<p><strong>ಆಹಾರಾರ್ಥಂ ಕರ್ಮ ಕುರ್ಯಾದನಿಂದ್ಯಮ್</strong></p>.<p><strong>ಕುರ್ಯಾದಾಹಾರಂ ಪ್ರಾಣಸಂಧಾರಣಾರ್ಥಮ್ ।</strong></p>.<p><strong>ಪ್ರಾಣಾಃ ಸಂಧಾರ್ಯಾಸ್ತತ್ತ್ವವಿಜ್ಞಾನಹೇತೋಃ</strong></p>.<p><strong>ತತ್ತ್ವಂ ವಿಜ್ಞೇಯಂ ಯೇನ ಭೂಯೋ ನ ಜನ್ಮ ।।</strong></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಆಹಾರಕ್ಕಾಗಿ ನಿಂದಿತವಲ್ಲದ ಕೆಲಸದಲ್ಲಿ ತೊಡಗತಕ್ಕದ್ದು; ಪ್ರಾಣವನ್ನು ಉಳಿಸಿಕೊಳ್ಳುವುದಕ್ಕಾಗಿ ಆಹಾರವನ್ನು ಸೇವಿಸತಕ್ಕದ್ದು; ತತ್ತ್ವಜ್ಞಾನವನ್ನು ಸಂಪಾದಿಸಿಕೊಳ್ಳುವುದಕ್ಕಾಗಿ ಪ್ರಾಣವನ್ನು ಉಳಿಸಿಕೊಳ್ಳತಕ್ಕದ್ದು; ಪುನರ್ಜನ್ಮ ಬರದಂತೆ ಮೋಕ್ಷವನ್ನು ಪಡೆಯುವುದಕ್ಕಾಗಿ ತತ್ತ್ವಜ್ಞಾನಿಯಾಗತಕ್ಕದ್ದು.‘</p>.<p>ನಮ್ಮ ಜೀವನದ ಉದ್ದೇಶ ಏನಾಗಿರಬೇಕು? ಆ ಉದ್ದೇಶವನ್ನು ಈಡೇರಿಸಿಕೊಳ್ಳುವುದಕ್ಕೆ ಯಾವ ಮಾರ್ಗವನ್ನು ಆರಿಸಿಕೊಳ್ಳಬೇಕು? ಈ ಪ್ರಶ್ನೆಗಳಿಗೆ ಉತ್ತರವನ್ನು ನೀಡುತ್ತಿದೆ, ಸುಭಾಷಿತ.</p>.<p>ನಮ್ಮೆಲ್ಲರ ಮೊದಲ ಸಹಜ ಆಯ್ಕೆ, ಅನಿವಾರ್ಯ ಎಂದರೆ ಅನ್ನ–ಪಾನಾದಿಗಳೇ ಹೌದು. ಇದನ್ನು ಹೇಗೆ ಸಂಪಾದಿಸಬೇಕು? ಬದುಕುವುದಕ್ಕಾಗಿ ಆಹಾರ ಬೇಕು ಎಂಬ ಕಾರಣದಿಂದ ಅದನ್ನು ಹೇಗಾದರೂ ಸಂಪಾದಿಸಿಕೊಳ್ಳಬಹುದು – ಎಂದು ಸುಭಾಷಿತ ಹೇಳುತ್ತಿಲ್ಲ. ಹೀಗೆ ಆಹಾರಸಂಪಾದನೆಯೊಂದೇ ಮುಖ್ಯ ಎಂದು ನಡೆದುಕೊಂಡರೆ ಮನುಷ್ಯನಿಗೆ ತಿಳಿವಳಿಕೆ ಇದ್ದೂ ಪ್ರಯೋಜನವಾದರೂ ಏನು? ನಿಂದಿತವಲ್ಲದ ಕೆಲಸವನ್ನು ಮಾಡಿಯೇ ಜೀವಿಕೆಗೆ ದಾರಿ ಮಾಡಿಕೊಳ್ಳಬೇಕು ಎಂದು ಸುಭಾಷಿತ ಹೇಳುತ್ತಿದೆ.</p>.