<p><strong>ಬೆಂಗಳೂರು: `</strong>ಸಮಕಾಲೀನ ಸಾಹಿತ್ಯದ ವಿಷಯವನ್ನು ತಿಳಿಸುವ ಮೂಲಕ ಸಂಚಯ ಪತ್ರಿಕೆಯು ಸಾಹಿತ್ಯದ ಅಧ್ಯಯನಕ್ಕೆ ಹೊಸ ಆಯಾಮವನ್ನು ನೀಡುತ್ತಿದೆ~ ಎಂದು ಚಿಂತಕ ಡಾ.ಜಿ.ರಾಮಕೃಷ್ಣ ಹೇಳಿದರು. <br /> <br /> ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅಯೋಜಿಸಿದ್ದ ಸಂಚಯ ಪತ್ರಿಕೆಯ ಬೆಳ್ಳಿಹಬ್ಬದ ಸಮಾರಂಭದಲ್ಲಿ ಪತ್ರಿಕೆಯ ನೂರನೇ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, `ಸಂಚಯ ಒಂದು ವಿಶಿಷ್ಟ ಸಾಹಿತ್ಯಿಕ ಪತ್ರಿಕೆ. ಯಾವುದೇ ಒಂದು ಪತ್ರಿಕೆ ಎಷ್ಟು ಪ್ರಸಾರವಾಗುತ್ತದೆ ಎಂಬುದಕ್ಕಿಂತ ಆ ಪತ್ರಿಕೆ ಪ್ರತಿಪಾದಿಸುವ ಮೌಲ್ಯ ದೊಡ್ಡದು~ ಎಂದರು. <br /> <br /> ಸಾಹಿತಿ ಚಂದ್ರಶೇಖರ ಪಾಟೀಲ ಮಾತನಾಡಿ, `ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತ್ಯ ಪತ್ರಿಕೆಗಳ ಪ್ರಸ್ತುತೆಯ ಕುರಿತು ಚರ್ಚೆ, ಸಂವಾದಗಳು ನಡೆಯಬೇಕಾದ ಅಗತ್ಯವಿದೆ~ ಎಂದು ಹೇಳಿದರು.`ಪತ್ರಿಕೆಯ ಗಾತ್ರಕ್ಕಿಂತ ಅದು ಎಷ್ಟು ಜನರನ್ನು ತಲುಪುತ್ತದೆ ಎಂಬುದು ಮುಖ್ಯ. ಒಂದು ಸಾಹಿತ್ಯದ ಪತ್ರಿಕೆ ಬೆಳ್ಳಿಹಬ್ಬವನ್ನು ಆಚರಿಸಿಕೊಳ್ಳುತ್ತಿರುವುದು ಕನ್ನಡದ ಹೆಮ್ಮೆ~ ಎಂದರು. <br /> <br /> `ಒಂದು ಪತ್ರಿಕೆ ಹೆಚ್ಚು ದಿನ ಉಳಿಯಬೇಕಾದರೆ ಓದುಗರಲ್ಲಿ ಹೆಚ್ಚು ವಿಶ್ವಾಸಾರ್ಹತೆಯನ್ನು ಮೂಡಿಸಬೇಕು ಮತ್ತು ಲಾಭ - ನಷ್ಟಗಳ ಬಗ್ಗೆ ಯೋಚಿಸದೇ ಬದ್ದತೆಯಿಂದ ಕೆಲಸ ಮಾಡಬೇಕು~ ಎಂದು ಹೇಳಿದರು.<br /> ವಿಮರ್ಶಕಿ ತಾರಿಣಿ ಶುಭದಾಯಿನಿ, ಲೇಖಕ ಕೃಷ್ಣಮೂರ್ತಿ ಬಿಳಿಗೆರೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: `</strong>ಸಮಕಾಲೀನ ಸಾಹಿತ್ಯದ ವಿಷಯವನ್ನು ತಿಳಿಸುವ ಮೂಲಕ ಸಂಚಯ ಪತ್ರಿಕೆಯು ಸಾಹಿತ್ಯದ ಅಧ್ಯಯನಕ್ಕೆ ಹೊಸ ಆಯಾಮವನ್ನು ನೀಡುತ್ತಿದೆ~ ಎಂದು ಚಿಂತಕ ಡಾ.ಜಿ.ರಾಮಕೃಷ್ಣ ಹೇಳಿದರು. <br /> <br /> ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅಯೋಜಿಸಿದ್ದ ಸಂಚಯ ಪತ್ರಿಕೆಯ ಬೆಳ್ಳಿಹಬ್ಬದ ಸಮಾರಂಭದಲ್ಲಿ ಪತ್ರಿಕೆಯ ನೂರನೇ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, `ಸಂಚಯ ಒಂದು ವಿಶಿಷ್ಟ ಸಾಹಿತ್ಯಿಕ ಪತ್ರಿಕೆ. ಯಾವುದೇ ಒಂದು ಪತ್ರಿಕೆ ಎಷ್ಟು ಪ್ರಸಾರವಾಗುತ್ತದೆ ಎಂಬುದಕ್ಕಿಂತ ಆ ಪತ್ರಿಕೆ ಪ್ರತಿಪಾದಿಸುವ ಮೌಲ್ಯ ದೊಡ್ಡದು~ ಎಂದರು. <br /> <br /> ಸಾಹಿತಿ ಚಂದ್ರಶೇಖರ ಪಾಟೀಲ ಮಾತನಾಡಿ, `ಸಾಹಿತ್ಯ ಸಮ್ಮೇಳನಗಳಲ್ಲಿ ಸಾಹಿತ್ಯ ಪತ್ರಿಕೆಗಳ ಪ್ರಸ್ತುತೆಯ ಕುರಿತು ಚರ್ಚೆ, ಸಂವಾದಗಳು ನಡೆಯಬೇಕಾದ ಅಗತ್ಯವಿದೆ~ ಎಂದು ಹೇಳಿದರು.`ಪತ್ರಿಕೆಯ ಗಾತ್ರಕ್ಕಿಂತ ಅದು ಎಷ್ಟು ಜನರನ್ನು ತಲುಪುತ್ತದೆ ಎಂಬುದು ಮುಖ್ಯ. ಒಂದು ಸಾಹಿತ್ಯದ ಪತ್ರಿಕೆ ಬೆಳ್ಳಿಹಬ್ಬವನ್ನು ಆಚರಿಸಿಕೊಳ್ಳುತ್ತಿರುವುದು ಕನ್ನಡದ ಹೆಮ್ಮೆ~ ಎಂದರು. <br /> <br /> `ಒಂದು ಪತ್ರಿಕೆ ಹೆಚ್ಚು ದಿನ ಉಳಿಯಬೇಕಾದರೆ ಓದುಗರಲ್ಲಿ ಹೆಚ್ಚು ವಿಶ್ವಾಸಾರ್ಹತೆಯನ್ನು ಮೂಡಿಸಬೇಕು ಮತ್ತು ಲಾಭ - ನಷ್ಟಗಳ ಬಗ್ಗೆ ಯೋಚಿಸದೇ ಬದ್ದತೆಯಿಂದ ಕೆಲಸ ಮಾಡಬೇಕು~ ಎಂದು ಹೇಳಿದರು.<br /> ವಿಮರ್ಶಕಿ ತಾರಿಣಿ ಶುಭದಾಯಿನಿ, ಲೇಖಕ ಕೃಷ್ಣಮೂರ್ತಿ ಬಿಳಿಗೆರೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>