<p><strong>ಜೆರುಸಲೇಂ:</strong> ಸುಪ್ರೀಂ ಕೋರ್ಟ್ ಮೇಲೆ ಸಂಸದರಿಗೆ ಹೆಚ್ಚಿನ ನಿಯಂತ್ರಣ ಹೊಂದಲು ಅವಕಾಶ ನೀಡುವ ಸರ್ಕಾರದ ವಿವಾದಾತ್ಮಕ ನ್ಯಾಯಾಂಗ ಸುಧಾರಣಾ ಯೋಜನೆ ವಿರುದ್ಧ ಇಸ್ರೇಲ್ನ ಸಾವಿರಾರು ಮಂದಿ ಸೋಮವಾರ ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಿದರು.</p>.<p>ನ್ಯಾಯಾಂಗಕ್ಕೆ ಸಂಬಂಧಿಸಿದಂತೆ ಕೈಗೊಂಡ ನಿರ್ಧಾರಗಳಿಗೆ ಶಾಸನಸಭೆಯಲ್ಲಿ ಪ್ರಾಥಮಿಕ ಮತದಾನ ಮೂಲಕ ಅನುಮೋದನೆ ಪಡೆಯುವ ಯತ್ನದಲ್ಲಿದೆ. ಇನ್ನೊಂದಡೆ ಈ ತೀರ್ಮಾನಗಳಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.</p>.<p>ಇಸ್ರೇಲ್ ಸಂಸತ್ತಿನ ಹೊರಗೆ ಸಾವಿರಾರು ಜನರು ಜಮಾವಣೆಗೊಂಡು, ಇಸ್ರೇಲ್ ಧ್ವಜಗಳನ್ನು ಬೀಸುತ್ತಾ, ‘ಇಸ್ರೇಲ್ನ ಪ್ರಜಾಪ್ರಭುತ್ವ ಉಳಿಸಿ’ ಮತ್ತು ‘ಇಡೀ ಜಗತ್ತು ನೋಡುತ್ತಿದೆ’ ಎಂಬ ಫಲಕ ಪ್ರದರ್ಶಿಸಿದರು. </p>.<p>ಸುಧಾರಣಾ ಯೋಜನೆಗೆ ಸಂಬಂಧಿಸಿ ಭಾನುವಾರ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದ ಅಧ್ಯಕ್ಷ ಐಸಾಕ್ ಹೆರ್ಜೋಗ್, ಇಸ್ರೇಲ್ ‘ಕಾನೂನು ಮತ್ತು ಸಾಮಾಜಿಕ ಅಧಃಪತನದ ಅಂಚಿನಲ್ಲಿದೆ’ ಎಂದು ಎಚ್ಚರಿಸಿದರು.</p>.<p>ಚುನಾಯಿತ ಪ್ರತಿನಿಧಿಗಳು ಮತ್ತು ರಾಷ್ಟ್ರದ ಉನ್ನತ ನ್ಯಾಯಾಲಯದ ನಡುವಿನ ಅಧಿಕಾರ ಅಸಮತೋಲನವನ್ನು ಸರಿಪಡಿಸಲು ಸುಧಾರಣೆಗಳು ಅವಶ್ಯಕ ಎಂದು ನೆತನ್ಯಾಹು ಮತ್ತು ಮಿತ್ರಪಕ್ಷಗಳು ಹೇಳುತ್ತಿವೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೆರುಸಲೇಂ:</strong> ಸುಪ್ರೀಂ ಕೋರ್ಟ್ ಮೇಲೆ ಸಂಸದರಿಗೆ ಹೆಚ್ಚಿನ ನಿಯಂತ್ರಣ ಹೊಂದಲು ಅವಕಾಶ ನೀಡುವ ಸರ್ಕಾರದ ವಿವಾದಾತ್ಮಕ ನ್ಯಾಯಾಂಗ ಸುಧಾರಣಾ ಯೋಜನೆ ವಿರುದ್ಧ ಇಸ್ರೇಲ್ನ ಸಾವಿರಾರು ಮಂದಿ ಸೋಮವಾರ ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸಿದರು.</p>.<p>ನ್ಯಾಯಾಂಗಕ್ಕೆ ಸಂಬಂಧಿಸಿದಂತೆ ಕೈಗೊಂಡ ನಿರ್ಧಾರಗಳಿಗೆ ಶಾಸನಸಭೆಯಲ್ಲಿ ಪ್ರಾಥಮಿಕ ಮತದಾನ ಮೂಲಕ ಅನುಮೋದನೆ ಪಡೆಯುವ ಯತ್ನದಲ್ಲಿದೆ. ಇನ್ನೊಂದಡೆ ಈ ತೀರ್ಮಾನಗಳಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.</p>.<p>ಇಸ್ರೇಲ್ ಸಂಸತ್ತಿನ ಹೊರಗೆ ಸಾವಿರಾರು ಜನರು ಜಮಾವಣೆಗೊಂಡು, ಇಸ್ರೇಲ್ ಧ್ವಜಗಳನ್ನು ಬೀಸುತ್ತಾ, ‘ಇಸ್ರೇಲ್ನ ಪ್ರಜಾಪ್ರಭುತ್ವ ಉಳಿಸಿ’ ಮತ್ತು ‘ಇಡೀ ಜಗತ್ತು ನೋಡುತ್ತಿದೆ’ ಎಂಬ ಫಲಕ ಪ್ರದರ್ಶಿಸಿದರು. </p>.<p>ಸುಧಾರಣಾ ಯೋಜನೆಗೆ ಸಂಬಂಧಿಸಿ ಭಾನುವಾರ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದ ಅಧ್ಯಕ್ಷ ಐಸಾಕ್ ಹೆರ್ಜೋಗ್, ಇಸ್ರೇಲ್ ‘ಕಾನೂನು ಮತ್ತು ಸಾಮಾಜಿಕ ಅಧಃಪತನದ ಅಂಚಿನಲ್ಲಿದೆ’ ಎಂದು ಎಚ್ಚರಿಸಿದರು.</p>.<p>ಚುನಾಯಿತ ಪ್ರತಿನಿಧಿಗಳು ಮತ್ತು ರಾಷ್ಟ್ರದ ಉನ್ನತ ನ್ಯಾಯಾಲಯದ ನಡುವಿನ ಅಧಿಕಾರ ಅಸಮತೋಲನವನ್ನು ಸರಿಪಡಿಸಲು ಸುಧಾರಣೆಗಳು ಅವಶ್ಯಕ ಎಂದು ನೆತನ್ಯಾಹು ಮತ್ತು ಮಿತ್ರಪಕ್ಷಗಳು ಹೇಳುತ್ತಿವೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>