<p><strong>ನವದೆಹಲಿ:</strong> ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 8ನೇ ಬಾರಿ ಮಂಡಿಸುತ್ತಿರುವ ಬಜೆಟ್ನಲ್ಲಿ ಘೋಷಣೆಯಾದ ಅನುದಾನಗಳಲ್ಲಿ ಬಿಹಾರ ಸಿಂಹಪಾಲು ಪಡೆದಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಹಾಗೂ ಈಶಾನ್ಯ ರಾಜ್ಯಗಳಿಗೆ ಹೆಚ್ಚಿನ ಉತ್ತೇಜನ ದೊರೆತಿವೆ.</p>.<h3>ಬಿಹಾರ</h3><p><strong>ಮಖಾನ ಮಂಡಳಿ ಸ್ಥಾಪನೆ:</strong> ಅಧಿಕ ಪೋಷಕಾಂಶಗಳ ಆಗರವಾಗಿರುವ ಹಾಗೂ ಅತಿ ಹೆಚ್ಚು ಬೇಡಿಕೆ ಹೊಂದಿರುವ ಕಮಲ ಹೂವಿನ ಬೀಜ (ಮಖಾನ) ಮಂಡಳಿಯನ್ನು ಬಿಹಾರಕ್ಕೆ ಕೇಂದ್ರ ಮಂಜೂರು ಮಾಡಿದೆ. ಈ ಉತ್ಪಾದನೆಯಲ್ಲಿ ತೊಡಗುವ ರೈತರಿಗೆ ರೈತ ಉತ್ಪಾದಕ ಸಂಸ್ಥೆಗಳ (FPO) ಮೂಲಕ ಉತ್ತೇಜನ ಸಿಗಲಿದೆ. ಜತೆಗೆ ಸರ್ಕಾರದಿಂದ ದೊರೆಯುವ ಎಲ್ಲಾ ಯೋಜನೆಗಳು ಇವರಿಗೆ ಸಿಗಲಿವೆ. ಆಹಾರ ಸಂಸ್ಕರಣೆಗೂ ಒತ್ತು.</p><p><strong>ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ:</strong> ಪೂರ್ವೋದಯ ಯೋಜನೆ ಭಾಗವಾಗಿ ಬಿಹಾರದಲ್ಲಿ ರಾಷ್ಟ್ರೀಯ ಆಹಾರ ತಂತ್ರಜ್ಞಾನ, ಉದ್ಯಮ ಮತ್ತು ನಿರ್ವಹಣಾ ಸಂಸ್ಥೆಯನ್ನು ಬಜೆಟ್ನಲ್ಲಿ ಘೋಷಿಸಲಾಗಿದೆ. </p><p><strong>ಐಐಟಿ ಪಟ್ನಾ ವಿಸ್ತರಣೆ:</strong> ಯುವಕರಿಗೆ ಉದ್ಯೋಗಾವಕಾಶ ಹೆಚ್ಚಿಸುವ ಉದ್ದೇಶದಿಂದ ಐಐಟಿ ಪಟ್ನಾ ಸಾಮರ್ಥ್ಯ ಹೆಚ್ಚಿಸಲಾಗುವುದು ಎಂದು ಬಜೆಟ್ನಲ್ಲಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.</p><p><strong>ಗ್ರೀನ್ ಫೀಲ್ಡ್ ಏರ್ಪೋರ್ಟ್:</strong> ನಾಗರಿಕ ವಿಮಾನಯಾನಕ್ಕೆ ಇನ್ನಷ್ಟು ಉತ್ತೇನ ನೀಡುವುದರಿಂದ ಮುಂದಿನ 10 ವರ್ಷಗಳಲ್ಲಿ ಹೆಚ್ಚುವರಿ 4 ಕೋಟಿ ಪ್ರಯಾಣಿಕರು ಹೆಚ್ಚಳವಾಗುವ ನಿರೀಕ್ಷೆಯನ್ನು ಕೇಂದ್ರ ಹೊಂದಿದೆ. ಇದಕ್ಕೆ ಪೂರಕವಾಗಿ ಗ್ರೀನ್ ಫೀಲ್ಡ್ ಏರ್ಪೋರ್ಟ್ ಬಿಹಾರಕ್ಕೆ ಮಂಜೂರು ಮಾಡುತ್ತಿರುವುದಾಗಿ ಹೇಳಿದ್ದಾರೆ.