p>.<p>* ಸೋಂಕು ತಡೆಗಟ್ಟಲು ಚೀನಾ ವಿಳಂಬ ಮಾಡಿತು. ಸೋಂಕು ವ್ಯಾಪಕವಾಗಿ ಹರಡುವವರೆಗೂ ಕಾಯಿತು</p>.<p>* ಕೋವಿಡ್ ಒಂದು ಜಾಗತಿಕ ಪಿಡುಗು ಎಂದು ಘೋಷಿಸುವಲ್ಲಿ ವಿಶ್ವ ಆರೋಗ್ಯ ಸಂಸ್ಥೆ ವಿಳಂಬ ಮಾಡಿತು. ಅಗತ್ಯ ಕ್ರಮಗಳನ್ನು ಘೋಷಿಸುವಲ್ಲಿಯೂ ವಿಳಂಬ ಮಾಡಿತು. ಸೋಂಕು ವಿಶ್ವದಾದ್ಯಂತ ಹರಡಿದ ನಂತರ ಕ್ರಮಕ್ಕೆ ಮುಂದಾಯಿತು</p>.<p>* ವಿಶ್ವ ಆರೋಗ್ಯ ಸಂಸ್ಥೆಯು ತಡವಾಗಿಯಾದರೂ ನೀಡಿದ ಎಚ್ಚರಿಕೆಯನ್ನು ಬಹುತೇಕ ರಾಷ್ಟ್ರಗಳು ಕಡೆಗಣಿಸಿದವು. ಎಲ್ಲಾ ರಾಷ್ಟ್ರಗಳೂ ತಮ್ಮಲ್ಲಿ ಸೋಂಕು ತೀವ್ರವಾದಾಗ ಮಾತ್ರ ಅದನ್ನು ತಡೆಯಲು ಮುಂದಾದವು.</p>.<p>* ಕೋವಿಡ್ ನಿಯಂತ್ರಣಕ್ಕೆ ತೆಗೆದುಕೊಂಡಿದ್ದ ಕ್ರಮಗಳನ್ನು, ಹಲವು ರಾಷ್ಟ್ರಗಳು ತ್ವರಿತವಾಗಿ ಹಿಂಪಡೆದವು. ಕೋವಿಡ್ ನಿರ್ನಾಮವಾಗಿದೆಯೆಂಬಂತೆ ವರ್ತಿಸಿದವು. ಈ ಆತುರದ ನಿರ್ಧಾರವು ಈಗಿನ ಮಹಾದುರಂತಕ್ಕೆ ಕಾರಣವಾಗಿವೆ.</p>.<p><strong>ಶಿಫಾರಸುಗಳು</strong></p>.<p>* ವಿಶ್ವದ ಶ್ರೀಮಂತ ರಾಷ್ಟ್ರಗಳು ಕೋವಿಡ್ ಲಸಿಕೆ ಕಾರ್ಯಕ್ರಮ ನಡೆಸಲು, ವಿಶ್ವದ 92 ಬಡ ರಾಷ್ಟ್ರಗಳಿಗೆ ಆರ್ಥಿಕ ನೆರವು ಒದಗಿಸಬೇಕು</p>.<p>* ಇದೇ ಸೆಪ್ಟೆಂಬರ್ ಅಂತ್ಯದ ವೇಳೆಗೆ 92 ಬಡ ರಾಷ್ಟ್ರಗಳಿಗೆ 100 ಕೋಟಿ ಡೋಸ್ ಲಸಿಕೆ ಪೂರೈಸಬೇಕು. 2022ರ ಮಧ್ಯಂತರದ ವೇಳೆಗೆ ಈ ರಾಷ್ಟ್ರಗಳಿಗೆ 200 ಕೋಟಿಗಿಂತಲೂ ಹೆಚ್ಚು ಡೋಸ್ ಲಸಿಕೆಯನ್ನು ಪೂರೈಸಬೇಕು</p>.<p>* ಕೋವಿಡ್ ಪತ್ತೆ, ಚಿಕಿತ್ಸೆ ಮತ್ತು ಲಸಿಕೆ ಕಾರ್ಯಕ್ರಮಗಳಗೆ<br />ತಗಲುವ ವೆಚ್ಚದಲ್ಲಿ ಶೇ 60ರಷ್ಟನ್ನು ಜಿ7 ರಾಷ್ಟ್ರಗಳು ಭರಿಸಬೇಕು. ಉಳಿದ ಶೇ 40ರಷ್ಟು ವೆಚ್ಚವನ್ನು ಜಿ20 ರಾಷ್ಟ್ರಗಳು ಪೂರೈಸಬೇಕು</p>.<p>* ಇದಕ್ಕೆ ಸಂಬಂಧಿಸಿದ ಎಲ್ಲಾ ಕ್ರಮಗಳನ್ನು ವಿಶ್ವ ಆರೋಗ್ಯ ಸಂಸ್ಥೆ ತಕ್ಷಣವೇ ತೆಗೆದುಕೊಳ್ಳಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>