<p><strong>ನೆಲೆಮಾವುಮಠದ ಶ್ರೀಗುರುಪರಂಪರೆ<br />ಲೇ: </strong>ಗಣೇಶ ಭಟ್ಟ ಹೋಬಳಿ<br /><strong>ಪ್ರ: </strong>ಮಹಾಬಲೇಶ್ವರ ಹೆಗಡೆ<br /><strong>ಮೊಬೈಲ್:</strong> 9482233924</p>.<p class="rtecenter">***</p>.<p>ನಮ್ಮ ದೇಶದ ಸಂಸ್ಕೃತಿಯಲ್ಲಿ ಮಠಮಂದಿರಗಳ ಪಾತ್ರ ದೊಡ್ಡದು. ಅವು ನಮ್ಮ ಜನಜೀವನದ ಮೇಲೆ ಸಾವಿರಾರು ವರ್ಷಗಳಿಂದ ಪ್ರಭಾವವನ್ನು ಮೂಡಿಸುತ್ತ ಬಂದಿವೆ.</p>.<p>ಶಂಕರಾಚಾರ್ಯರು ದೇಶದ ನಾಲ್ಕು ದಿಕ್ಕುಗಳಲ್ಲೂ ಮಠಗಳನ್ನು ಸ್ಥಾಪಿಸಿ, ಅವುಗಳ ಮೂಲಕ ತಮ್ಮ ಸಿದ್ಧಾಂತದ ಪ್ರಸಾರ ನಿರಂತರವಾಗಿರುವಂಥ ವ್ಯವಸ್ಥೆಯನ್ನು ರೂಪಿಸಿದರು. ಈ ನಾಲ್ಕು ಮಠಗಳ ಜೊತೆಗೆ ಕಾಲಾನಂತರದಲ್ಲಿ ಹಲವು ಮಠಗಳು ಸ್ಥಾಪನೆಯಾದವು; ಅದ್ವೈತದ ಪ್ರಸಾರದಲ್ಲಿ ತೊಡಗಿಕೊಂಡವು. ಇಂಥ ಮಠಗಳಲ್ಲಿ ಒಂದು ನೆಲೆಮಾವುಮಠ.</p>.<p>ನೆಲೆಮಾವು ಮಠ ನಮ್ಮ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ನೆಲೆಮಾವು ಎಂಬ ಊರಿನಲ್ಲಿದೆ. ಈ ಮಠ ಸ್ಥಾಪನೆಯಾಗಿ ಸುಮಾರು ಏಳುನೂರು ವರ್ಷಗಳಾಗಿವೆ; ಈ ಗುರುಪೀಠದಲ್ಲಿ ಇಪ್ಪತ್ತೈದು ಯತಿವರೇಣ್ಯರು ವಿರಾಜಮಾನರಾಗಿದ್ದಾರೆ. ಈ ಮಠದ ಇತಿಹಾಸ ಮತ್ತು ಗುರುಪರಂಪರೆಯ ಬಗ್ಗೆ ಗಣೇಶ ಭಟ್ಟ ಹೋಬಳಿ ಅವರ ಈ ಪುಸ್ತಕ ತುಂಬ ಮಾಹಿತಿಯನ್ನು ನೀಡುತ್ತದೆ. ಕೆಲವರು ಯತಿಗಳ ಬಗ್ಗೆಯೂ ಸಂಕ್ಷಿಪ್ತ ಜೀವನಚರಿತ್ರೆ ಇಲ್ಲಿದೆ; ಐತಿಹಾಸಿಕ ದಾಖಲೆಗಳೂ ಸಾಕಷ್ಟಿವೆ. ಜೊತೆಗೆ ದಕ್ಷಿಣಾಮೂರ್ತಿ ಸ್ತೋತ್ರ, ಲಕ್ಷ್ಮೀನರಸಿಂಹಪಂಚರತ್ನ, ಋಣಮೋಚನನೃಸಿಂಹ ಸ್ತೋತ್ರ, ದೇವೀ ಅಪರಾಧಕ್ಷಮಾಪಣ ಸ್ತೋತ್ರ, ಲಕ್ಷ್ಮೀನರಸಿಂಹಕರುಣಾರಸ ಸ್ತೋತ್ರಗಳ ಪ್ರತಿಪದಾರ್ಥ ಸಹಿತ ಅನುವಾದವನ್ನೂ ನೀಡಲಾಗಿದೆ. ಶಾಂಕರಪೀಠಗಳ ಬಗ್ಗೆ ಕುತೂಹಲಾಸಕ್ತಿ ಇರುವವರೆಲ್ಲರೂ ಗಮನಿಸಬೇಕಾದ ಕೃತಿಯಿದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನೆಲೆಮಾವುಮಠದ ಶ್ರೀಗುರುಪರಂಪರೆ<br />ಲೇ: </strong>ಗಣೇಶ ಭಟ್ಟ ಹೋಬಳಿ<br /><strong>ಪ್ರ: </strong>ಮಹಾಬಲೇಶ್ವರ ಹೆಗಡೆ<br /><strong>ಮೊಬೈಲ್:</strong> 9482233924</p>.