</p><p><strong>ಕೋಶಿ ಕಾಲುವೆ ಯೋಜನೆ:</strong> ಬಿಹಾರದ ಮಿಥಿಲಾಂಚಲದಲ್ಲಿರುವ ಕೋಶಿ ಕಾಲುವೆ ಯೋಜನೆಗೆ ಬಜೆಟ್ನಲ್ಲಿ ಅನುದಾನ ಘೋಷಣೆಯಾಗಿದೆ. ಗಂಗಾ, ಗಂಡಕಿ ಮತ್ತು ಮಹಾನಂದಾ ನದಿ ಹರಿಯುವ ಈ ಪ್ರದೇಶದ ನೀರಾವರಿ ಯೋಜನೆ ಉತ್ತೇಜನಕ್ಕೆ ವಿತ್ತಸಚಿವೆ ನಿರ್ಮಲಾ ಘೋಷಿಸಿದ್ದಾರೆ. ಈ ಯೋಜನೆ ಅನುಷ್ಠಾನದಿಂದ 50 ಸಾವಿರ ಹೆಕ್ಟೇರ್ ಪ್ರದೇಶ ನೀರಾವರಿಯಾಗಲಿದೆ ಎಂದು ಬಜೆಟ್ನಲ್ಲಿ ಹೇಳಲಾಗಿದೆ.</p>.<h3>ಅಂಡಮಾನ್ ಮತ್ತು ನಿಕೋಬಾರ್ ಹಾಗೂ ಲಕ್ಷದ್ವೀಪ</h3><p>ಜಾಗತಿಕ ಮತ್ಸೋದ್ಯಮ ಬೆಳವಣಿಗೆಯ ಲಾಭವನ್ನು ಪಡೆಯುವ ಉದ್ದೇಶದಿಂದ ಸಾಗರಕ್ಕೆ ಹೊಂದಿಕೊಂಡಿರುವ ಭೂಪ್ರದೇಶಗಳಿಗೆ ಹೆಚ್ಚಿನ ಘೋಷಣೆ ಬಜೆಟ್ನಲ್ಲಿ ಮಾಡಲಾಗಿದೆ. ವಾರ್ಷಿಕ ₹60 ಸಾವಿರ ಕೋಟಿ ರಫ್ತು ವ್ಯವಹಾರನವ್ನು ಮತ್ಸೋದ್ಯಮ ಹೊಂದಿದೆ. ಇದಕ್ಕಾಗಿ ಭಾರತೀಯ ವಿಶೇಷ ಆರ್ಥಿಕ ವಲಯವನ್ನು ನಿರ್ಮಿಸುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಇದರ ಭಾಗವಾಗಿ ಅಂಡಮಾನ್, ನಿಕೋಬಾರ್ ಮತ್ತು ಲಕ್ಷದ್ವೀಪಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ.</p>.<h3>ಅಸ್ಸಾಂ</h3><p>ಸಾರಜನಕ (ಯೂರಿಯಾ) ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ಪೂರ್ವ ಭಾಗದಲ್ಲಿನ ಮೂರು ಯೂರಿಯಾ ಘಟಕಗಳನ್ನು ಮರಳಿ ತೆರೆಯುವುದಾಗಿ ಘೋಷಿಸಲಾಗಿದೆ. 12.7 ಲಕ್ಷ ಮೆಟ್ರಿಕ್ ಟನ್ ವಾರ್ಷಿಕ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಘಟಕವನ್ನು ಅಸ್ಸಾಂನಲ್ಲಿ ಆರಂಭಿಸಲು ಅನುದಾನ ನೀಡುವುದಾಗಿ ಘೋಷಿಸಲಾಗಿದೆ.</p>.