‘1919ರಲ್ಲಿ ಅಮೃತಸರದ ಜಲಿಯನ್ವಾಲಾ ಬಾಗ್ನಲ್ಲಿ ನಡೆದ ಹತ್ಯಾಕಾಂಡಕ್ಕೆ ಪ್ರತೀಕಾರ ತೀರಿಸುವ ಸಲುವಾಗಿ ರಾಣಿ ಎಲಿಜಬೆತ್ ಅವರನ್ನು ಕೊಲ್ಲುವುದು ನನ್ನ ಉದ್ದೇಶವಾಗಿತ್ತು’ ಎಂದು ಬಂಧಿತ ಯುವಕ ಜಸ್ವಂತ್ ಸಿಂಗ್ ಚೈಲ್ ನ್ಯ್ಯಾಪ್ಚಾಟ್ ವಿಡಿಯೊದಲ್ಲಿ ಹೇಳಿದ ಅಂಶ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಸ್ಕಾಟ್ಲ್ಯಾಂಡ್ ಯಾರ್ಡ್ ಪೊಲೀಸರು ಇದನ್ನು ಪರಿಶೀಲಿಸುತ್ತಿದ್ದು, ಯುವಕನ ಪೋಷಕರು ಇದೀಗ ಆತನ ಜೀವದ ಬಗ್ಗೆ ಆತಂಕದಿಂದಿದ್ದಾರೆ. ಬ್ರಿಟನ್ನ ಮಾನಸಿಕ ಆರೋಗ್ಯ ಕಾಯ್ದೆಯ ಅಡಿಯಲ್ಲಿ ಯುವಕನನ್ನು ಬಂಧಿಸಲಾಗಿದೆ.