ನೆಲೆಮಾವು ಮಠ ನಮ್ಮ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ನೆಲೆಮಾವು ಎಂಬ ಊರಿನಲ್ಲಿದೆ. ಈ ಮಠ ಸ್ಥಾಪನೆಯಾಗಿ ಸುಮಾರು ಏಳುನೂರು ವರ್ಷಗಳಾಗಿವೆ; ಈ ಗುರುಪೀಠದಲ್ಲಿ ಇಪ್ಪತ್ತೈದು ಯತಿವರೇಣ್ಯರು ವಿರಾಜಮಾನರಾಗಿದ್ದಾರೆ. ಈ ಮಠದ ಇತಿಹಾಸ ಮತ್ತು ಗುರುಪರಂಪರೆಯ ಬಗ್ಗೆ ಗಣೇಶ ಭಟ್ಟ ಹೋಬಳಿ ಅವರ ಈ ಪುಸ್ತಕ ತುಂಬ ಮಾಹಿತಿಯನ್ನು ನೀಡುತ್ತದೆ. ಕೆಲವರು ಯತಿಗಳ ಬಗ್ಗೆಯೂ ಸಂಕ್ಷಿಪ್ತ ಜೀವನಚರಿತ್ರೆ ಇಲ್ಲಿದೆ; ಐತಿಹಾಸಿಕ ದಾಖಲೆಗಳೂ ಸಾಕಷ್ಟಿವೆ. ಜೊತೆಗೆ ದಕ್ಷಿಣಾಮೂರ್ತಿ ಸ್ತೋತ್ರ, ಲಕ್ಷ್ಮೀನರಸಿಂಹಪಂಚರತ್ನ, ಋಣಮೋಚನನೃಸಿಂಹ ಸ್ತೋತ್ರ, ದೇವೀ ಅಪರಾಧಕ್ಷಮಾಪಣ ಸ್ತೋತ್ರ, ಲಕ್ಷ್ಮೀನರಸಿಂಹಕರುಣಾರಸ ಸ್ತೋತ್ರಗಳ ಪ್ರತಿಪದಾರ್ಥ ಸಹಿತ ಅನುವಾದವನ್ನೂ ನೀಡಲಾಗಿದೆ. ಶಾಂಕರಪೀಠಗಳ ಬಗ್ಗೆ ಕುತೂಹಲಾಸಕ್ತಿ ಇರುವವರೆಲ್ಲರೂ ಗಮನಿಸಬೇಕಾದ ಕೃತಿಯಿದು.