<p><strong>ಮಾಲೆ (ಮಾಲ್ಡೀವ್ಸ್):</strong> ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾದ ಪ್ರಾಬಲ್ಯಕ್ಕೆ ತಡೆ ಒಡ್ಡುವ ಕಾರ್ಯತಂತ್ರವನ್ನು ಜಾರಿ ಮಾಡಲು ಭಾರತವು ಸಜ್ಜಾಗಿದೆ. ಸೇತುವೆ ಮತ್ತು ಇತರ ಮೂಲಸೌಕರ್ಯ ನಿರ್ಮಾಣಕ್ಕಾಗಿಮಾಲ್ಡೀವ್ಸ್ಗೆ ಸುಮಾರು ₹3,750 ಕೋಟಿ ನೀಡುವುದಾಗಿ ಹೇಳಿದೆ.</p>.<p>ಅಬ್ದುಲ್ಲಾ ಯಮೀನ್ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಮಾಲ್ಡೀವ್ಸ್, ಚೀನಾದಿಂದ ಭಾರಿ ಪ್ರಮಾಣದ ಸಾಲ ಪಡೆದಿತ್ತು ಮತ್ತು ಮೂಲಸೌಕರ್ಯ ಯೋಜನೆಗಳ ಅನುಷ್ಠಾನದ ಹೊಣೆಯನ್ನು ಚೀನಾದ ಸಂಸ್ಥೆಗಳಿಗೆ ನೀಡಿತ್ತು.</p>.<p>ಚೀನಾದ ನಡೆಯು ಭಾರತ ಮತ್ತು ಪಶ್ಚಿಮದ ದೇಶಗಳ ಚಿಂತೆಗೆ ಕಾರಣವಾಗಿತ್ತು. ಏಷ್ಯಾ ಮತ್ತು ಅದರಾಚೆಗಿನ ದೇಶಗಳಿಗೂ ಆ ದೇಶಗಳು ಮರುಪಾವತಿ ಮಾಡಲು ಸಾಧ್ಯವಾಗದ ಪ್ರಮಾಣದ ಸಾಲ ನೀಡುವ ಮೂಲಕ ತನ್ನ ಪ್ರಾಬಲ್ಯ ಹೆಚ್ಚಿಸಲು ಚೀನಾ ಯತ್ನಿಸುತ್ತಿದೆ ಎಂಬುದು ಭಾರತವನ್ನು ಕಳವಳಕ್ಕೆ ಈಡು ಮಾಡಿತ್ತು.</p>.<p>ಮಾಲ್ಡೀವ್ಸ್ನಲ್ಲಿ ಈಗ ಹೊಸ ಸರ್ಕಾರ ಬಂದಿದೆ. ಹಾಗಾಗಿ ಭಾರತವು ತನ್ನ ಪ್ರಾಬಲ್ಯವನ್ನು ಮರುಸ್ಥಾಪಿಸಲು ಯತ್ನಿಸುತ್ತಿದೆ.</p>.<p>ಇಬ್ರಾಹಿಂ ಮೊಹಮ್ಮದ್ ಸಾಲಿಹ್ ಅವರು ಅಧ್ಯಕ್ಷರಾಗಿ ಅಧಿಕಾರಕ್ಕೆ ಬಂದ ಬಳಿಕ, ಹೊಸ ಹೂಡಿಕೆಯೂ ಸೇರಿ ಮಾಲ್ಡೀವ್ಸ್ಗೆ ಭಾರತ ನೀಡಲು ಉದ್ದೇಶಿಸಿರುವ ಮೊತ್ತವು ₹15 ಸಾವಿರ ಕೋಟಿಗೂ ಹೆಚ್ಚಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿದೆ.</p>.<p>ಪೂರ್ವ ಲಡಾಖ್ನಲ್ಲಿ ಭಾರತ–ಚೀನಾ ನಡುವಣ ಸಂಘರ್ಷವು ಪರಿಹಾರ ಕಾಣದ ಕಾರಣ ಭಾರತ ಸರ್ಕಾರವು ನೆರೆಯ ದೇಶಗಳಲ್ಲಿ ಪ್ರಾಬಲ್ಯ ವೃದ್ಧಿಸಲು ಮುಂದಾಗಿದೆ ಎನ್ನಲಾಗಿದೆ. ಶ್ರೀಲಂಕಾಕ್ಕೆ ಸುಮಾರು ₹3,000 ಕೋಟಿ ನೆರವು ನೀಡಲು ಭಾರತವು ಜುಲೈ 24ರಂದು ನಿರ್ಧರಿಸಿತ್ತು. ಜತೆಗೆ, ಭಾರತಕ್ಕೆ ಆ ದೇಶವು ಮರುಪಾವತಿ ಮಾಡಬೇಕಿರುವ ಸಾಲದ ಅವಧಿಯನ್ನು ಮುಂದೂಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.</p>.<p>ಯಮೀನ್ ಅವರು ಚೀನಾದತ್ತ ವಾಲಿದ ಪರಿಣಾಮವಾಗಿ ಭಾರತದ ಜತೆಗೆ ಮಾಲ್ಡೀವ್ಸ್ ಸಂಬಂಧ ಹದಗೆಟ್ಟಿತ್ತು. 