ಬೊಮ್ಮನಹಳ್ಳಿಯ ಸಣ್ಣಿಲಿ, ದೊಡ್ಡಿಲಿ, ಮೂಗಿಲಿ, ಸುಂಡಿಲಿ, ಅಣ್ಣಿಲಿ, ತಮ್ಮಿಲಿ, ಅವ್ವಿಲಿ, ಅಪ್ಪಿಲಿ, ಮಾವಿಲಿ, ಬಾವಿಲಿ, ಅಕ್ಕಿಲಿ, ತಂಗಿಲಿ, ಗಂಡಿಲಿ, ಹೆಣ್ಣಿಲಿ, ಮುದುಕಿಲಿ, ಹುಡುಗಿಲಿ ಎಲ್ಲರನ್ನೂ ತುಂಗಾ ನದಿಯಲ್ಲಿ ಮುಳುಗಿಸಿದ್ದು ನೀನೇ ಅಲ್ಲವೇ ಜೋಗಿ ಎಂದೆ. ‘ಅಷ್ಟೇ ಅಲ್ಲ ತಮ್ಮಾ, ಕೇಳಿಲ್ಲಿ. ಊರಿನ ಗೌಡ ಮಾತಿಗೆ ಒಪ್ಪಿದಂತೆ ದುಡ್ಡು ಕೊಡದಿದ್ದಾಗ, ಇನ್ನೊಂದು ನಾದ ಬಾರಿಸಿದೆ ನೋಡು. ಊರಿನ ಮಕ್ಕಳೆಲ್ಲ ನನ್ನನ್ನು ಹಿಂಬಾಲಿಸಿಕೊಂಡು ಬಂದರು’ ಎಂದು ಜೋಗಿ ಹೇಳಿದ. ‘ಬೆಟ್ಟದ ಬಾಗಿಲು ತೆಗೆಸಿ ಆ ಮಕ್ಕಳನ್ನು ಕರೆದುಕೊಂಡು ಹೋದೆಯಲ್ಲ; ಮುಂದೇನಾಯಿತು’ ಎಂದು ಕೇಳಿದೆ. ಅದು ಸಸ್ಪೆನ್ಸ್ ಎಂದು ಕಣ್ಣು ಮಿಟುಕಿಸಿದ.