<p>ಆಹಾರವನ್ನು ನಾವು ಯಾಕಾದರೂ ಸೇವಿಸಬೇಕು? ನಮಗಿಷ್ಟ ಬಂದುದನ್ನು ಮಾಡುವುದಕ್ಕಾಗಿಯೆ? ಅಥವಾ ಆಹಾರದ ಸವಿಗೆ ಆಕರ್ಷಿತರಾಗಿಯೆ? ಸುಭಾಷಿತ ಹೇಳುತ್ತಿದೆ: ಪ್ರಾಣವನ್ನು ಉಳಿಸಿಕೊಳ್ಳುವುದಕ್ಕಾಗಿ ಮಾತ್ರವೇ ಆಹಾರವನ್ನು ಸೇವಿಸತಕ್ಕದ್ದು.</p>.<p>ಸರಿ, ಪ್ರಾಣವನ್ನಾದರೂ ಏಕೆ ನಾವು ಉಳಿಸಿಕೊಳ್ಳಬೇಕು? ತಿಂದು–ತೇಗಿ, ಜೀವನವನ್ನು ಮಜಾ ಮಾಡುವುದಕ್ಕಾಗಿಯೇ? ಅಲ್ಲ, ಎನ್ನುತ್ತಿದೆ ಸುಭಾಷಿತ. ಅರಿವನ್ನು ಸಂಪಾದಿಸುವುದಕ್ಕಾಗಿ ನಾವು ಪ್ರಾಣವನ್ನು ಉಳಿಸಿಕೊಳ್ಳಬೇಕು. ಈ ಅರಿವನ್ನೇ ತತ್ತ್ವಜ್ಞಾನ ಎಂದು ಇಲ್ಲಿ ಹೇಳಿದೆ. ತತ್ತ್ವಜ್ಞಾನ ಎಂದರೆ ಜೀವ–ಜಗತ್ತು–ಈಶ್ವರ – ಇವುಗಳ ಸಂಬಂಧದ ಬಗ್ಗೆ ಸರಿಯಾದ ತಿಳಿವಳಿಕೆ. ನಮ್ಮ ಜೀವನದ ಸಾರ್ಥಕತೆ ಎಲ್ಲಿದೆ ಎನ್ನುವುದನ್ನು ಈ ಅರಿವು ತಿಳಿಸಿಕೊಡುತ್ತದೆ.</p>.<p>ಈ ಅರಿವು ಕೇವಲ ಅಧ್ಯಯನದ ದೃಷ್ಟಿಯಿಂದ, ಎಂದರೆ ಓದಿಗಷ್ಟೆ ಸೀಮಿತವಾಗಿ, ನಡೆಯಬಾರದು ಎಂದು ಸುಭಾಷಿತ ಹೇಳಿದೆ. ನಾವು ಪಡೆದ ತಿಳಿವಳಿಕೆ, ಅರಿವು, ಜ್ಞಾನ – ಅದು ನಮ್ಮ ಜೀವನಕ್ಕೆ ನೇರವಾಗಿ ಒದಗಬೇಕು. ಇಲ್ಲವಾದಲ್ಲಿ ಅದು ದಿಟವಾದ ಅರಿವು ಎಂದು ಎನಿಸಿಕೊಳ್ಳಲಾರದು. ಹೀಗಾಗಿಯೇ ಸುಭಾಷಿತ ಹೇಳುತ್ತಿರುವುದು: ಮೋಕ್ಷವನ್ನು ಪಡೆಯವುದಕ್ಕಾಗಿ ನಮ್ಮ ಅರಿವನ್ನು ವಿನಿಯೋಗಿಸಬೇಕು.</p>.<p>ಮೋಕ್ಷ ಎಂದರೆ ಏನು? ಪುನರ್ಜನ್ಮ ಇಲ್ಲದಿರುವುದೇ ಮೋಕ್ಷ. ಎಂದರೆ ಜೀವನಚಕ್ರದಿಂದ ಬಿಡುಗಡೆ.</p>.<p>ಹಂತಹಂತವಾಗಿ ನಮ್ಮ ಜೀವನವನ್ನು ಹೇಗೆ ಸಾರ್ಥಕತೆಯ ಕಡೆಗೆ ನಡೆಸಬೇಕು ಎನ್ನುವುದನ್ನು ಸುಭಾಷಿತ ಸೊಗಸಾಗಿ ನಿರೂಪಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಹಾರಾರ್ಥಂ ಕರ್ಮ ಕುರ್ಯಾದನಿಂದ್ಯಮ್</strong></p>.<p><strong>ಕುರ್ಯಾದಾಹಾರಂ ಪ್ರಾಣಸಂಧಾರಣಾರ್ಥಮ್ ।</strong></p>.<p><strong>ಪ್ರಾಣಾಃ ಸಂಧಾರ್ಯಾಸ್ತತ್ತ್ವವಿಜ್ಞಾನಹೇತೋಃ</strong></p>.<p><strong>ತತ್ತ್ವಂ ವಿಜ್ಞೇಯಂ ಯೇನ ಭೂಯೋ ನ ಜನ್ಮ ।।</strong></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಆಹಾರಕ್ಕಾಗಿ ನಿಂದಿತವಲ್ಲದ ಕೆಲಸದಲ್ಲಿ ತೊಡಗತಕ್ಕದ್ದು; ಪ್ರಾಣವನ್ನು ಉಳಿಸಿಕೊಳ್ಳುವುದಕ್ಕಾಗಿ ಆಹಾರವನ್ನು ಸೇವಿಸತಕ್ಕದ್ದು; ತತ್ತ್ವಜ್ಞಾನವನ್ನು ಸಂಪಾದಿಸಿಕೊಳ್ಳುವುದಕ್ಕಾಗಿ ಪ್ರಾಣವನ್ನು ಉಳಿಸಿಕೊಳ್ಳತಕ್ಕದ್ದು; ಪುನರ್ಜನ್ಮ ಬರದಂತೆ ಮೋಕ್ಷವನ್ನು ಪಡೆಯುವುದಕ್ಕಾಗಿ ತತ್ತ್ವಜ್ಞಾನಿಯಾಗತಕ್ಕದ್ದು.‘</p>.<p>ನಮ್ಮ ಜೀವನದ ಉದ್ದೇಶ ಏನಾಗಿರಬೇಕು? ಆ ಉದ್ದೇಶವನ್ನು ಈಡೇರಿಸಿಕೊಳ್ಳುವುದಕ್ಕೆ ಯಾವ ಮಾರ್ಗವನ್ನು ಆರಿಸಿಕೊಳ್ಳಬೇಕು? ಈ ಪ್ರಶ್ನೆಗಳಿಗೆ ಉತ್ತರವನ್ನು ನೀಡುತ್ತಿದೆ, ಸುಭಾಷಿತ.</p>.<p>ನಮ್ಮೆಲ್ಲರ ಮೊದಲ ಸಹಜ ಆಯ್ಕೆ, ಅನಿವಾರ್ಯ ಎಂದರೆ ಅನ್ನ–ಪಾನಾದಿಗಳೇ ಹೌದು. ಇದನ್ನು ಹೇಗೆ ಸಂಪಾದಿಸಬೇಕು? ಬದುಕುವುದಕ್ಕಾಗಿ ಆಹಾರ ಬೇಕು ಎಂಬ ಕಾರಣದಿಂದ ಅದನ್ನು ಹೇಗಾದರೂ ಸಂಪಾದಿಸಿಕೊಳ್ಳಬಹುದು – ಎಂದು ಸುಭಾಷಿತ ಹೇಳುತ್ತಿಲ್ಲ. ಹೀಗೆ ಆಹಾರಸಂಪಾದನೆಯೊಂದೇ ಮುಖ್ಯ ಎಂದು ನಡೆದುಕೊಂಡರೆ ಮನುಷ್ಯನಿಗೆ ತಿಳಿವಳಿಕೆ ಇದ್ದೂ ಪ್ರಯೋಜನವಾದರೂ ಏನು? ನಿಂದಿತವಲ್ಲದ ಕೆಲಸವನ್ನು ಮಾಡಿಯೇ ಜೀವಿಕೆಗೆ ದಾರಿ ಮಾಡಿಕೊಳ್ಳಬೇಕು ಎಂದು ಸುಭಾಷಿತ ಹೇಳುತ್ತಿದೆ.</p>.