2018ರ ನವೆಂಬರ್ನಲ್ಲಿ ಸಾಲಿಹ್ ಅವರು ಅಧ್ಯಕ್ಷರಾಗುವುದರೊಂದಿಗೆ ಭಾರತದ ಜತೆಗಿನ ಸಂಬಂಧಕ್ಕೆ ಪುನಶ್ಚೇತನ ದೊರೆತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಲೆ (ಮಾಲ್ಡೀವ್ಸ್):</strong> ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾದ ಪ್ರಾಬಲ್ಯಕ್ಕೆ ತಡೆ ಒಡ್ಡುವ ಕಾರ್ಯತಂತ್ರವನ್ನು ಜಾರಿ ಮಾಡಲು ಭಾರತವು ಸಜ್ಜಾಗಿದೆ. ಸೇತುವೆ ಮತ್ತು ಇತರ ಮೂಲಸೌಕರ್ಯ ನಿರ್ಮಾಣಕ್ಕಾಗಿಮಾಲ್ಡೀವ್ಸ್ಗೆ ಸುಮಾರು ₹3,750 ಕೋಟಿ ನೀಡುವುದಾಗಿ ಹೇಳಿದೆ.</p>.<p>ಅಬ್ದುಲ್ಲಾ ಯಮೀನ್ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಮಾಲ್ಡೀವ್ಸ್, ಚೀನಾದಿಂದ ಭಾರಿ ಪ್ರಮಾಣದ ಸಾಲ ಪಡೆದಿತ್ತು ಮತ್ತು ಮೂಲಸೌಕರ್ಯ ಯೋಜನೆಗಳ ಅನುಷ್ಠಾನದ ಹೊಣೆಯನ್ನು ಚೀನಾದ ಸಂಸ್ಥೆಗಳಿಗೆ ನೀಡಿತ್ತು.</p>.<p>ಚೀನಾದ ನಡೆಯು ಭಾರತ ಮತ್ತು ಪಶ್ಚಿಮದ ದೇಶಗಳ ಚಿಂತೆಗೆ ಕಾರಣವಾಗಿತ್ತು. ಏಷ್ಯಾ ಮತ್ತು ಅದರಾಚೆಗಿನ ದೇಶಗಳಿಗೂ ಆ ದೇಶಗಳು ಮರುಪಾವತಿ ಮಾಡಲು ಸಾಧ್ಯವಾಗದ ಪ್ರಮಾಣದ ಸಾಲ ನೀಡುವ ಮೂಲಕ ತನ್ನ ಪ್ರಾಬಲ್ಯ ಹೆಚ್ಚಿಸಲು ಚೀನಾ ಯತ್ನಿಸುತ್ತಿದೆ ಎಂಬುದು ಭಾರತವನ್ನು ಕಳವಳಕ್ಕೆ ಈಡು ಮಾಡಿತ್ತು.</p>.<p>ಮಾಲ್ಡೀವ್ಸ್ನಲ್ಲಿ ಈಗ ಹೊಸ ಸರ್ಕಾರ ಬಂದಿದೆ. ಹಾಗಾಗಿ ಭಾರತವು ತನ್ನ ಪ್ರಾಬಲ್ಯವನ್ನು ಮರುಸ್ಥಾಪಿಸಲು ಯತ್ನಿಸುತ್ತಿದೆ.</p>.<p>ಇಬ್ರಾಹಿಂ ಮೊಹಮ್ಮದ್ ಸಾಲಿಹ್ ಅವರು ಅಧ್ಯಕ್ಷರಾಗಿ ಅಧಿಕಾರಕ್ಕೆ ಬಂದ ಬಳಿಕ, ಹೊಸ ಹೂಡಿಕೆಯೂ ಸೇರಿ ಮಾಲ್ಡೀವ್ಸ್ಗೆ ಭಾರತ ನೀಡಲು ಉದ್ದೇಶಿಸಿರುವ ಮೊತ್ತವು ₹15 ಸಾವಿರ ಕೋಟಿಗೂ ಹೆಚ್ಚಾಗಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿದೆ.</p>.<p>ಪೂರ್ವ ಲಡಾಖ್ನಲ್ಲಿ ಭಾರತ–ಚೀನಾ ನಡುವಣ ಸಂಘರ್ಷವು ಪರಿಹಾರ ಕಾಣದ ಕಾರಣ ಭಾರತ ಸರ್ಕಾರವು ನೆರೆಯ ದೇಶಗಳಲ್ಲಿ ಪ್ರಾಬಲ್ಯ ವೃದ್ಧಿಸಲು ಮುಂದಾಗಿದೆ ಎನ್ನಲಾಗಿದೆ. ಶ್ರೀಲಂಕಾಕ್ಕೆ ಸುಮಾರು ₹3,000 ಕೋಟಿ ನೆರವು ನೀಡಲು ಭಾರತವು ಜುಲೈ 24ರಂದು ನಿರ್ಧರಿಸಿತ್ತು. ಜತೆಗೆ, ಭಾರತಕ್ಕೆ ಆ ದೇಶವು ಮರುಪಾವತಿ ಮಾಡಬೇಕಿರುವ ಸಾಲದ ಅವಧಿಯನ್ನು ಮುಂದೂಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.</p>.<p>ಯಮೀನ್ ಅವರು ಚೀನಾದತ್ತ ವಾಲಿದ ಪರಿಣಾಮವಾಗಿ ಭಾರತದ ಜತೆಗೆ ಮಾಲ್ಡೀವ್ಸ್ ಸಂಬಂಧ ಹದಗೆಟ್ಟಿತ್ತು. 2018ರ ನವೆಂಬರ್ನಲ್ಲಿ ಸಾಲಿಹ್ ಅವರು ಅಧ್ಯಕ್ಷರಾಗುವುದರೊಂದಿಗೆ ಭಾರತದ ಜತೆಗಿನ ಸಂಬಂಧಕ್ಕೆ ಪುನಶ್ಚೇತನ ದೊರೆತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>