ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡೊನೇಷ್ಯಾ: ಲಂಚ ಸ್ವೀಕಾರ ಆರೋಪದಡಿ ಸಾಮಾಜಿಕ ವ್ಯವಹಾರಗಳ ಸಚಿವರ ಬಂಧನ

Last Updated 6 ಡಿಸೆಂಬರ್ 2020, 10:43 IST
ಅಕ್ಷರ ಗಾತ್ರ

ಜಕಾರ್ತಾ:ಕೋವಿಡ್‌ ಸಂತ್ರಸ್ತರ ಆಹಾರ ಯೋಜನೆಗೆ ಸಂಬಂಧಿಸಿದಂತೆ ₹8.85 ಕೋಟಿ (1.2 ಮಿಲಿಯನ್‌ ಡಾಲರ್‌) ಲಂಚ ಸ್ವೀಕರಿಸಿದ ಆರೋಪದಡಿ ಇಂಡೊನೇಷ್ಯಾದ ಸಾಮಾಜಿಕ ವ್ಯವಹಾರಗಳ ಸಚಿವರನ್ನುಭಾನುವಾರ ಬಂಧಿಸಲಾಗಿದೆ.

ಇಂಡೊನೇಷ್ಯಾದ ಭ್ರಷ್ಟಾಚಾರ ನಿಗ್ರಹ ದಳವು ಶನಿವಾರ ಸಚಿವ ಜೂಲಿಯಾರಿ ಬಟುಬರಾ ಅವರ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿತು. ಈ ವೇಳೆ ₹8.85 ಕೋಟಿ ಮೊತ್ತವನ್ನು ಒಳಗೊಂಡ ಸೂಟ್‌ಕೇಸ್‌, ಬ್ಯಾಗ್‌ ಅನ್ನು ವಶಕ್ಕೆ ಪಡೆದಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿದ ಇಂಡೊನೇಷ್ಯಾ ಅಧ್ಯಕ್ಷಜೋಕೊ ವಿಡೋಡೋ ಅವರು, ‘ಇದು ಜನರ ಹಣ. ಕೋವಿಡ್‌–19 ಸಮಯದಲ್ಲಿ ಆರ್ಥಿಕತೆ ವೃದ್ಧಿಸಲು ಇದರ ಅಗತ್ಯವಿದೆ. ನಾನು ಯಾವುದೇ ಭ್ರಷ್ಟರಿಗೆ ರಕ್ಷಣೆ ನೀಡುವುದಿಲ್ಲ’ ಎಂದರು.

ಕೋವಿಡ್‌ನಿಂದಾಗಿ ಇಂಡೊನೇಷ್ಯಾದ ಆರ್ಥಿಕತೆಯು ತತ್ತರಿಸಿದೆ. ಈ ಹಿನ್ನೆಲೆಯಲ್ಲಿ ಕೋವಿಡ್‌ನಿಂದ ಸಮಸ್ಯೆಗೊಳಗಾಗಿರುವ ಜನರಿಗಾಗಿ ಸರ್ಕಾರವು ಆಹಾರ ಪ್ಯಾಕೆಜ್‌ಗಳಂತಹ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.

‘ಜೂಲಿಯಾರಿ ಬಟುಬರಾ ಅವರು ಸರ್ಕಾರದ ಆಹಾರ ಯೋಜನೆಗೆ ಸಂಬಂಧಿಸಿದಂತೆ ಲಂಚ ಸ್ವೀಕರಿಸಿದ್ದಾರೆ. ಸಂತ್ರಸ್ಥರಿಗೆ ಆಹಾರ ವಿತರಣೆಯ ಗುತ್ತಿಗೆ ಪಡೆದಿದ್ದ ವ್ಯಕ್ತಿಗಳಿಬ್ಬರಿಂದ ಜೂಲಿಯಾರಿ ₹8.85 ಕೋಟಿ ಲಂಚ ಪಡೆದ ಆರೋಪ ಎದುರಿಸುತ್ತಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT