<p><strong>ಬೆಂಗಳೂರು:</strong> ಚಿಟ್ ಫಂಡ್ ವಹಿವಾಟು ಮೊತ್ತವನ್ನು 2026ರ ವೇಳೆಗೆ ₹5,000 ಕೋಟಿಗೆ ಹೆಚ್ಚು ಮಾಡುವ ಗುರಿಯನ್ನು ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ (ಎಂಎಸ್ಐಎಲ್) ಹೊಂದಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ಹೇಳಿದ್ದಾರೆ.</p>.<p>2028ರ ವೇಳೆಗೆ ಈ ಮೊತ್ತವನ್ನು ₹10 ಸಾವಿರ ಕೋಟಿಗೆ ಹೆಚ್ಚು ಮಾಡುವ ಗುರಿಯನ್ನು ಕೂಡ ಸಂಸ್ಥೆಯು ಹೊಂದಿದೆ. ಈಗ ಎಂಎಸ್ಐಎಲ್ ₹1 ಲಕ್ಷದಿಂದ ಆರಂಭಿಸಿ ₹1 ಕೋಟಿಗಿಂತ ಹೆಚ್ಚಿನ ಮೊತ್ತದ ಚಿಟ್ ಫಂಡ್ಗಳನ್ನು ನಿರ್ವಹಣೆ ಮಾಡುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.</p>.<p>ಕರ್ನಾಟಕ ಚಿಟ್ ಫಂಡ್ ಅಸೋಸಿಯೇಷನ್ ಈಚೆಗೆ ಆಯೋಜಿಸಿದ್ದ ‘ಅಖಿಲ ಭಾರತ ಚಿಟ್ ಫಂಡ್ಸ್ ಶೃಂಗಸಭೆ – 2025’ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮನೋಜ್ ಕುಮಾರ್ ಅವರು ಈ ವಿಷಯ ತಿಳಿಸಿದ್ದಾರೆ. ‘ಚಿಟ್ ಫಂಡ್ಗಳನ್ನು ಹೆಚ್ಚು ಪಾರದರ್ಶಕ ಆಗಿಸಿ, ಅವು ಎಲ್ಲರನ್ನೂ ಒಳಗೊಳ್ಳುವಂತೆ ಮಾಡಿ ಮತ್ತು ರಾಜ್ಯದಾದ್ಯಂತ ಮನೆಮನೆಗಳಿಗೆ ವಿಸ್ತರಿಸುವಂತೆ ಮಾಡುವ ಉದ್ದೇಶ ಇದೆ’ ಎಂದರು.</p>.<p>ಮಾರ್ಗದರ್ಶಿ ಚಿಟ್ ಫಂಡ್ನ ವ್ಯವಸ್ಥಾಪಕ ನಿರ್ದೇಶಕಿ ಶೈಲಜಾ ಕಿರಣ್, ಎಫ್ಕೆಸಿಸಿಐ ಅಧ್ಯಕ್ಷ ಎಂ.ಜಿ. ಬಾಲಕೃಷ್ಣ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಚಿಟ್ ಫಂಡ್ ವಹಿವಾಟು ಮೊತ್ತವನ್ನು 2026ರ ವೇಳೆಗೆ ₹5,000 ಕೋಟಿಗೆ ಹೆಚ್ಚು ಮಾಡುವ ಗುರಿಯನ್ನು ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ (ಎಂಎಸ್ಐಎಲ್) ಹೊಂದಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಕುಮಾರ್ ಹೇಳಿದ್ದಾರೆ.</p>.<p>2028ರ ವೇಳೆಗೆ ಈ ಮೊತ್ತವನ್ನು ₹10 ಸಾವಿರ ಕೋಟಿಗೆ ಹೆಚ್ಚು ಮಾಡುವ ಗುರಿಯನ್ನು ಕೂಡ ಸಂಸ್ಥೆಯು ಹೊಂದಿದೆ. ಈಗ ಎಂಎಸ್ಐಎಲ್ ₹1 ಲಕ್ಷದಿಂದ ಆರಂಭಿಸಿ ₹1 ಕೋಟಿಗಿಂತ ಹೆಚ್ಚಿನ ಮೊತ್ತದ ಚಿಟ್ ಫಂಡ್ಗಳನ್ನು ನಿರ್ವಹಣೆ ಮಾಡುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.</p>.<p>ಕರ್ನಾಟಕ ಚಿಟ್ ಫಂಡ್ ಅಸೋಸಿಯೇಷನ್ ಈಚೆಗೆ ಆಯೋಜಿಸಿದ್ದ ‘ಅಖಿಲ ಭಾರತ ಚಿಟ್ ಫಂಡ್ಸ್ ಶೃಂಗಸಭೆ – 2025’ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮನೋಜ್ ಕುಮಾರ್ ಅವರು ಈ ವಿಷಯ ತಿಳಿಸಿದ್ದಾರೆ. ‘ಚಿಟ್ ಫಂಡ್ಗಳನ್ನು ಹೆಚ್ಚು ಪಾರದರ್ಶಕ ಆಗಿಸಿ, ಅವು ಎಲ್ಲರನ್ನೂ ಒಳಗೊಳ್ಳುವಂತೆ ಮಾಡಿ ಮತ್ತು ರಾಜ್ಯದಾದ್ಯಂತ ಮನೆಮನೆಗಳಿಗೆ ವಿಸ್ತರಿಸುವಂತೆ ಮಾಡುವ ಉದ್ದೇಶ ಇದೆ’ ಎಂದರು.</p>.<p>ಮಾರ್ಗದರ್ಶಿ ಚಿಟ್ ಫಂಡ್ನ ವ್ಯವಸ್ಥಾಪಕ ನಿರ್ದೇಶಕಿ ಶೈಲಜಾ ಕಿರಣ್, ಎಫ್ಕೆಸಿಸಿಐ ಅಧ್ಯಕ್ಷ ಎಂ.ಜಿ. ಬಾಲಕೃಷ್ಣ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>