<p><strong>ಶಿರಸಿ:</strong> ಜಾಗತಿಕ ಸೂಚಿ (ಜಿಐ ಟ್ಯಾಗ್) ಪಡೆದ ಬಳಿಕ ‘ಶಿರಸಿ ಸುಪಾರಿ’ ಎರಡು ವರ್ಷಗಳಲ್ಲಿ ₹ 600 ಕೋಟಿ ಮೊತ್ತದ ರಫ್ತು ವಹಿವಾಟು ಕಂಡಿದೆ.</p>.<p>ಶಿರಸಿ, ಸಿದ್ದಾಪುರ ಮತ್ತು ಯಲ್ಲಾಪುರ ಭಾಗದಲ್ಲಿ ಬೆಳೆಯಲಾಗುವ ಕೆಂಪಡಿಕೆ, ಚಾಲಿಗೆ ಇಲ್ಲಿನ ಟಿಎಸ್ಎಸ್ ಸಂಸ್ಥೆ 2019ರ ಮಾರ್ಚ್ನಲ್ಲಿ ಜಿಐ ಟ್ಯಾಗ್ ಪಡೆದುಕೊಂಡಿದೆ. ಈ ಟ್ಯಾಗ್ ಅಡಿಯಲ್ಲಿ ಸಂಸ್ಥೆ 2.04 ಲಕ್ಷ ಕ್ವಿಂಟಲ್ ಅಡಿಕೆ ವಹಿವಾಟು ನಡೆಸಿದೆ. ಇದು ದಾಖಲೆ ಪ್ರಮಾಣದ ವಹಿವಾಟು ಎಂಬುದು ಮಾರುಕಟ್ಟೆ ತಜ್ಞರ ಅಭಿಪ್ರಾಯ.</p>.<p>ಜಿಐ ಟ್ಯಾಗ್ ಪಡೆಯುವುದಕ್ಕೂ ಮೊದಲಿನ ಆರ್ಥಿಕ ವಹಿವಾಟಿಗೆ ಹೋಲಿಕೆ ಮಾಡಿದರೆ ಎರಡು ವರ್ಷಗಳಲ್ಲಿ ವ್ಯಾಪಾರದ ಮೊತ್ತ ಶೇ 25ರಿಂದ 30ರಷ್ಟು ಏರಿಕೆ ಕಂಡಿದೆ ಎಂದು ಸಂಸ್ಥೆ ಹೇಳಿದೆ.</p>.<p>‘ಜಿಐ ಟ್ಯಾಗ್ ಪಡೆದುಕೊಂಡ ಬಳಿಕ ಉತ್ತರ ಭಾರತದ ಮಾರುಕಟ್ಟೆಯಲ್ಲಿ ಈ ಭಾಗದ ಅಡಿಕೆಗೆ ಬೇಡಿಕೆ ವೃದ್ಧಿಯಾಗಿದೆ. ದರವೂ ಹೆಚ್ಚಿದೆ’ ಎನ್ನುತ್ತಾರೆ ಟಿಎಸ್ಎಸ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ.</p>.<p>‘ರೈತರಿಂದ ಖರೀದಿಸಿದ ಅಡಿಕೆಯನ್ನು ಗುಣಮಟ್ಟ ಆಧರಿಸಿ ಪ್ರತ್ಯೇಕಿಸುತ್ತೇವೆ. ಬೆಟ್ಟೆ, ಕೆಂಪಡಿಕೆ, ಚಾಲಿಯ ಪ್ರತ್ಯೇಕ ಬ್ರ್ಯಾಂಡಿಂಗ್ ಗಳನ್ನು ಪ್ರಾದೇಶಿಕ ಬೇಡಿಕೆಗೆ ಅನುಗುಣವಾಗಿ ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶಕ್ಕೆ ಕಳುಹಿಸುತ್ತಿದ್ದೇವೆ. ರಾಜ್ಯದಲ್ಲೂ ಹಲವೆಡೆ ಬೇಡಿಕೆ ಇದೆ’ ಎನ್ನುತ್ತಾರೆ ಅವರು.</p>.<p>‘ಅಡಿಕೆ ಬೆಲೆ ಸ್ಥಿತ್ಯಂತರಗೊಳ್ಳುತ್ತಲೇ ಇತ್ತು. ಜಿಐ ಟ್ಯಾಗ್ ಪಡೆದ ಬಳಿಕ ‘ಶಿರಸಿ ಸುಪಾರಿ’ ಬ್ರ್ಯಾಂಡ್ ಅಡಿಯಲ್ಲಿ ರಫ್ತು ಚಟುವಟಿಕೆ ಕೈಗೊಂಡಿದ್ದು ವಹಿವಾಟು ಹೆಚ್ಚುವ ಜತೆಗೆ ಉತ್ತಮ ಬೆಲೆ ಸಿಗುವಂತೆ ಮಾಡಿದೆ’ ಎಂದು ಅಭಿಪ್ರಾಯಪಟ್ಟರು.</p>.<p>*<br />ಜಿಐ ಟ್ಯಾಗ್ ಪಡೆದ ಬಳಿಕ ಶಿರಸಿ ಸುಪಾರಿಯ ಗುಣಮಟ್ಟದ ಬಗ್ಗೆ ಉತ್ತರ ಭಾರತವೂ ಸೇರಿದಂತೆ ದೇಶದ ವಿವಿಧೆಡೆ ಗ್ರಾಹಕರಲ್ಲಿ ವಿಶ್ವಾಸ ಮೂಡಿದ್ದೆ ಉತ್ತಮ ಬೆಲೆ ದೊರೆಯಲು ಕಾರಣ.