<p><strong>ಕಾಬೂಲ್:</strong> ಅಫ್ಗಾನಿಸ್ತಾನದ ಪಂಜ್ಶಿರ್ನಲ್ಲಿ ಪಾಕಿಸ್ತಾನ ಬಾಂಬ್ ದಾಳಿ ನಡೆಸಿದೆ ಎಂದು ಆರೋಪಿಸಿ ಕಾಬೂಲ್ನಲ್ಲಿ ನೂರಾರು ಯುವಕ ಯುವತಿಯರು ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದ್ದಾರೆ.</p>.<p>ಕಾಬೂಲ್ನಲ್ಲಿರುವ ಪಾಕಿಸ್ತಾನ ದೂತಾವಾಸ ಕಚೇರಿ ಎದುರು ಪ್ರತಿಭಟನೆ ನಡೆಸಿದ ಅವರು, ಅಫ್ಗಾನಿಸ್ತಾನದಲ್ಲಿ ಕೈಗೊಂಬೆ ಸರ್ಕಾರ ರಚನೆಯಾಗುವುದು ಬೇಕಾಗಿಲ್ಲ. ಎಲ್ಲರನ್ನೂ ಒಳಗೊಂಡ ಸರ್ಕಾರ ರಚನೆಯಾಗಬೇಕು ಎಂದು ಆಗ್ರಹಿಸಿದ್ದಾರೆ.</p>.<p><strong>ಓದಿ:</strong><a href="https://www.prajavani.net/world-news/pakistan-not-setting-up-new-camps-for-afghan-refugees-interior-minister-864667.html" itemprop="url">ಪಾಕ್ನಲ್ಲಿ ಅಫ್ಗನ್ ನಿರಾಶ್ರಿತರಿಗೆ ಹೊಸ ಶಿಬಿರ ಸ್ಥಾಪಿಸುವುದಿಲ್ಲ: ಶೇಖ್ ರಶೀದ್</a></p>.<p>ಅಫ್ಗಾನಿಸ್ತಾನದ ಜನರು ತಾಲಿಬಾನ್ ವಿರುದ್ಧ ಒಗ್ಗೂಡಬೇಕು ಎಂದು ಪಂಜ್ಶಿರ್ನಲ್ಲಿ ಹೋರಾಡುತ್ತಿರುವ ಪ್ರತಿರೋಧ ಪಡೆಯ ಸಹ ನಾಯಕ ಅಹ್ಮದ್ ಮಸೂದ್ ಕರೆ ನೀಡಿದ ಬೆನ್ನಲ್ಲೇ ಕಾಬೂಲ್ನಲ್ಲಿ ಜನರು ಜಮಾಯಿಸಿದ್ದಾರೆ ಎಂದು ‘ಖಾಮಾ ನ್ಯೂಸ್’ ವರದಿ ಮಾಡಿದೆ.</p>.<p>‘ಪಾಕಿಸ್ತಾನಕ್ಕೆ ಸಾವಾಗಲಿ’ ಎಂಬ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಅಫ್ಗಾನಿಸ್ತಾನದಲ್ಲಿರುವ ಪಾಕಿಸ್ತಾನ ದೂತಾವಾಸ ಕಚೇರಿಯನ್ನು ಮುಚ್ಚಬೇಕು ಎಂದು ಆಗ್ರಹಿಸಿದ್ದಾರೆ.</p>.<p>ಪ್ರತಿಭಟನಾ ನಿರತರು ‘ಸ್ವಾತಂತ್ರ್ಯ’, ‘ಅಲ್ಲಾಹ್ ಅಕ್ಬರ್’, ‘ನಾವು ಬಂಧನ ಬಯಸುವುದಿಲ್ಲ’ ಎಂಬ ಘೋಷಣೆಗಳನ್ನು ಕೂಗಿದರು.</p>.<p><strong>ಓದಿ:</strong><a href="https://www.prajavani.net/world-news/taliban-announces-that-they-acquired-complete-afghanistan-864613.html" itemprop="url">ಅಫ್ಗನ್ ಪೂರ್ಣ ವಶಕ್ಕೆ: ತಾಲಿಬಾನ್ ಘೋಷಣೆ</a></p>.<p>ಪ್ರತಿಭಟನಾಕಾರರನ್ನು ನಿಯಂತ್ರಿಸಲು ತಾಲಿಬಾನ್ ಹೋರಾಟಗಾರರು ಗಾಳಿಯಲ್ಲಿ ಗುಂಡು ಹಾರಿಸಿದರು. ಆದರೂ ಹೆಚ್ಚಿನ ಸಂಖ್ಯೆಯ ಪ್ರತಿಭಟನಾಕಾರರು ಸ್ಥಳದಿಂದ ಕದಲಿಲ್ಲ ಎಂದು ವರದಿಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಬೂಲ್:</strong> ಅಫ್ಗಾನಿಸ್ತಾನದ ಪಂಜ್ಶಿರ್ನಲ್ಲಿ ಪಾಕಿಸ್ತಾನ ಬಾಂಬ್ ದಾಳಿ ನಡೆಸಿದೆ ಎಂದು ಆರೋಪಿಸಿ ಕಾಬೂಲ್ನಲ್ಲಿ ನೂರಾರು ಯುವಕ ಯುವತಿಯರು ಪಾಕಿಸ್ತಾನದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದ್ದಾರೆ.</p>.<p>ಕಾಬೂಲ್ನಲ್ಲಿರುವ ಪಾಕಿಸ್ತಾನ ದೂತಾವಾಸ ಕಚೇರಿ ಎದುರು ಪ್ರತಿಭಟನೆ ನಡೆಸಿದ ಅವರು, ಅಫ್ಗಾನಿಸ್ತಾನದಲ್ಲಿ ಕೈಗೊಂಬೆ ಸರ್ಕಾರ ರಚನೆಯಾಗುವುದು ಬೇಕಾಗಿಲ್ಲ. ಎಲ್ಲರನ್ನೂ ಒಳಗೊಂಡ ಸರ್ಕಾರ ರಚನೆಯಾಗಬೇಕು ಎಂದು ಆಗ್ರಹಿಸಿದ್ದಾರೆ.</p>.<p><strong>ಓದಿ:</strong><a href="https://www.prajavani.net/world-news/pakistan-not-setting-up-new-camps-for-afghan-refugees-interior-minister-864667.html" itemprop="url">ಪಾಕ್ನಲ್ಲಿ ಅಫ್ಗನ್ ನಿರಾಶ್ರಿತರಿಗೆ ಹೊಸ ಶಿಬಿರ ಸ್ಥಾಪಿಸುವುದಿಲ್ಲ: ಶೇಖ್ ರಶೀದ್</a></p>.<p>ಅಫ್ಗಾನಿಸ್ತಾನದ ಜನರು ತಾಲಿಬಾನ್ ವಿರುದ್ಧ ಒಗ್ಗೂಡಬೇಕು ಎಂದು ಪಂಜ್ಶಿರ್ನಲ್ಲಿ ಹೋರಾಡುತ್ತಿರುವ ಪ್ರತಿರೋಧ ಪಡೆಯ ಸಹ ನಾಯಕ ಅಹ್ಮದ್ ಮಸೂದ್ ಕರೆ ನೀಡಿದ ಬೆನ್ನಲ್ಲೇ ಕಾಬೂಲ್ನಲ್ಲಿ ಜನರು ಜಮಾಯಿಸಿದ್ದಾರೆ ಎಂದು ‘ಖಾಮಾ ನ್ಯೂಸ್’ ವರದಿ ಮಾಡಿದೆ.</p>.<p>‘ಪಾಕಿಸ್ತಾನಕ್ಕೆ ಸಾವಾಗಲಿ’ ಎಂಬ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಅಫ್ಗಾನಿಸ್ತಾನದಲ್ಲಿರುವ ಪಾಕಿಸ್ತಾನ ದೂತಾವಾಸ ಕಚೇರಿಯನ್ನು ಮುಚ್ಚಬೇಕು ಎಂದು ಆಗ್ರಹಿಸಿದ್ದಾರೆ.</p>.<p>ಪ್ರತಿಭಟನಾ ನಿರತರು ‘ಸ್ವಾತಂತ್ರ್ಯ’, ‘ಅಲ್ಲಾಹ್ ಅಕ್ಬರ್’, ‘ನಾವು ಬಂಧನ ಬಯಸುವುದಿಲ್ಲ’ ಎಂಬ ಘೋಷಣೆಗಳನ್ನು ಕೂಗಿದರು.</p>.<p><strong>ಓದಿ:</strong><a href="https://www.prajavani.net/world-news/taliban-announces-that-they-acquired-complete-afghanistan-864613.html" itemprop="url">ಅಫ್ಗನ್ ಪೂರ್ಣ ವಶಕ್ಕೆ: ತಾಲಿಬಾನ್ ಘೋಷಣೆ</a></p>.<p>ಪ್ರತಿಭಟನಾಕಾರರನ್ನು ನಿಯಂತ್ರಿಸಲು ತಾಲಿಬಾನ್ ಹೋರಾಟಗಾರರು ಗಾಳಿಯಲ್ಲಿ ಗುಂಡು ಹಾರಿಸಿದರು. ಆದರೂ ಹೆಚ್ಚಿನ ಸಂಖ್ಯೆಯ ಪ್ರತಿಭಟನಾಕಾರರು ಸ್ಥಳದಿಂದ ಕದಲಿಲ್ಲ ಎಂದು ವರದಿಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>