<p><strong>ಪರೋಪದೇಶೇ ಪಾಂಡಿತ್ಯಂ ಸರ್ವೇಷಾಂ ಸುಕರಂ ನೃಣಾಮ್ ।</strong></p>.<p><strong>ಧರ್ಮೇ ಸ್ವೀಯಮನುಷ್ಠಾನಂ ಕಸ್ಯಚಿತ್ತು ಮಹಾತ್ಮನಃ ।।</strong></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಪರೋಪದೇಶವನ್ನು ಮಾಡುವಾಗ ಪಾಂಡಿತ್ಯವನ್ನು ಮೆರೆಸುವುದು ಎಲ್ಲರಿಗೂ ಸುಲಭ; ತಾನು ಧರ್ಮದಲ್ಲಿ ನಡೆಯವುದು ಯಾವನೋ ಒಬ್ಬ ಮಹಾತ್ಮನಿಗೆ ಮಾತ್ರ ಸಾಧ್ಯವಾದೀತು.‘</p>.<p>ಇಂದಿನ ಸಂದರ್ಭಕ್ಕೆ ಚೆನ್ನಾಗಿ ಒಪ್ಪುವ ಸುಭಾಷಿತ ಇದು.</p>.<p>‘ಕೊರೊನಾ ಇಷ್ಟೊಂದು ಹೇಗೆ ಹರಡುತ್ತಿದೆ? ಜನರ ಓಡಾಟದಿಂದಲೇ ಅಲ್ವಾ? ಯಾಕೋಪ್ಪ ಸುಮ್ಮಸುಮ್ಮನೇ ಜನರು ಹೀಗೆ ಓಡಾಡ್ತಾರೆ, ಬೇರೆಯವರ ಆರೋಗ್ಯದ ಜೊತೆ ಆಟವಾಡ್ತಿದ್ದಾರೆ‘ – ಇದು ಇಂದು ಸಾಮಾನ್ಯವಾಗಿ ಕೇಳಿಬರುವ ಸಂಭಾಷಣೆಯ ಒಂದು ತುಣುಕು. ಇದರಲ್ಲಿ ಸ್ವಾರಸ್ಯ ಏನೆಂದರೆ – ಈ ಸಂಭಾಷಣೆ ನಡೆಯುತ್ತಿರುವುದು ರಸ್ತೆಯಲ್ಲೇ; ಅದೂ ಪಾನಿಪೂರಿ ತಿನ್ನಲಿಕ್ಕೆ ಹೋಗುತ್ತಿರುವ ನಾಲ್ವರು ಸ್ನೇಹಿತರ ನಡುವೆ!</p>.<p>ಸುಭಾಷಿತ ಹೇಳುತ್ತಿರುವುದು ಇಂಥ ಸಂದರ್ಭದ ಬಗ್ಗೆಯೇ.</p>.<p>ನಮ್ಮ ಈಗಿನ ಕಾಲವನ್ನು 'ಉಪದೇಶಯುಗ' ಎಂದು ಕರೆಯಬಹುದು; ಎಲ್ಲರೂ ಇನ್ನೊಬ್ಬರಿಗೆ ನೀತಿಗಳನ್ನು ಉಪದೇಶಿಸುವುದರಲ್ಲಿ ತಲ್ಲೀನರು. ಆದರೆ ಹೀಗೆ ಬೇರೆಯವರಿಗೆ ಏನನ್ನಾದರೂ ಉಪದೇಶಿಸುವ ಮೊದಲು ಅವನ್ನು ತಮ್ಮ ಜೀವನದಲ್ಲಿ ಎಷ್ಟು ಅಳವಡಿಸಿಕೊಳ್ಳಲಾಗಿದೆ – ಎಂದು ಎಷ್ಟು ಮಂದಿ ಆತ್ಮಾವಲೋಕವನ್ನು ಮಾಡಿಕೊಳ್ಳುತ್ತಿದ್ದಾರೆ?</p>.<p>ಸುಭಾಷಿತ ಚೆನ್ನಾಗಿ ಹೇಳಿದೆ: ’ಪರೋಪದೇಶಪಾಂಡಿತ್ಯ.