<p class="rtecenter">***</p>.<p>ನಮ್ಮ ದೇಶದ ಸಂಸ್ಕೃತಿಯಲ್ಲಿ ಮಠಮಂದಿರಗಳ ಪಾತ್ರ ದೊಡ್ಡದು. ಅವು ನಮ್ಮ ಜನಜೀವನದ ಮೇಲೆ ಸಾವಿರಾರು ವರ್ಷಗಳಿಂದ ಪ್ರಭಾವವನ್ನು ಮೂಡಿಸುತ್ತ ಬಂದಿವೆ.</p>.<p>ಶಂಕರಾಚಾರ್ಯರು ದೇಶದ ನಾಲ್ಕು ದಿಕ್ಕುಗಳಲ್ಲೂ ಮಠಗಳನ್ನು ಸ್ಥಾಪಿಸಿ, ಅವುಗಳ ಮೂಲಕ ತಮ್ಮ ಸಿದ್ಧಾಂತದ ಪ್ರಸಾರ ನಿರಂತರವಾಗಿರುವಂಥ ವ್ಯವಸ್ಥೆಯನ್ನು ರೂಪಿಸಿದರು. ಈ ನಾಲ್ಕು ಮಠಗಳ ಜೊತೆಗೆ ಕಾಲಾನಂತರದಲ್ಲಿ ಹಲವು ಮಠಗಳು ಸ್ಥಾಪನೆಯಾದವು; ಅದ್ವೈತದ ಪ್ರಸಾರದಲ್ಲಿ ತೊಡಗಿಕೊಂಡವು. ಇಂಥ ಮಠಗಳಲ್ಲಿ ಒಂದು ನೆಲೆಮಾವುಮಠ.</p>.<p>ನೆಲೆಮಾವು ಮಠ ನಮ್ಮ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ನೆಲೆಮಾವು ಎಂಬ ಊರಿನಲ್ಲಿದೆ. ಈ ಮಠ ಸ್ಥಾಪನೆಯಾಗಿ ಸುಮಾರು ಏಳುನೂರು ವರ್ಷಗಳಾಗಿವೆ; ಈ ಗುರುಪೀಠದಲ್ಲಿ ಇಪ್ಪತ್ತೈದು ಯತಿವರೇಣ್ಯರು ವಿರಾಜಮಾನರಾಗಿದ್ದಾರೆ. ಈ ಮಠದ ಇತಿಹಾಸ ಮತ್ತು ಗುರುಪರಂಪರೆಯ ಬಗ್ಗೆ ಗಣೇಶ ಭಟ್ಟ ಹೋಬಳಿ ಅವರ ಈ ಪುಸ್ತಕ ತುಂಬ ಮಾಹಿತಿಯನ್ನು ನೀಡುತ್ತದೆ. ಕೆಲವರು ಯತಿಗಳ ಬಗ್ಗೆಯೂ ಸಂಕ್ಷಿಪ್ತ ಜೀವನಚರಿತ್ರೆ ಇಲ್ಲಿದೆ; ಐತಿಹಾಸಿಕ ದಾಖಲೆಗಳೂ ಸಾಕಷ್ಟಿವೆ. ಜೊತೆಗೆ ದಕ್ಷಿಣಾಮೂರ್ತಿ ಸ್ತೋತ್ರ, ಲಕ್ಷ್ಮೀನರಸಿಂಹಪಂಚರತ್ನ, ಋಣಮೋಚನನೃಸಿಂಹ ಸ್ತೋತ್ರ, ದೇವೀ ಅಪರಾಧಕ್ಷಮಾಪಣ ಸ್ತೋತ್ರ, ಲಕ್ಷ್ಮೀನರಸಿಂಹಕರುಣಾರಸ ಸ್ತೋತ್ರಗಳ ಪ್ರತಿಪದಾರ್ಥ ಸಹಿತ ಅನುವಾದವನ್ನೂ ನೀಡಲಾಗಿದೆ. ಶಾಂಕರಪೀಠಗಳ ಬಗ್ಗೆ ಕುತೂಹಲಾಸಕ್ತಿ ಇರುವವರೆಲ್ಲರೂ ಗಮನಿಸಬೇಕಾದ ಕೃತಿಯಿದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>