<p>ಆಹಾರವನ್ನು ನಾವು ಯಾಕಾದರೂ ಸೇವಿಸಬೇಕು? ನಮಗಿಷ್ಟ ಬಂದುದನ್ನು ಮಾಡುವುದಕ್ಕಾಗಿಯೆ? ಅಥವಾ ಆಹಾರದ ಸವಿಗೆ ಆಕರ್ಷಿತರಾಗಿಯೆ? ಸುಭಾಷಿತ ಹೇಳುತ್ತಿದೆ: ಪ್ರಾಣವನ್ನು ಉಳಿಸಿಕೊಳ್ಳುವುದಕ್ಕಾಗಿ ಮಾತ್ರವೇ ಆಹಾರವನ್ನು ಸೇವಿಸತಕ್ಕದ್ದು.</p>.<p>ಸರಿ, ಪ್ರಾಣವನ್ನಾದರೂ ಏಕೆ ನಾವು ಉಳಿಸಿಕೊಳ್ಳಬೇಕು? ತಿಂದು–ತೇಗಿ, ಜೀವನವನ್ನು ಮಜಾ ಮಾಡುವುದಕ್ಕಾಗಿಯೇ? ಅಲ್ಲ, ಎನ್ನುತ್ತಿದೆ ಸುಭಾಷಿತ. ಅರಿವನ್ನು ಸಂಪಾದಿಸುವುದಕ್ಕಾಗಿ ನಾವು ಪ್ರಾಣವನ್ನು ಉಳಿಸಿಕೊಳ್ಳಬೇಕು. ಈ ಅರಿವನ್ನೇ ತತ್ತ್ವಜ್ಞಾನ ಎಂದು ಇಲ್ಲಿ ಹೇಳಿದೆ. ತತ್ತ್ವಜ್ಞಾನ ಎಂದರೆ ಜೀವ–ಜಗತ್ತು–ಈಶ್ವರ – ಇವುಗಳ ಸಂಬಂಧದ ಬಗ್ಗೆ ಸರಿಯಾದ ತಿಳಿವಳಿಕೆ. ನಮ್ಮ ಜೀವನದ ಸಾರ್ಥಕತೆ ಎಲ್ಲಿದೆ ಎನ್ನುವುದನ್ನು ಈ ಅರಿವು ತಿಳಿಸಿಕೊಡುತ್ತದೆ.</p>.<p>ಈ ಅರಿವು ಕೇವಲ ಅಧ್ಯಯನದ ದೃಷ್ಟಿಯಿಂದ, ಎಂದರೆ ಓದಿಗಷ್ಟೆ ಸೀಮಿತವಾಗಿ, ನಡೆಯಬಾರದು ಎಂದು ಸುಭಾಷಿತ ಹೇಳಿದೆ. ನಾವು ಪಡೆದ ತಿಳಿವಳಿಕೆ, ಅರಿವು, ಜ್ಞಾನ – ಅದು ನಮ್ಮ ಜೀವನಕ್ಕೆ ನೇರವಾಗಿ ಒದಗಬೇಕು. ಇಲ್ಲವಾದಲ್ಲಿ ಅದು ದಿಟವಾದ ಅರಿವು ಎಂದು ಎನಿಸಿಕೊಳ್ಳಲಾರದು. ಹೀಗಾಗಿಯೇ ಸುಭಾಷಿತ ಹೇಳುತ್ತಿರುವುದು: ಮೋಕ್ಷವನ್ನು ಪಡೆಯವುದಕ್ಕಾಗಿ ನಮ್ಮ ಅರಿವನ್ನು ವಿನಿಯೋಗಿಸಬೇಕು.</p>.<p>ಮೋಕ್ಷ ಎಂದರೆ ಏನು? ಪುನರ್ಜನ್ಮ ಇಲ್ಲದಿರುವುದೇ ಮೋಕ್ಷ. ಎಂದರೆ ಜೀವನಚಕ್ರದಿಂದ ಬಿಡುಗಡೆ.</p>.<p>ಹಂತಹಂತವಾಗಿ ನಮ್ಮ ಜೀವನವನ್ನು ಹೇಗೆ ಸಾರ್ಥಕತೆಯ ಕಡೆಗೆ ನಡೆಸಬೇಕು ಎನ್ನುವುದನ್ನು ಸುಭಾಷಿತ ಸೊಗಸಾಗಿ ನಿರೂಪಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>