ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಯಕಕ್ಕೆ ಕಳೆಯಿತ್ತು, ಬದುಕಿಗೇ ಬೆಲೆಯಿತ್ತು’: ಸಿದ್ಧಯ್ಯ ಪುರಾಣಿಕರ ಕವನ

Last Updated 21 ಜನವರಿ 2019, 16:18 IST
ಅಕ್ಷರ ಗಾತ್ರ

ಶಿವಕುಮಾರ ಸ್ವಾಮೀಜಿ ಬಗ್ಗೆ ಕವಿ ಡಾ.ಸಿದ್ಧಯ್ಯ ಪುರಾಣಿಕ ಅವರ ಕವನ ‘ಅಲ್ಪತನಕಳಿವಿಲ್ಲಿ’

–––

ಕವಿಸಯಮವೆನ್ನುವಿಯ ಸುರನದಿಯ? ಬಾ, ನೋಡು

ಸಿದ್ಧಗಂಗೆಯ ಯೋಗಿವರನ ನಡೆಯ|

ಕಲ್ಪನೆಯು ಎನ್ನುವಿಯ ಸುಧೆಯನ್ನು? ಬಾ, ಕೇಳು

ಶಿವಯೋಗಿ ಪುಂಗವನ ಸವಸಿರಿಯ ನುಡಿಯ|

ಸರ್ವಾಂಗ ಲಿಂಗಮಯ, ಮೈವೆತ್ತ ಕರುಣೆ ದಯ,

ಸರ್ವರನ್ನು ಪ್ರೀತಿಸುವ ದಿವ್ಯಹೃದಯ|

ಗುರಿಯು ಸಕಲರ ಉದಯ, ವರವು ಸರ್ವರಿಗಭಯ.

ಶ್ರೀಮಠವು ಎಲ್ಲರಿಗೆ ನಿತ್ಯಾಶ್ರಯ|

ಏನೆಂಬೆ ಶಿವಕುಮಾರನ ಮೋಡಿ, ಗಾರುಡವ?

ಬರಿಗೈಯೆ ಬೊಕ್ಕಸವು, ನಿಧಿ ನಿಧಾನ!

ಲಕ್ಷ ಕರ ತೆಗೆದರೂ ತುಂಬಿರುವ ಜೋಳಿಗೆಯು

ಕೈಕೊಳುತಲಿದೆ ಪಂಚಪರಷುಗಳ ನಮನ|

ಧರ್ಮದೇರಿಗೆ ಶರಣದರ್ಶನದ ಕಟ್ಟೆಯಿದೆ

ಸಕಲ ಸದ್ಗತಿಯೆಂಬ ಸೋಪಾನವುಂಟು

ವಿದ್ಯೆಕಲೆಗಳ ಜಲದಿ ಅಧ್ಯಾತ್ಮದರವಿಂದ

ಶ್ರೀಮಠದ ಸರಸಿಯಲ್ಲಿ ಸೈಪು ನೂರೆಂಟು|

ಅಲ್ಪತನಕಳಿವಿಲ್ಲಿ| ಜಲ್ಪತನಕಡೆಯೆಲ್ಲಿ?

ಅತ್ಯುಚ್ಚ ಅನುಭಾವಿ ನೆಲೆಸಿರುವನಿಲ್ಲಿ

ಕಾಯಕಕ್ಕೆ ಕಳೆಯಿತ್ತು, ಬದುಕಿಗೇ ಬೆಲೆಯಿತ್ತು,

ನಾಡಿನಾಚೆಗು ಶಿವದ ಬೆಳಕು ಚೆಲ್ಲಿ|

–ಡಾ. ಸಿದ್ಧಯ್ಯ ಪುರಾಣಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT