‘ಉಷ್ಣಾಂಶ ಹೆಚ್ಚಾದಾಗ ಬೆಳೆಗಳಿಗೆ ಕೀಟಗಳ ದಾಳಿ ಹೆಚ್ಚು.ಟೊಮೆಟೊ ಬೆಳೆಗೆ ಪ್ರಾಯೋಗಿಕವಾಗಿ ಈತಂತ್ರಜ್ಞಾನ ಬಳಕೆ ಮಾಡಲಾಗಿದ್ದು, ಯಶಸ್ವಿಯಾಗಿದೆ. ಬೆಳೆ ತಿನ್ನಲು ಬರುವ ಕೀಟಗಳು ಬೆಳಕಿಗೆ ಸೆಳೆತಗೊಂಡು, ಈ ಸಾಧನದ ಬಳಿ ಬಂದು ಇದರಲ್ಲಿ ಅಳವಡಿಸಿರುವ ಬಲೆಗೆ ಬೀಳುತ್ತವೆ. ಬೆಳೆಗಳನ್ನು ಕೀಟ ಬಾಧೆಯಿಂದ ರಕ್ಷಿಸಲು ಈ ಸಾಧನ ಸಹಕಾರಿ’ ಎಂದು ಐಐಎಚ್ಆರ್ನ ಬೆಳೆ ಸಂರಕ್ಷಣಾ ವಿಭಾಗದ ಪ್ರಧಾನ ವಿಜ್ಞಾನಿ ವಿ.ಶ್ರೀಧರ್ ‘ಪ್ರಜಾವಾಣಿ’ಗೆ ತಿಳಿಸಿದರು.