ಮುಖ್ಯಮಂತ್ರಿ ಬದಲಾವಣೆ ಕುರಿತ ಸುದ್ದಿಗಳು ರಾಜಕಾರಣದ ಮೊಗಸಾಲೆಯಲ್ಲಿ ಮತ್ತೆ ದಟ್ಟವಾಗಿವೆ. ಅದೇ ಕಾಲಕ್ಕೆ, ದಲಿತರೊಬ್ಬರು ಮುಖ್ಯಮಂತ್ರಿ ಆಗುವ ಸಾಧ್ಯತೆ ನಿಧಾನವಾಗಿ ನೇಪಥ್ಯಕ್ಕೆ ಸರಿಯುತ್ತಿದೆ. ‘ದಲಿತ ಸಿಎಂ’ ಕಾಣುವ ಅವಕಾಶ ಕನ್ನಡಿಗರಿಗೆ ಸದ್ಯಕ್ಕೆ ಇರುವಂತೆ ಕಾಣಿಸುತ್ತಿಲ್ಲ. ಆದರ್ಶ ಎನ್ನುವುದು ಅಧಿಕಾರಕ್ಕೆ ಮೆಟ್ಟಿಲೇ ಹೊರತು ಆಚರಣೆಗಲ್ಲ ಎನ್ನುವ ಸತ್ಯ ಮತ್ತೆ ಸಾಬೀತಾಗುತ್ತಿದೆ.