<p>ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇಂದು (ಡಿಸೆಂಬರ್ 15) ಸರ್ವೇ ಶಾಮೆಕಾದಶಿ ಆಚರಿಸಲಾಗುತ್ತದೆ. ಈ ದಿನ ರಾತ್ರಿ 9.51ರವರೆಗೆ ಇದರ ಆಚರಣೆ ಮಾಡಬಹುದು. ಏಕಾದಶಿ ತಿಥಿಯ ಆಚರಣೆಯ ಮಹತ್ವವೇನು? ಇಂದು ಪಾಲಿಸಬೇಕಾದ ನಿಯಮಗಳು ಯಾವುವು ಎಂಬುದನ್ನು ತಿಳಿಯೋಣ.</p><p>ಏಕಾದಶಿ ಹಿಂದೂಗಳ ಪವಿತ್ರ ಹಬ್ಬ ಹಾಗೂ ವಿಶೇಷ ದಿನವೆಂದು ಪರಿಗಣಿಸಲಾಗುತ್ತದೆ. ಏಕಾದಶಿ ವಿಷ್ಣುವಿಗೆ ಪ್ರಿಯವಾದ ದಿನ. ಈ ದಿನ ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ, ಲಕ್ಷ್ಮೀ ನಾರಾಯಣನನ್ನು ಭಕ್ತಿಯಿಂದ ಪೂಜಿಸಿ. ಇಡೀ ದಿನ ಉಪವಾಸ ಮಾಡುವುದರಿಂದ ಶುಭ ಫಲ ದೊರೆಯಲಿದೆ. </p>.ಮೋಕ್ಷದ ಏಕಾದಶಿ: ಹಿನ್ನೆಲೆ, ಆಚರಣೆಯ ಮಹತ್ವವೇನು? ಇಲ್ಲಿದೆ ಮಾಹಿತಿ.ಪ್ರಧಾನಿ ಮೋದಿ ಮೇಲೆ ಬುಧ ಗ್ರಹದ ಕೆಂಗಣ್ಣು: ಬಿಹಾರ ಚುನಾವಣೆ ಮೇಲೆ ಪರಿಣಾಮವೇನು?.<p>ದೇವರ ಮನೆಯ ಪೂಜಾ ಮಂಟಪ ಸ್ವಚ್ಛಗೊಳಿಸಿ, ಲಕ್ಷ್ಮೀ ನಾರಾಯಣ ವಿಗ್ರಹಕ್ಕೆ ಶ್ರೀಗಂಧ ಹಾಗೂ ಕುಂಕುಮದಿಂದ ಅಲಂಕರ ಮಾಡಬೇಕು. ಮನೆಯ ಬಾಗಿಲಿಗೆ ಮಾವಿನ ತೋರಣ ಕಟ್ಟಿ, ಹಸುವಿನ ಸಗಣಿಯಿಂದ ದೀಪ ತಯಾರಿಸಿ ಆ ದೀಪವನ್ನು ದೇವರ ಮನೆಯಲ್ಲಿ ಹಚ್ಚಬೇಕು.</p><p>ಈ ದಿನ ಉಪವಾಸ ಮಾಡಲು ಕಷ್ಟವಾದರೆ ಅಥವಾ ಆರೋಗ್ಯದಲ್ಲಿ ವ್ಯತ್ಯಾಸವಿದ್ದರೆ, ಹಾಲು ಮತ್ತು ಹಣ್ಣುಗಳನ್ನು ಸ್ಪೀಕರಿಸಬಹುದು. ಇತರರು ಶ್ರದ್ದೆಯಿಂದ ಉಪವಾಸದ ವ್ರತವನ್ನು ಆಚರಿಸಿ ಪೂಜೆಯಾದ ನಂತರ ಆಹಾರವನ್ನು ಸೇವಿಸುವುದು ಸೂಕ್ತ. </p><p>ಉಪವಾಸದ ನಂತರ ಅನ್ನ, ಉಪ್ಪು ಮತ್ತು ಧಾನ್ಯದಂತಹ ಉತ್ಪನ್ನಗಳ ಸೇವನೆ ತಪ್ಪಿಸಿ. ಇದರ ಬದಲಾಗಿ ಪಂಚಾಮೃತ, ಹಣ್ಣುಗಳನ್ನು ಸೇವನೆ ಉತ್ತಮ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.