ಬ್ಯಾಂಕ್ ಕೆಲಸದಿಂದ ನಿವೃತ್ತರಾದ ಮೇಲೆ ಬರೆಯಲು ಆರಂಭಿಸಿದ ಟಿ.ಎಸ್. ಶ್ರವಣಕುಮಾರಿ ಅವರು ಸಾಹಿತ್ಯದ ಉದ್ಯಾನಕ್ಕೆ ಕಥೆ, ಲಲಿತ ಪ್ರಬಂಧದ ಕಾಲುದಾರಿ ಮೂಲಕ ಪ್ರವೇಶ ಪಡೆದವರು. ಮೈತ್ರಿ ಪ್ರಕಾಶನ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಬಹುಮಾನ ಪಡೆದು, ಇತ್ತೀಚೆಗಷ್ಟೆ ಹೊರಬಂದ ಅವರ ಕಥಾಸಂಕಲನವೇ ‘ಅಸ್ಪಷ್ಟ ತಲ್ಲಣಗಳು’. ಸಂಕಲನದ ಶೀರ್ಷಿಕೆಯಾದ ಈ ಕಥೆಯೂ ಸೇರಿ, ‘ಅವಳು ಮತ್ತು ಮಗಳು’, ‘ಕಾಮಿನಿಯೂ ಚಿಕನ್ ಬಿರ್ಯಾನಿಯೂ’, ‘ಜೀವನ್ಮುಖಿ’ ಕಥೆಗಳು ಗಮನ ಸೆಳೆಯುತ್ತವೆ. ಎಲ್ಲ ಕಥೆಗಳಲ್ಲಿ ಹೆಣ್ಣಿನ ಬದುಕಿನ ತಲ್ಲಣಗಳೇ ತುಂಬಿವೆ.