‘ ನಾವೆಲ್ಲರೂ ವಿದ್ವಾಂಸರೇ, ಜ್ಞಾನಿಗಳೇ. ಯಾವ ವಿಷಯದಲ್ಲಿ? ಬೇರೊಬ್ಬರಿಗೆ ಉಪದೇಶ ಮಾಡುವಾಗ. ’ನೀನು ಹೀಗಿರಬೇಕು‘, ’ಹಾಗಿರಬೇಕು‘. ’ಅನಗತ್ಯವಾಗಿ ಓಡಾಡಬಾರದು‘, ’ಸೋಶಿಯಲ್ ಡಿಸ್ಟೆಂಸ್ ಪಾಲಿಸಬೇಕು‘.</p>.<p>ಸರಿಯಪ್ಪಾ! ನೀನು ಇವನ್ನು ಎಷ್ಟು ಪಾಲಿಸುತ್ತಿರುವೆ?</p>.<p>ಈ ಪ್ರಶ್ನೆಗೆ ನಮ್ಮಲ್ಲಿ ಉತ್ತರ ಇರದು. ಹೆಚ್ಚೆಂದರೆ ’ನಾನೂ ನೀನೂ ಒಂದೇನೇ‘ ಎಂಬಂಥ ಉದಾಸೀನ ನಮ್ಮಲ್ಲಿ ಮೂಡಬಹುದಷ್ಟೆ!</p>.<p>ಸುಭಾಷಿತ ಹೇಳುತ್ತಿದೆ: ಧರ್ಮಮಾರ್ಗದ ಬಗ್ಗೆ ಹೀಗೆ ಬೇರೊಬ್ಬರಿಗೆ ಉಪದೇಶ ನೀಡಲು ತೊಡಗದೆ, ತಾನಾಗಿ ಆ ಮಾರ್ಗದಲ್ಲಿ ನಡೆಯುವವರು ತುಂಬ ವಿರಳ – ಎಂದು. ಅಂಥವನನ್ನು ಸುಭಾಷಿತ ’ಮಹಾತ್ಮ‘ ಎಂದು ಕರೆದಿದೆ. ಗಾಂಧೀಜಿ ಯಾರಿಗಾದರೂ ಏನನ್ನಾದರೂ ಉಪದೇಶಿಸುವ ಮೊದಲು ಆ ಉಪದೇಶವನ್ನು ಅವರು ತಮ್ಮ ಜೀವನದಲ್ಲಿ ಎಷ್ಟು ಅನುಸಂಧಾನ ಮಾಡಿಕೊಂಡಿದ್ದಾರೆ ಎಂದು ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದರಂತೆ.</p>.<p>ಬಸವಣ್ಣನವರು ಈ ಪರೋಪದೇಶಶೂರರ ಬಗ್ಗೆ ಸೊಗಸಾಗಿ ಹೇಳಿದ್ದಾರೆ:</p>.<p><strong>ಲೋಕದ ಡೊಂಕ ನೀವೇಕೆ ತಿದ್ದುವಿರಿ?<br />ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ;ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ,<br />ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಹ,<br />ಕೂಡಲಸಂಗಮದೇವ.</strong></p>.<p>ಸರ್ವಜ್ಞನ ಒಂದು ತ್ರಿಪದಿ ಕೂಡ ಇಲ್ಲಿ ಉಲ್ಲೇಖಾರ್ಹ:</p>.<p><strong>ಆಡದಲೆ ಮಾಡುವನು ರೂಢಿಯೊಳಗುತ್ತಮನು</strong></p>.<p><strong>ಆಡಿ ಮಾಡುವನು ಮಧ್ಯಮನು ಅಧಮ ತಾ</strong></p>.<p><strong>ನಾಡಿ ಮಾಡದವ ಸರ್ವಜ್ಞ.</strong></p>.