ಆರಂಭದಲ್ಲಿ ಆರೋಗ್ಯ ಕಾರ್ಯಕರ್ತರು, ವಯಸ್ಸಾದವರು ಮತ್ತು ಹೆಚ್ಚು ಅಪಾಯದಲ್ಲಿರುವ ವ್ಯಕ್ತಿಗಳಿಗಷ್ಟೇ ಲಸಿಕೆ ದೊರೆಯಲಿದೆ. ಅದರಿಂದ ಸಾವಿನ ಸಂಖ್ಯೆ ಕಡಿಮೆಯಾಗಬಹುದು ಮತ್ತು ಆರೋಗ್ಯ ವ್ಯವಸ್ಥೆ ನಿಭಾಯಿಸಲು ಅನುಕೂಲವಾಗಬಹುದು ಆದರೆ, ವೈರಸ್ ಹರಡಲು ಮತ್ತೂ ಅವಕಾಶವಿರುತ್ತದೆ. ಕಣ್ಗಾವಲು ಮುಂದುವರಿಸಬೇಕಾಗುತ್ತದೆ. ಜನರು ಪರೀಕ್ಷೆಗೆ ಒಳಪಡುವುದು, ಪ್ರತ್ಯೇಕ ವಾಸ, ಶುಶ್ರೂಷೆ, ಸಂಪರ್ಕಿತರ ಪತ್ತೆ ಮುಂದುವರಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.