‘ಘಟನೆಯು ಶನಿವಾರ ನಡೆದಿದೆ. ಉತ್ತೇಜ್ ಅವರು ಮೊದಲಿಗೆ ಸರೋವರದಲ್ಲಿ ಈಜಲು ತೆರಳಿದರು. ಕೆಲ ಹೊತ್ತಿನಲ್ಲಿ ಮುಳುಗಲು ಆರಂಭಿಸಿದರು. ಸ್ನೇಹಿತನನ್ನು ಕಾಪಾಡಲು ಸರೋವರಕ್ಕೆ ಧುಮುಕಿದ ಶಿವ ಕೂಡ ಮುಳುಗಿದರು. ಉತ್ತೇಜ್ ಅವರ ಮೃತದೇಹವು ಎರಡು ಗಂಟೆಗಳ ಒಳಗಾಗಿಯೇ ಸಿಕ್ಕಿತು. ಆದರೆ, ಶಿವ ಅವರ ಮೃತದೇಹವು ಭಾನುವಾರ ದೊರಕಿತು’ ಎಂದು ಮಾಹಿತಿ ನೀಡಿದರು.