<p>ರಾಜಕೀಯ ಪಕ್ಷಗಳಲ್ಲಂತೂ ನಿತ್ಯ ಈ ಪರೋಪದೇಶಬುದ್ಧಿ ಎದ್ದುಕಾಣುತ್ತದೆ. ’ನಾವು ಹಾಗೆ ಮಾಡುತ್ತಿದ್ದೆವು, ಹೀಗೆ ಮಾಡುತ್ತಿದ್ದೆವು‘ ಎಂದು ಎಲ್ಲರೂ ಹೇಳುವವರೇ! ಆದರೆ ‘ನಮಗೆ ಅವಕಾಶ ಇದ್ದಾಗ ಯಾವ ಪ್ರಮಾಣದಲ್ಲಿ ಪ್ರಜಾಸೇವೆಯನ್ನು ಮಾಡಿದ್ದೇವೆ‘ ಎಂದು ಎಷ್ಟು ಮಂದಿ ನಾಯಕರು ಪ್ರಾಮಾಣಿಕ ಆತ್ಮಾವಲೋಕನವನ್ನು ಮಾಡಿಕೊಳ್ಳಬಲ್ಲರು?</p>.<p>ಇಂದು ಸಮಾಜವನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ ಎಂದರೆ ಮಾತಿನ ಹಾವಳಿ; ಎಲ್ಲರೂ ಎಲ್ಲರಿಗೂ ಉಪದೇಶ ಕೊಡುವುದರಲ್ಲಿ ನಿಸ್ಸೀಮರು. ಉಪದೇಶ ಕೊಡುವುದನ್ನು ನಿಲ್ಲಿಸಿ, ಎಲ್ಲರೂ ಅವರವರ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಿದರೆ ಸಮಾಜಕ್ಕೆ ಉಪದೇಶದ ಆವಶ್ಯಕತೆಯಾದರೂ ಏಕ್ಕಿದ್ದೀತು?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪರೋಪದೇಶೇ ಪಾಂಡಿತ್ಯಂ ಸರ್ವೇಷಾಂ ಸುಕರಂ ನೃಣಾಮ್ ।</strong></p>.<p><strong>ಧರ್ಮೇ ಸ್ವೀಯಮನುಷ್ಠಾನಂ ಕಸ್ಯಚಿತ್ತು ಮಹಾತ್ಮನಃ ।।</strong></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಪರೋಪದೇಶವನ್ನು ಮಾಡುವಾಗ ಪಾಂಡಿತ್ಯವನ್ನು ಮೆರೆಸುವುದು ಎಲ್ಲರಿಗೂ ಸುಲಭ; ತಾನು ಧರ್ಮದಲ್ಲಿ ನಡೆಯವುದು ಯಾವನೋ ಒಬ್ಬ ಮಹಾತ್ಮನಿಗೆ ಮಾತ್ರ ಸಾಧ್ಯವಾದೀತು.‘</p>.<p>ಇಂದಿನ ಸಂದರ್ಭಕ್ಕೆ ಚೆನ್ನಾಗಿ ಒಪ್ಪುವ ಸುಭಾಷಿತ ಇದು.</p>.<p>‘ಕೊರೊನಾ ಇಷ್ಟೊಂದು ಹೇಗೆ ಹರಡುತ್ತಿದೆ? ಜನರ ಓಡಾಟದಿಂದಲೇ ಅಲ್ವಾ? ಯಾಕೋಪ್ಪ ಸುಮ್ಮಸುಮ್ಮನೇ ಜನರು ಹೀಗೆ ಓಡಾಡ್ತಾರೆ, ಬೇರೆಯವರ ಆರೋಗ್ಯದ ಜೊತೆ ಆಟವಾಡ್ತಿದ್ದಾರೆ‘ – ಇದು ಇಂದು ಸಾಮಾನ್ಯವಾಗಿ ಕೇಳಿಬರುವ ಸಂಭಾಷಣೆಯ ಒಂದು ತುಣುಕು. ಇದರಲ್ಲಿ ಸ್ವಾರಸ್ಯ ಏನೆಂದರೆ – ಈ ಸಂಭಾಷಣೆ ನಡೆಯುತ್ತಿರುವುದು ರಸ್ತೆಯಲ್ಲೇ; ಅದೂ ಪಾನಿಪೂರಿ ತಿನ್ನಲಿಕ್ಕೆ ಹೋಗುತ್ತಿರುವ ನಾಲ್ವರು ಸ್ನೇಹಿತರ ನಡುವೆ!