<br /><em><strong>-ರವೀಶ ಹೆಗಡೆ, ಟಿಎಸ್ಎಸ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಸಿ:</strong> ಜಾಗತಿಕ ಸೂಚಿ (ಜಿಐ ಟ್ಯಾಗ್) ಪಡೆದ ಬಳಿಕ ‘ಶಿರಸಿ ಸುಪಾರಿ’ ಎರಡು ವರ್ಷಗಳಲ್ಲಿ ₹ 600 ಕೋಟಿ ಮೊತ್ತದ ರಫ್ತು ವಹಿವಾಟು ಕಂಡಿದೆ.</p>.<p>ಶಿರಸಿ, ಸಿದ್ದಾಪುರ ಮತ್ತು ಯಲ್ಲಾಪುರ ಭಾಗದಲ್ಲಿ ಬೆಳೆಯಲಾಗುವ ಕೆಂಪಡಿಕೆ, ಚಾಲಿಗೆ ಇಲ್ಲಿನ ಟಿಎಸ್ಎಸ್ ಸಂಸ್ಥೆ 2019ರ ಮಾರ್ಚ್ನಲ್ಲಿ ಜಿಐ ಟ್ಯಾಗ್ ಪಡೆದುಕೊಂಡಿದೆ. ಈ ಟ್ಯಾಗ್ ಅಡಿಯಲ್ಲಿ ಸಂಸ್ಥೆ 2.04 ಲಕ್ಷ ಕ್ವಿಂಟಲ್ ಅಡಿಕೆ ವಹಿವಾಟು ನಡೆಸಿದೆ. ಇದು ದಾಖಲೆ ಪ್ರಮಾಣದ ವಹಿವಾಟು ಎಂಬುದು ಮಾರುಕಟ್ಟೆ ತಜ್ಞರ ಅಭಿಪ್ರಾಯ.</p>.<p>ಜಿಐ ಟ್ಯಾಗ್ ಪಡೆಯುವುದಕ್ಕೂ ಮೊದಲಿನ ಆರ್ಥಿಕ ವಹಿವಾಟಿಗೆ ಹೋಲಿಕೆ ಮಾಡಿದರೆ ಎರಡು ವರ್ಷಗಳಲ್ಲಿ ವ್ಯಾಪಾರದ ಮೊತ್ತ ಶೇ 25ರಿಂದ 30ರಷ್ಟು ಏರಿಕೆ ಕಂಡಿದೆ ಎಂದು ಸಂಸ್ಥೆ ಹೇಳಿದೆ.</p>.<p>‘ಜಿಐ ಟ್ಯಾಗ್ ಪಡೆದುಕೊಂಡ ಬಳಿಕ ಉತ್ತರ ಭಾರತದ ಮಾರುಕಟ್ಟೆಯಲ್ಲಿ ಈ ಭಾಗದ ಅಡಿಕೆಗೆ ಬೇಡಿಕೆ ವೃದ್ಧಿಯಾಗಿದೆ. ದರವೂ ಹೆಚ್ಚಿದೆ’ ಎನ್ನುತ್ತಾರೆ ಟಿಎಸ್ಎಸ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ.</p>.<p>‘ರೈತರಿಂದ ಖರೀದಿಸಿದ ಅಡಿಕೆಯನ್ನು ಗುಣಮಟ್ಟ ಆಧರಿಸಿ ಪ್ರತ್ಯೇಕಿಸುತ್ತೇವೆ. ಬೆಟ್ಟೆ, ಕೆಂಪಡಿಕೆ, ಚಾಲಿಯ ಪ್ರತ್ಯೇಕ ಬ್ರ್ಯಾಂಡಿಂಗ್ ಗಳನ್ನು ಪ್ರಾದೇಶಿಕ ಬೇಡಿಕೆಗೆ ಅನುಗುಣವಾಗಿ ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶಕ್ಕೆ ಕಳುಹಿಸುತ್ತಿದ್ದೇವೆ. ರಾಜ್ಯದಲ್ಲೂ ಹಲವೆಡೆ ಬೇಡಿಕೆ ಇದೆ’ ಎನ್ನುತ್ತಾರೆ ಅವರು.</p>.<p>‘ಅಡಿಕೆ ಬೆಲೆ ಸ್ಥಿತ್ಯಂತರಗೊಳ್ಳುತ್ತಲೇ ಇತ್ತು. ಜಿಐ ಟ್ಯಾಗ್ ಪಡೆದ ಬಳಿಕ ‘ಶಿರಸಿ ಸುಪಾರಿ’ ಬ್ರ್ಯಾಂಡ್ ಅಡಿಯಲ್ಲಿ ರಫ್ತು ಚಟುವಟಿಕೆ ಕೈಗೊಂಡಿದ್ದು ವಹಿವಾಟು ಹೆಚ್ಚುವ ಜತೆಗೆ ಉತ್ತಮ ಬೆಲೆ ಸಿಗುವಂತೆ ಮಾಡಿದೆ’ ಎಂದು ಅಭಿಪ್ರಾಯಪಟ್ಟರು.</p>.<p>*<br />ಜಿಐ ಟ್ಯಾಗ್ ಪಡೆದ ಬಳಿಕ ಶಿರಸಿ ಸುಪಾರಿಯ ಗುಣಮಟ್ಟದ ಬಗ್ಗೆ ಉತ್ತರ ಭಾರತವೂ ಸೇರಿದಂತೆ ದೇಶದ ವಿವಿಧೆಡೆ ಗ್ರಾಹಕರಲ್ಲಿ ವಿಶ್ವಾಸ ಮೂಡಿದ್ದೆ ಉತ್ತಮ ಬೆಲೆ ದೊರೆಯಲು ಕಾರಣ.<br /><em><strong>-ರವೀಶ ಹೆಗಡೆ, ಟಿಎಸ್ಎಸ್ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>