<p>ಬಲಾದ್ದತ್ತಂ ಬಲಾದ್ಭುಕ್ತಂ ಬಲಾದ್ಯಚ್ಚಾಪಿ ಲೇಖಿತಮ್ ।</p>.<p>ಸರ್ವಾನ್ ಬಲಕೃತಾನರ್ಥಾನ್ ಅಕೃತಾನ್ ಮನುರಬ್ರವೀತ್ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>‘ಬಲಾತ್ಕಾರವಾಗಿ ಕೊಟ್ಟದ್ದು, ಅನುಭವಿಸಿದ್ದು, ಬರೆಯಿಸಿದ್ದು – ಎಲ್ಲವೂ ವ್ಯರ್ಥ. ಬಲಾತ್ಕಾರವಾಗಿ ನಡೆದ ಯಾವ ಕೆಲಸವೂ ಊರ್ಜಿತ ಆಗುವುದಿಲ್ಲ.’</p>.<p>ನಾವು ಯಾವ ಕೆಲಸವನ್ನು ಮಾಡಿದರೂ ಅದನ್ನು ಒಪ್ಪಿ, ಪ್ರೀತಿಯಿಂದ ಮಾಡಬೇಕು. ಹೀಗಲ್ಲದೆ ಯಾರದೋ ಬಲವಂತಕ್ಕೆ ಪಕ್ಕಾಗಿ ಮಾಡಿದರೆ ಆ ಕೆಲಸ ವ್ಯರ್ಥವೇ ಆಗುತ್ತದೆ – ಎಂಬುದನ್ನು ಸುಭಾಷಿತ ಇಲ್ಲಿ ಹೇಳುತ್ತಿದೆ.</p>.<p>ಕುದುರೆಯನ್ನು ಎಲ್ಲಿಯ ತನಕ ಕರೆದುಕೊಂಡು ಹೋಗಬಹುದು? ನೀರಿನ ಕೊಳದ ತನಕ ಮಾತ್ರ. ನೀರನ್ನು ಅದೇ ಕುಡಿಯಬೇಕು; ನಾವು ಅದಕ್ಕೆ ಬಲವಂತದಿಂದ ಕುಡಿಸಲು ಆಗುವುದಿಲ್ಲವಷ್ಟೆ! ಹೀಗೆಯೇ ನಾವು ಮಕ್ಕಳನ್ನು ಶಾಲೆಗೂ ಸೇರಿಸಬಹುದು; ಶಾಲೆಯ ತನಕ ಅವರನ್ನು ಬಿಟ್ಟುಬರಬಹುದು ಕೂಡ. ಆದರೆ ಕೊನೆಗೆ ಅಕ್ಷರಗಳನ್ನು ಕಲಿತು ವಿದ್ಯಾವಂತರಾಗಬೇಕಾದ್ದು ಅವರೇ ಅಲ್ಲವೆ? ಹೀಗೆಯೇ ಕೋವಿಡ್ನ ಈ ವಿಷಮ ಪರಿಸ್ಥಿತಿಯಲ್ಲಿ ಹೇಗೆ ನಡೆದುಕೊಳ್ಳಬೇಕೆಂಬ ಸೂಚನೆಗಳನ್ನು ನಾವು ನೀಡಬಹುದು. ಆದರೆ ಅಂತಿಮವಾಗಿ ಹಾಗೆ ನಡೆದುಕೊಳ್ಳುವ ಮೂಲಕ ತಮ್ಮ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದವರು ಜನರೇ ಹೌದಷ್ಟೆ.</p>.<p>ಸುಭಾಷಿತ ಇದನ್ನೇ ಹೇಳುತ್ತಿರುವುದು, ಬಲಾತ್ಕಾರದಿಂದ ಮಾಡಿದ ಯಾವ ಕೆಲಸವೂ ಯಶಸ್ಸನ್ನು ಪಡೆಯುವುದಿಲ್ಲ ಎಂದು.ಬಲಾತ್ಕಾರವಾಗಿ ಕೊಟ್ಟದ್ದು, ಅನುಭವಿಸಿದ್ದು, ಬರೆಯಿಸಿದ್ದು – ಎಲ್ಲವೂ ವ್ಯರ್ಥ ಎಂದು ಹೇಳುತ್ತಿದೆ.</p>.<p>ಬಲಾತ್ಕಾರವಾಗಿ ಯಾರಿಗಾದರೂ ತಿಂಡಿಯನ್ನು ಕೊಟ್ಟರೆ ಏನಾಗುತ್ತದೆ? ಹೀಗೆಯೇ ಸೋಮಾರಿಗೆ ಬಲವಂತಮಾಡಿ ಕೆಲಸವನ್ನು ಕೊಡಿಸಿದರೆ ಏನಾಗುತ್ತದೆ? ಸಂಗೀತವನ್ನು ಇಷ್ಟಪಡದವನನ್ನು ನಾವು ಕಚೇರಿಗೆ ಕರೆದುಕೊಂಡರೆ ಅವನು ಸಂಗೀತದ ರಸಾನುಭವವನ್ನು ಅನುಭವಿಸಬಲ್ಲನೆ? ಒಬ್ಬ ವ್ಯಕ್ತಿಗೆ ಇಷ್ಟವಿಲ್ಲದ ವಿಷಯದ ಬಗ್ಗೆ ಲೇಖನವನ್ನು ಬರೆಯಲು ತಾಕೀತು ಮಾಡಿದರೆ ಆ ಲೇಖನದ ಗತಿ ಏನಾಗಬಹುದು? ಹೀಗೆ ಬಲಾತ್ಕಾರದ ಕೆಲಸಗಳ ವಿಫಲತೆಗೆ ನೂರಾರು ಉದಾಹರಣೆಗಳನ್ನು ಕೊಡಬಹುದೆನ್ನಿ!</p>.<p>ನಾವು ಯಾರಿಗೂ ಬಲವಂತವಾಗಿ ಏನನ್ನೂ ಕೊಡಲು ಹೋಗಬಾರದು; ಉಪದೇಶವನ್ನೂ ಸಹ! ಮೊದಲಿಗೆ ಒಂದು ವಿಷಯದಲ್ಲಿ ಪ್ರೀತಿ, ಆಸಕ್ತಿಗಳು ಹುಟ್ಟುವಂತೆ ಮಾಡಬೇಕು. ಹೀಗಲ್ಲದೆ ನಮ್ಮಲ್ಲಿ ಶಕ್ತಿಯಿದೆಯೆಂದೋ ಹಣವಿದೆಯೆಂದೋ ಜನರನ್ನು ಬಲಾತ್ಕಾರಮಾಡಿ ಕೆಲಸದಲ್ಲಿ ತೊಡಗಿಸಿದರೆ ಅದರಿಂದ ಅನಾಹುತಗಳು ಆಗುತ್ತವೆಯೆ ವಿನಾ ಕೆಲಸಗಳು ಫಲಕಾರಿ ಆಗಲಾರವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಲಾದ್ದತ್ತಂ ಬಲಾದ್ಭುಕ್ತಂ ಬಲಾದ್ಯಚ್ಚಾಪಿ ಲೇಖಿತಮ್ ।</p>.<p>ಸರ್ವಾನ್ ಬಲಕೃತಾನರ್ಥಾನ್ ಅಕೃತಾನ್ ಮನುರಬ್ರವೀತ್ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>‘ಬಲಾತ್ಕಾರವಾಗಿ ಕೊಟ್ಟದ್ದು, ಅನುಭವಿಸಿದ್ದು, ಬರೆಯಿಸಿದ್ದು – ಎಲ್ಲವೂ ವ್ಯರ್ಥ. ಬಲಾತ್ಕಾರವಾಗಿ ನಡೆದ ಯಾವ ಕೆಲಸವೂ ಊರ್ಜಿತ ಆಗುವುದಿಲ್ಲ.’</p>.<p>ನಾವು ಯಾವ ಕೆಲಸವನ್ನು ಮಾಡಿದರೂ ಅದನ್ನು ಒಪ್ಪಿ, ಪ್ರೀತಿಯಿಂದ ಮಾಡಬೇಕು. ಹೀಗಲ್ಲದೆ ಯಾರದೋ ಬಲವಂತಕ್ಕೆ ಪಕ್ಕಾಗಿ ಮಾಡಿದರೆ ಆ ಕೆಲಸ ವ್ಯರ್ಥವೇ ಆಗುತ್ತದೆ – ಎಂಬುದನ್ನು ಸುಭಾಷಿತ ಇಲ್ಲಿ ಹೇಳುತ್ತಿದೆ.</p>.