</p><p>ಏಕಾಶಿಯ ದಿನದಂದು ಮನೆಯಲ್ಲಿ ಪೂಜೆ ಮಾಡಿದ ನಂತರ ಹತ್ತಿರದ ದೇವಾಲಯಗಳಿಗೆ ಭೇಟಿ ಕೊಡಿ. ಸಾಧ್ಯವಾದರೆ ಸಂಜೆಯ ಸಮಯದಲ್ಲಿ ವಿಷ್ಣುವಿನ ಸಹಸ್ರ ನಾಮ ಪಠಿಸಿ. ಸಾಧ್ಯವಾದಷ್ಟು ದಾನ ಧರ್ಮ ಮಾಡುವುದರಿಂದ ಶ್ರೇಯಸ್ಸು ತಂದು ಕೊಡುತ್ತದೆ. </p><p>ಈ ದಿನ ಉಗುರುಗಳನ್ನು ಕತ್ತರಿಸುವುದು ಹಾಗೂ ಚೌರ ಮಾಡಿಸುವುದು ಅಶುಭ ಫಲಿತಾಂಶಕ್ಕೆ ಕಾರಣವಾಗಬಹುದು ಎಂದು ಜ್ಯೋತಿಷದಲ್ಲಿ ತಿಳಿಸಿದೆ. </p>.ಬುಧ ಗ್ರಹ ಕಾರಕತ್ವ: ಮಿಥುನ, ಕನ್ಯಾ ರಾಶಿಯ ಅಧಿಪತಿ ಶಕ್ತಿಗಳ ಬಗ್ಗೆ ತಿಳಿದುಕೊಳ್ಳಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇಂದು (ಡಿಸೆಂಬರ್ 15) ಸರ್ವೇ ಶಾಮೆಕಾದಶಿ ಆಚರಿಸಲಾಗುತ್ತದೆ. ಈ ದಿನ ರಾತ್ರಿ 9.51ರವರೆಗೆ ಇದರ ಆಚರಣೆ ಮಾಡಬಹುದು. ಏಕಾದಶಿ ತಿಥಿಯ ಆಚರಣೆಯ ಮಹತ್ವವೇನು? ಇಂದು ಪಾಲಿಸಬೇಕಾದ ನಿಯಮಗಳು ಯಾವುವು ಎಂಬುದನ್ನು ತಿಳಿಯೋಣ.</p><p>ಏಕಾದಶಿ ಹಿಂದೂಗಳ ಪವಿತ್ರ ಹಬ್ಬ ಹಾಗೂ ವಿಶೇಷ ದಿನವೆಂದು ಪರಿಗಣಿಸಲಾಗುತ್ತದೆ. ಏಕಾದಶಿ ವಿಷ್ಣುವಿಗೆ ಪ್ರಿಯವಾದ ದಿನ. ಈ ದಿನ ಬೆಳಿಗ್ಗೆ ಬೇಗನೆ ಎದ್ದು ಸ್ನಾನ ಮಾಡಿ, ಲಕ್ಷ್ಮೀ ನಾರಾಯಣನನ್ನು ಭಕ್ತಿಯಿಂದ ಪೂಜಿಸಿ. ಇಡೀ ದಿನ ಉಪವಾಸ ಮಾಡುವುದರಿಂದ ಶುಭ ಫಲ ದೊರೆಯಲಿದೆ. </p>.ಮೋಕ್ಷದ ಏಕಾದಶಿ: ಹಿನ್ನೆಲೆ, ಆಚರಣೆಯ ಮಹತ್ವವೇನು? ಇಲ್ಲಿದೆ ಮಾಹಿತಿ.