<h3>ಈಶಾನ್ಯ ಪ್ರಾಂತ್ಯ</h3><p><strong>ಪೋಷಣ್ 2.0:</strong> ದೇಶದ ಅಂಗವಾಡಿಯಲ್ಲಿ ಪೋಷಣ್ 2.0 ಯೋಜನೆಯನ್ನು ಜಾರಿಗೊಳಿಸಲು ಬಜೆಟ್ನಲ್ಲಿ ಘೋಷಿಸಲಾಗಿದೆ. ಇದರಿಂದ 8 ಕೋಟಿ ಮಕ್ಕಳಿಗೆ ಹಾಗೂ 1 ಕೋಟಿ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ನೆರವಾಗಲಿದೆ. ಈಶಾನ್ಯ ರಾಜ್ಯಗಳನ್ನೂ ಒಳಗೊಂಡಂತೆ 20 ಲಕ್ಷ ವಯಸ್ಕ ಬಾಲಕಿಯರಿಗೆ ನೆರವಾಗಲಿದೆ ಎಂದು ಹೇಳಲಾಗಿದೆ.</p><p><strong>ಉಡಾನ್ ಯೋಜನೆ:</strong> ಪ್ರಾದೇಶಿಕ ಸಂಪರ್ಕ ಯೋಜನೆಯ ಭಾಗವಾಗಿ ಜಾರಿಗೆ ಬಂದ ‘ಉಡಾನ್’ ಅನ್ನು 120 ಹೊಸ ಸ್ಥಳಗಳಿಗೆ ವಿಸ್ತರಿಸುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಮುಂದಿನ ಹತ್ತು ವರ್ಷಗಳಲ್ಲಿ ವಾಯುಯಾನ ಅಳವಡಿಸಿಕೊಳ್ಳುವ ಹೆಚ್ಚುವರಿ 4 ಕೋಟಿ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಹಾಗೂ ಪರ್ವತ ಪ್ರದೇಶ ಒಳಗೊಂಡ ಈಶಾನ್ಯ ರಾಜ್ಯಗಳಿಗೆ ಈ ಯೋಜನೆ ವಿಸ್ತರಿಸುವ ಕುರಿತು ಪ್ರಸ್ತಾಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 8ನೇ ಬಾರಿ ಮಂಡಿಸುತ್ತಿರುವ ಬಜೆಟ್ನಲ್ಲಿ ಘೋಷಣೆಯಾದ ಅನುದಾನಗಳಲ್ಲಿ ಬಿಹಾರ ಸಿಂಹಪಾಲು ಪಡೆದಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಹಾಗೂ ಈಶಾನ್ಯ ರಾಜ್ಯಗಳಿಗೆ ಹೆಚ್ಚಿನ ಉತ್ತೇಜನ ದೊರೆತಿವೆ.</p>.<h3>ಬಿಹಾರ</h3><p><strong>ಮಖಾನ ಮಂಡಳಿ ಸ್ಥಾಪನೆ:</strong> ಅಧಿಕ ಪೋಷಕಾಂಶಗಳ ಆಗರವಾಗಿರುವ ಹಾಗೂ ಅತಿ ಹೆಚ್ಚು ಬೇಡಿಕೆ ಹೊಂದಿರುವ ಕಮಲ ಹೂವಿನ ಬೀಜ (ಮಖಾನ) ಮಂಡಳಿಯನ್ನು ಬಿಹಾರಕ್ಕೆ ಕೇಂದ್ರ ಮಂಜೂರು ಮಾಡಿದೆ. ಈ ಉತ್ಪಾದನೆಯಲ್ಲಿ ತೊಡಗುವ ರೈತರಿಗೆ ರೈತ ಉತ್ಪಾದಕ ಸಂಸ್ಥೆಗಳ (FPO) ಮೂಲಕ ಉತ್ತೇಜನ ಸಿಗಲಿದೆ. ಜತೆಗೆ ಸರ್ಕಾರದಿಂದ ದೊರೆಯುವ ಎಲ್ಲಾ ಯೋಜನೆಗಳು ಇವರಿಗೆ ಸಿಗಲಿವೆ. ಆಹಾರ ಸಂಸ್ಕರಣೆಗೂ ಒತ್ತು.