<p>ಕುದುರೆಯನ್ನು ಎಲ್ಲಿಯ ತನಕ ಕರೆದುಕೊಂಡು ಹೋಗಬಹುದು? ನೀರಿನ ಕೊಳದ ತನಕ ಮಾತ್ರ. ನೀರನ್ನು ಅದೇ ಕುಡಿಯಬೇಕು; ನಾವು ಅದಕ್ಕೆ ಬಲವಂತದಿಂದ ಕುಡಿಸಲು ಆಗುವುದಿಲ್ಲವಷ್ಟೆ! ಹೀಗೆಯೇ ನಾವು ಮಕ್ಕಳನ್ನು ಶಾಲೆಗೂ ಸೇರಿಸಬಹುದು; ಶಾಲೆಯ ತನಕ ಅವರನ್ನು ಬಿಟ್ಟುಬರಬಹುದು ಕೂಡ. ಆದರೆ ಕೊನೆಗೆ ಅಕ್ಷರಗಳನ್ನು ಕಲಿತು ವಿದ್ಯಾವಂತರಾಗಬೇಕಾದ್ದು ಅವರೇ ಅಲ್ಲವೆ? ಹೀಗೆಯೇ ಕೋವಿಡ್ನ ಈ ವಿಷಮ ಪರಿಸ್ಥಿತಿಯಲ್ಲಿ ಹೇಗೆ ನಡೆದುಕೊಳ್ಳಬೇಕೆಂಬ ಸೂಚನೆಗಳನ್ನು ನಾವು ನೀಡಬಹುದು. ಆದರೆ ಅಂತಿಮವಾಗಿ ಹಾಗೆ ನಡೆದುಕೊಳ್ಳುವ ಮೂಲಕ ತಮ್ಮ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದವರು ಜನರೇ ಹೌದಷ್ಟೆ.</p>.<p>ಸುಭಾಷಿತ ಇದನ್ನೇ ಹೇಳುತ್ತಿರುವುದು, ಬಲಾತ್ಕಾರದಿಂದ ಮಾಡಿದ ಯಾವ ಕೆಲಸವೂ ಯಶಸ್ಸನ್ನು ಪಡೆಯುವುದಿಲ್ಲ ಎಂದು.ಬಲಾತ್ಕಾರವಾಗಿ ಕೊಟ್ಟದ್ದು, ಅನುಭವಿಸಿದ್ದು, ಬರೆಯಿಸಿದ್ದು – ಎಲ್ಲವೂ ವ್ಯರ್ಥ ಎಂದು ಹೇಳುತ್ತಿದೆ.</p>.<p>ಬಲಾತ್ಕಾರವಾಗಿ ಯಾರಿಗಾದರೂ ತಿಂಡಿಯನ್ನು ಕೊಟ್ಟರೆ ಏನಾಗುತ್ತದೆ? ಹೀಗೆಯೇ ಸೋಮಾರಿಗೆ ಬಲವಂತಮಾಡಿ ಕೆಲಸವನ್ನು ಕೊಡಿಸಿದರೆ ಏನಾಗುತ್ತದೆ? ಸಂಗೀತವನ್ನು ಇಷ್ಟಪಡದವನನ್ನು ನಾವು ಕಚೇರಿಗೆ ಕರೆದುಕೊಂಡರೆ ಅವನು ಸಂಗೀತದ ರಸಾನುಭವವನ್ನು ಅನುಭವಿಸಬಲ್ಲನೆ? ಒಬ್ಬ ವ್ಯಕ್ತಿಗೆ ಇಷ್ಟವಿಲ್ಲದ ವಿಷಯದ ಬಗ್ಗೆ ಲೇಖನವನ್ನು ಬರೆಯಲು ತಾಕೀತು ಮಾಡಿದರೆ ಆ ಲೇಖನದ ಗತಿ ಏನಾಗಬಹುದು? ಹೀಗೆ ಬಲಾತ್ಕಾರದ ಕೆಲಸಗಳ ವಿಫಲತೆಗೆ ನೂರಾರು ಉದಾಹರಣೆಗಳನ್ನು ಕೊಡಬಹುದೆನ್ನಿ!</p>.<p>ನಾವು ಯಾರಿಗೂ ಬಲವಂತವಾಗಿ ಏನನ್ನೂ ಕೊಡಲು ಹೋಗಬಾರದು; ಉಪದೇಶವನ್ನೂ ಸಹ! ಮೊದಲಿಗೆ ಒಂದು ವಿಷಯದಲ್ಲಿ ಪ್ರೀತಿ, ಆಸಕ್ತಿಗಳು ಹುಟ್ಟುವಂತೆ ಮಾಡಬೇಕು. ಹೀಗಲ್ಲದೆ ನಮ್ಮಲ್ಲಿ ಶಕ್ತಿಯಿದೆಯೆಂದೋ ಹಣವಿದೆಯೆಂದೋ ಜನರನ್ನು ಬಲಾತ್ಕಾರಮಾಡಿ ಕೆಲಸದಲ್ಲಿ ತೊಡಗಿಸಿದರೆ ಅದರಿಂದ ಅನಾಹುತಗಳು ಆಗುತ್ತವೆಯೆ ವಿನಾ ಕೆಲಸಗಳು ಫಲಕಾರಿ ಆಗಲಾರವು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>