</p>.<p>ಸುಭಾಷಿತ ಹೇಳುತ್ತಿರುವುದು ಇಂಥ ಸಂದರ್ಭದ ಬಗ್ಗೆಯೇ.</p>.<p>ನಮ್ಮ ಈಗಿನ ಕಾಲವನ್ನು 'ಉಪದೇಶಯುಗ' ಎಂದು ಕರೆಯಬಹುದು; ಎಲ್ಲರೂ ಇನ್ನೊಬ್ಬರಿಗೆ ನೀತಿಗಳನ್ನು ಉಪದೇಶಿಸುವುದರಲ್ಲಿ ತಲ್ಲೀನರು. ಆದರೆ ಹೀಗೆ ಬೇರೆಯವರಿಗೆ ಏನನ್ನಾದರೂ ಉಪದೇಶಿಸುವ ಮೊದಲು ಅವನ್ನು ತಮ್ಮ ಜೀವನದಲ್ಲಿ ಎಷ್ಟು ಅಳವಡಿಸಿಕೊಳ್ಳಲಾಗಿದೆ – ಎಂದು ಎಷ್ಟು ಮಂದಿ ಆತ್ಮಾವಲೋಕವನ್ನು ಮಾಡಿಕೊಳ್ಳುತ್ತಿದ್ದಾರೆ?</p>.<p>ಸುಭಾಷಿತ ಚೆನ್ನಾಗಿ ಹೇಳಿದೆ: ’ಪರೋಪದೇಶಪಾಂಡಿತ್ಯ.‘ ನಾವೆಲ್ಲರೂ ವಿದ್ವಾಂಸರೇ, ಜ್ಞಾನಿಗಳೇ. ಯಾವ ವಿಷಯದಲ್ಲಿ? ಬೇರೊಬ್ಬರಿಗೆ ಉಪದೇಶ ಮಾಡುವಾಗ. ’ನೀನು ಹೀಗಿರಬೇಕು‘, ’ಹಾಗಿರಬೇಕು‘. ’ಅನಗತ್ಯವಾಗಿ ಓಡಾಡಬಾರದು‘, ’ಸೋಶಿಯಲ್ ಡಿಸ್ಟೆಂಸ್ ಪಾಲಿಸಬೇಕು‘.</p>.<p>ಸರಿಯಪ್ಪಾ! ನೀನು ಇವನ್ನು ಎಷ್ಟು ಪಾಲಿಸುತ್ತಿರುವೆ?</p>.<p>ಈ ಪ್ರಶ್ನೆಗೆ ನಮ್ಮಲ್ಲಿ ಉತ್ತರ ಇರದು. ಹೆಚ್ಚೆಂದರೆ ’ನಾನೂ ನೀನೂ ಒಂದೇನೇ‘ ಎಂಬಂಥ ಉದಾಸೀನ ನಮ್ಮಲ್ಲಿ ಮೂಡಬಹುದಷ್ಟೆ!</p>.<p>ಸುಭಾಷಿತ ಹೇಳುತ್ತಿದೆ: ಧರ್ಮಮಾರ್ಗದ ಬಗ್ಗೆ ಹೀಗೆ ಬೇರೊಬ್ಬರಿಗೆ ಉಪದೇಶ ನೀಡಲು ತೊಡಗದೆ, ತಾನಾಗಿ ಆ ಮಾರ್ಗದಲ್ಲಿ ನಡೆಯುವವರು ತುಂಬ ವಿರಳ – ಎಂದು. ಅಂಥವನನ್ನು ಸುಭಾಷಿತ ’ಮಹಾತ್ಮ‘ ಎಂದು ಕರೆದಿದೆ. ಗಾಂಧೀಜಿ ಯಾರಿಗಾದರೂ ಏನನ್ನಾದರೂ ಉಪದೇಶಿಸುವ ಮೊದಲು ಆ ಉಪದೇಶವನ್ನು ಅವರು ತಮ್ಮ ಜೀವನದಲ್ಲಿ ಎಷ್ಟು ಅನುಸಂಧಾನ ಮಾಡಿಕೊಂಡಿದ್ದಾರೆ ಎಂದು ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದರಂತೆ.</p>.<p>ಬಸವಣ್ಣನವರು ಈ ಪರೋಪದೇಶಶೂರರ ಬಗ್ಗೆ ಸೊಗಸಾಗಿ ಹೇಳಿದ್ದಾರೆ:</p>.<p><strong>ಲೋಕದ ಡೊಂಕ ನೀವೇಕೆ ತಿದ್ದುವಿರಿ?<br />ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ;ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ,<br />ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಹ,<br />ಕೂಡಲಸಂಗಮದೇವ.</strong></p>.<p>ಸರ್ವಜ್ಞನ ಒಂದು ತ್ರಿಪದಿ ಕೂಡ ಇಲ್ಲಿ ಉಲ್ಲೇಖಾರ್ಹ:</p>.<p><strong>ಆಡದಲೆ ಮಾಡುವನು ರೂಢಿಯೊಳಗುತ್ತಮನು</strong></p>.<p><strong>ಆಡಿ ಮಾಡುವನು ಮಧ್ಯಮನು ಅಧಮ ತಾ</strong></p>.<p><strong>ನಾಡಿ ಮಾಡದವ ಸರ್ವಜ್ಞ.</strong></p>.<p>ರಾಜಕೀಯ ಪಕ್ಷಗಳಲ್ಲಂತೂ ನಿತ್ಯ ಈ ಪರೋಪದೇಶಬುದ್ಧಿ ಎದ್ದುಕಾಣುತ್ತದೆ. ’ನಾವು ಹಾಗೆ ಮಾಡುತ್ತಿದ್ದೆವು, ಹೀಗೆ ಮಾಡುತ್ತಿದ್ದೆವು‘ ಎಂದು ಎಲ್ಲರೂ ಹೇಳುವವರೇ! ಆದರೆ ‘ನಮಗೆ ಅವಕಾಶ ಇದ್ದಾಗ ಯಾವ ಪ್ರಮಾಣದಲ್ಲಿ ಪ್ರಜಾಸೇವೆಯನ್ನು ಮಾಡಿದ್ದೇವೆ‘ ಎಂದು ಎಷ್ಟು ಮಂದಿ ನಾಯಕರು ಪ್ರಾಮಾಣಿಕ ಆತ್ಮಾವಲೋಕನವನ್ನು ಮಾಡಿಕೊಳ್ಳಬಲ್ಲರು?</p>.<p>ಇಂದು ಸಮಾಜವನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ ಎಂದರೆ ಮಾತಿನ ಹಾವಳಿ; ಎಲ್ಲರೂ ಎಲ್ಲರಿಗೂ ಉಪದೇಶ ಕೊಡುವುದರಲ್ಲಿ ನಿಸ್ಸೀಮರು. ಉಪದೇಶ ಕೊಡುವುದನ್ನು ನಿಲ್ಲಿಸಿ, ಎಲ್ಲರೂ ಅವರವರ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸಿದರೆ ಸಮಾಜಕ್ಕೆ ಉಪದೇಶದ ಆವಶ್ಯಕತೆಯಾದರೂ ಏಕ್ಕಿದ್ದೀತು?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>