</p><p><strong>ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ:</strong> ಪೂರ್ವೋದಯ ಯೋಜನೆ ಭಾಗವಾಗಿ ಬಿಹಾರದಲ್ಲಿ ರಾಷ್ಟ್ರೀಯ ಆಹಾರ ತಂತ್ರಜ್ಞಾನ, ಉದ್ಯಮ ಮತ್ತು ನಿರ್ವಹಣಾ ಸಂಸ್ಥೆಯನ್ನು ಬಜೆಟ್ನಲ್ಲಿ ಘೋಷಿಸಲಾಗಿದೆ. </p><p><strong>ಐಐಟಿ ಪಟ್ನಾ ವಿಸ್ತರಣೆ:</strong> ಯುವಕರಿಗೆ ಉದ್ಯೋಗಾವಕಾಶ ಹೆಚ್ಚಿಸುವ ಉದ್ದೇಶದಿಂದ ಐಐಟಿ ಪಟ್ನಾ ಸಾಮರ್ಥ್ಯ ಹೆಚ್ಚಿಸಲಾಗುವುದು ಎಂದು ಬಜೆಟ್ನಲ್ಲಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.</p><p><strong>ಗ್ರೀನ್ ಫೀಲ್ಡ್ ಏರ್ಪೋರ್ಟ್:</strong> ನಾಗರಿಕ ವಿಮಾನಯಾನಕ್ಕೆ ಇನ್ನಷ್ಟು ಉತ್ತೇನ ನೀಡುವುದರಿಂದ ಮುಂದಿನ 10 ವರ್ಷಗಳಲ್ಲಿ ಹೆಚ್ಚುವರಿ 4 ಕೋಟಿ ಪ್ರಯಾಣಿಕರು ಹೆಚ್ಚಳವಾಗುವ ನಿರೀಕ್ಷೆಯನ್ನು ಕೇಂದ್ರ ಹೊಂದಿದೆ. ಇದಕ್ಕೆ ಪೂರಕವಾಗಿ ಗ್ರೀನ್ ಫೀಲ್ಡ್ ಏರ್ಪೋರ್ಟ್ ಬಿಹಾರಕ್ಕೆ ಮಂಜೂರು ಮಾಡುತ್ತಿರುವುದಾಗಿ ಹೇಳಿದ್ದಾರೆ.</p><p><strong>ಕೋಶಿ ಕಾಲುವೆ ಯೋಜನೆ:</strong> ಬಿಹಾರದ ಮಿಥಿಲಾಂಚಲದಲ್ಲಿರುವ ಕೋಶಿ ಕಾಲುವೆ ಯೋಜನೆಗೆ ಬಜೆಟ್ನಲ್ಲಿ ಅನುದಾನ ಘೋಷಣೆಯಾಗಿದೆ. ಗಂಗಾ, ಗಂಡಕಿ ಮತ್ತು ಮಹಾನಂದಾ ನದಿ ಹರಿಯುವ ಈ ಪ್ರದೇಶದ ನೀರಾವರಿ ಯೋಜನೆ ಉತ್ತೇಜನಕ್ಕೆ ವಿತ್ತಸಚಿವೆ ನಿರ್ಮಲಾ ಘೋಷಿಸಿದ್ದಾರೆ. ಈ ಯೋಜನೆ ಅನುಷ್ಠಾನದಿಂದ 50 ಸಾವಿರ ಹೆಕ್ಟೇರ್ ಪ್ರದೇಶ ನೀರಾವರಿಯಾಗಲಿದೆ ಎಂದು ಬಜೆಟ್ನಲ್ಲಿ ಹೇಳಲಾಗಿದೆ.</p>.<h3>ಅಂಡಮಾನ್ ಮತ್ತು ನಿಕೋಬಾರ್ ಹಾಗೂ ಲಕ್ಷದ್ವೀಪ</h3><p>ಜಾಗತಿಕ ಮತ್ಸೋದ್ಯಮ ಬೆಳವಣಿಗೆಯ ಲಾಭವನ್ನು ಪಡೆಯುವ ಉದ್ದೇಶದಿಂದ ಸಾಗರಕ್ಕೆ ಹೊಂದಿಕೊಂಡಿರುವ ಭೂಪ್ರದೇಶಗಳಿಗೆ ಹೆಚ್ಚಿನ ಘೋಷಣೆ ಬಜೆಟ್ನಲ್ಲಿ ಮಾಡಲಾಗಿದೆ. ವಾರ್ಷಿಕ ₹60 ಸಾವಿರ ಕೋಟಿ ರಫ್ತು ವ್ಯವಹಾರನವ್ನು ಮತ್ಸೋದ್ಯಮ ಹೊಂದಿದೆ. ಇದಕ್ಕಾಗಿ ಭಾರತೀಯ ವಿಶೇಷ ಆರ್ಥಿಕ ವಲಯವನ್ನು ನಿರ್ಮಿಸುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಇದರ ಭಾಗವಾಗಿ ಅಂಡಮಾನ್, ನಿಕೋಬಾರ್ ಮತ್ತು ಲಕ್ಷದ್ವೀಪಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ.</p>.<h3>ಅಸ್ಸಾಂ</h3><p>ಸಾರಜನಕ (ಯೂರಿಯಾ) ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ಪೂರ್ವ ಭಾಗದಲ್ಲಿನ ಮೂರು ಯೂರಿಯಾ ಘಟಕಗಳನ್ನು ಮರಳಿ ತೆರೆಯುವುದಾಗಿ ಘೋಷಿಸಲಾಗಿದೆ. 12.7 ಲಕ್ಷ ಮೆಟ್ರಿಕ್ ಟನ್ ವಾರ್ಷಿಕ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಘಟಕವನ್ನು ಅಸ್ಸಾಂನಲ್ಲಿ ಆರಂಭಿಸಲು ಅನುದಾನ ನೀಡುವುದಾಗಿ ಘೋಷಿಸಲಾಗಿದೆ.</p>.<h3>ಈಶಾನ್ಯ ಪ್ರಾಂತ್ಯ</h3><p><strong>ಪೋಷಣ್ 2.0:</strong> ದೇಶದ ಅಂಗವಾಡಿಯಲ್ಲಿ ಪೋಷಣ್ 2.0 ಯೋಜನೆಯನ್ನು ಜಾರಿಗೊಳಿಸಲು ಬಜೆಟ್ನಲ್ಲಿ ಘೋಷಿಸಲಾಗಿದೆ. ಇದರಿಂದ 8 ಕೋಟಿ ಮಕ್ಕಳಿಗೆ ಹಾಗೂ 1 ಕೋಟಿ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ನೆರವಾಗಲಿದೆ. ಈಶಾನ್ಯ ರಾಜ್ಯಗಳನ್ನೂ ಒಳಗೊಂಡಂತೆ 20 ಲಕ್ಷ ವಯಸ್ಕ ಬಾಲಕಿಯರಿಗೆ ನೆರವಾಗಲಿದೆ ಎಂದು ಹೇಳಲಾಗಿದೆ.</p><p><strong>ಉಡಾನ್ ಯೋಜನೆ:</strong> ಪ್ರಾದೇಶಿಕ ಸಂಪರ್ಕ ಯೋಜನೆಯ ಭಾಗವಾಗಿ ಜಾರಿಗೆ ಬಂದ ‘ಉಡಾನ್’ ಅನ್ನು 120 ಹೊಸ ಸ್ಥಳಗಳಿಗೆ ವಿಸ್ತರಿಸುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಮುಂದಿನ ಹತ್ತು ವರ್ಷಗಳಲ್ಲಿ ವಾಯುಯಾನ ಅಳವಡಿಸಿಕೊಳ್ಳುವ ಹೆಚ್ಚುವರಿ 4 ಕೋಟಿ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಹಾಗೂ ಪರ್ವತ ಪ್ರದೇಶ ಒಳಗೊಂಡ ಈಶಾನ್ಯ ರಾಜ್ಯಗಳಿಗೆ ಈ ಯೋಜನೆ ವಿಸ್ತರಿಸುವ ಕುರಿತು ಪ್ರಸ್ತಾಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>