ಪ್ರಧಾನಿ ಮೋದಿ ಮೇಲೆ ಬುಧ ಗ್ರಹದ ಕೆಂಗಣ್ಣು: ಬಿಹಾರ ಚುನಾವಣೆ ಮೇಲೆ ಪರಿಣಾಮವೇನು?.<p>ದೇವರ ಮನೆಯ ಪೂಜಾ ಮಂಟಪ ಸ್ವಚ್ಛಗೊಳಿಸಿ, ಲಕ್ಷ್ಮೀ ನಾರಾಯಣ ವಿಗ್ರಹಕ್ಕೆ ಶ್ರೀಗಂಧ ಹಾಗೂ ಕುಂಕುಮದಿಂದ ಅಲಂಕರ ಮಾಡಬೇಕು. ಮನೆಯ ಬಾಗಿಲಿಗೆ ಮಾವಿನ ತೋರಣ ಕಟ್ಟಿ, ಹಸುವಿನ ಸಗಣಿಯಿಂದ ದೀಪ ತಯಾರಿಸಿ ಆ ದೀಪವನ್ನು ದೇವರ ಮನೆಯಲ್ಲಿ ಹಚ್ಚಬೇಕು.</p><p>ಈ ದಿನ ಉಪವಾಸ ಮಾಡಲು ಕಷ್ಟವಾದರೆ ಅಥವಾ ಆರೋಗ್ಯದಲ್ಲಿ ವ್ಯತ್ಯಾಸವಿದ್ದರೆ, ಹಾಲು ಮತ್ತು ಹಣ್ಣುಗಳನ್ನು ಸ್ಪೀಕರಿಸಬಹುದು. ಇತರರು ಶ್ರದ್ದೆಯಿಂದ ಉಪವಾಸದ ವ್ರತವನ್ನು ಆಚರಿಸಿ ಪೂಜೆಯಾದ ನಂತರ ಆಹಾರವನ್ನು ಸೇವಿಸುವುದು ಸೂಕ್ತ. </p><p>ಉಪವಾಸದ ನಂತರ ಅನ್ನ, ಉಪ್ಪು ಮತ್ತು ಧಾನ್ಯದಂತಹ ಉತ್ಪನ್ನಗಳ ಸೇವನೆ ತಪ್ಪಿಸಿ. ಇದರ ಬದಲಾಗಿ ಪಂಚಾಮೃತ, ಹಣ್ಣುಗಳನ್ನು ಸೇವನೆ ಉತ್ತಮ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ.</p><p>ಏಕಾಶಿಯ ದಿನದಂದು ಮನೆಯಲ್ಲಿ ಪೂಜೆ ಮಾಡಿದ ನಂತರ ಹತ್ತಿರದ ದೇವಾಲಯಗಳಿಗೆ ಭೇಟಿ ಕೊಡಿ. ಸಾಧ್ಯವಾದರೆ ಸಂಜೆಯ ಸಮಯದಲ್ಲಿ ವಿಷ್ಣುವಿನ ಸಹಸ್ರ ನಾಮ ಪಠಿಸಿ. ಸಾಧ್ಯವಾದಷ್ಟು ದಾನ ಧರ್ಮ ಮಾಡುವುದರಿಂದ ಶ್ರೇಯಸ್ಸು ತಂದು ಕೊಡುತ್ತದೆ. </p><p>ಈ ದಿನ ಉಗುರುಗಳನ್ನು ಕತ್ತರಿಸುವುದು ಹಾಗೂ ಚೌರ ಮಾಡಿಸುವುದು ಅಶುಭ ಫಲಿತಾಂಶಕ್ಕೆ ಕಾರಣವಾಗಬಹುದು ಎಂದು ಜ್ಯೋತಿಷದಲ್ಲಿ ತಿಳಿಸಿದೆ. </p>.ಬುಧ ಗ್ರಹ ಕಾರಕತ್ವ: ಮಿಥುನ, ಕನ್ಯಾ ರಾಶಿಯ ಅಧಿಪತಿ ಶಕ್ತಿಗಳ ಬಗ್ಗೆ ತಿಳಿದುಕೊಳ್ಳಿ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>