<p>ಉತ್ತಮಾ ಆತ್ಮನಾ ಖ್ಯಾತಾಃ ಪಿತ್ರಾ ಖ್ಯಾತಾಶ್ಚ ಮಧ್ಯಮಾಃ ।</p>.<p>ಮಾತುಲೇನಾಧಮಾಃ ಖ್ಯಾತಾಃ ಶ್ವಶುರೇಣಾಧಮಾಧಮಾಃ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>‘ತನ್ನ ಕಾರಣದಿಂದ ತಾನೇ ಖ್ಯಾತಿಯನ್ನು ಗಳಿಸಿದವರು ಉತ್ತಮರು; ತಂದೆಯಿಂದ ಖ್ಯಾತಿಗೆ ಬಂದವರು ಮಧ್ಯಮರು; ಸೋದರಮಾವನಿಂದ ಖ್ಯಾತರಾದವರು ಅಧಮರು. ಹೆಣ್ಣು ಕೊಟ್ಟ ಮಾವನಿಂದ ಖ್ಯಾತಿಯನ್ನು ಗಳಿಸಿದವರು ಅಧಮರಲ್ಲಿಯೇ ಅಧಮರು!’</p>.<p>ಸ್ವಂತಿಕೆ ಎನ್ನುವುದು ನಮ್ಮ ವ್ಯಕ್ತಿತ್ವದ ಪ್ರಧಾನ ಗುಣ ಆಗಬೇಕು; ಹೀಗಲ್ಲದೆ ಬೇರೊಬ್ಬರ ಹೆಸರನ್ನು ಬಳಸಿಕೊಂಡು ಮೆರೆಯವುದು ನಮ್ಮ ವ್ಯಕ್ತಿತ್ವಕ್ಕೆ ಭೂಷಣವಲ್ಲ – ಎಂಬುದನ್ನು ಸುಭಾಷಿತ ಹೇಳುತ್ತಿದೆ.</p>.<p>ಮಂತ್ರಿಯೋ ಎಂಪಿಯೋ ಎಂಎಲ್ಎಯೋ ಅಲ್ಲ, ಅವರ ಬಂಧುಗಳು, ಅವರ ಬಂಧುಗಳ ಬಂಧುಗಳು ಸಮಾಜದಲ್ಲಿ ಉಂಟುಮಾಡುವ ಉಪದ್ವ್ಯಾಪಗಳನ್ನು ನಾವು ಆಗಾಗ ಅನುಭವಿಸುತ್ತಲೇ ಇರುತ್ತೇವೆ. ಹೀಗೆಯೇ ಅಧಿಕಾರಿಗಳು, ಅವರ ಮಕ್ಕಳ, ಅವರ ಸ್ನೇಹಿತರು – ಇವರ ದರ್ಪಗಳನ್ನೂ ನಾವು ಅನುಭವಿಸಿರುತ್ತೇವೆ. ಇಂಥ ಹಲವು ರೀತಿಯ ಪರಾವಲಂಬಿಗಳನ್ನು ಸುಭಾಷಿತ ಇಲ್ಲಿ ಟೀಕೆ ಮಾಡುತ್ತಿದೆ.</p>.<p>ತನ್ನದೇ ಕಾರ್ಯಶೀಲತೆಯಿಂದ ಕೀರ್ತಿಯನ್ನು ಸಂಪಾದಿಸಿದವರು ಉತ್ತಮ ವ್ಯಕ್ತಿತ್ವದವರು ಎಂದು ಅದು ಘೋಷಿಸಿದೆ. ಹೀಗೆ ಹೆಸರನ್ನು ಸಂಪಾದಿಸಿದಾಗ ನಮಗೆ ಸಂತೋಷ, ಆತ್ಮತೃಪ್ತಿಗಳು ಉಂಟಾಗುವುದು ಸುಳ್ಳಲ್ಲ. ಶ್ರೀರಾಮ ಅವನ ವ್ಯಕ್ತಿತ್ವದ ಮೂಲಕವೇ ಲೋಕದಲ್ಲಿ ಕೀರ್ತಿಯನ್ನು ಸಂಪಾದಿಸಿದ್ದು.</p>.<p>ತಂದೆಯ ಕಾರಣದಿಂದ ಅಥವಾ ಸೋದರಮಾವ – ಎಂದರೆ ತಾಯಿಯ ಕಡೆಯಿಂದ ಅಥವಾ ಮಾವನ ಆಶ್ರಯದಲ್ಲಿ ಹೆಸರನ್ನು ಪಡೆದು, ಮೆರೆಯುವವರನ್ನು ಸುಭಾಚಿತ ಚೆನ್ನಾಗಿಯೇ ಟೀಕಿಸಿದೆ. ಆತ್ಮಾಭಿಮಾನ ಎಂಬುದು ನಮ್ಮ ವ್ಯಕ್ತಿತ್ವದ ಸ್ವಭಾವವಾಗಬೇಕು. ಹೀಗಲ್ಲದೆ ಬೇರೊಬ್ಬರ ನೆರಳಿನಲ್ಲಿ ನಮ್ಮ ಅಸ್ತಿತ್ವವನ್ನು ಕಂಡುಕೊಳ್ಳುವುದು ಉತ್ತಮರ ಲಕ್ಷಣವಲ್ಲವಷ್ಟೆ.</p>.<p>ನಮ್ಮ ಕಾರಣದಿಂದ ನಮ್ಮ ಕುಟುಂಬಕ್ಕಾಗಲೀ, ಬಂಧುಗಳಿಗಾಗಲೀ ಅಥವಾ ಸ್ನೇಹಿತರಿಗಾಗಲೀ ಒಳ್ಳೆಯ ಹೆಸರು ದಕ್ಕಬೇಕು. ಹೀಗಲ್ಲದೆ ಅವರ ಹೆಸರನ್ನು ಬಳಸಿಕೊಂಡು, ನಾವು ಮೀಸೆ ತಿರುಗಿಸುವುದು ಅಯೋಗ್ಯತನವೇ ಆಗುತ್ತದೆ.</p>.<p>ಜಗತ್ತಿನಲ್ಲಿ ಹಲವರು ಸಾಧಕರು ಅವರ ತಂದೆ–ತಾಯಿಗಳ ಹೆಸರನ್ನು ತಮ್ಮ ಸಾಧನೆಯ ಮೂಲಕವಾಗಿಯೇ ಶಾಶ್ವತಗೊಳಿಸಿದ್ದಾರೆ. ಶ್ರೀನಿವಾಸ ರಾಮಾನುಜನ್, ಐಸಾಕ್ ನ್ಯೂಟನ್, ಐನ್ಸ್ಟೈನ್, ಎಸ್. ಪಿ. ಬಾಲಸುಬ್ರಹ್ಮಣ್ಯಂ, ಗಾಂಧೀಜಿ, ಸ್ವಾಮಿ ವಿವೇಕಾನಂದ, ಬಿ. ಆರ್. ಅಂಬೇಡ್ಕರ್ – ಹೀಗೆ ಸಾವಿರಾರು ಮಹಾಪುರುಷರು ತಮ್ಮ ಸಾಧನೆಯಿಂದಲೇ ಅವರ ಕುಟುಂಬಕ್ಕೆ ಕೀರ್ತಿ ತಂದಿದ್ದಾರೆ. ಇಂಥದ್ದು ಧನ್ಯಜೀವನದ ಲಕ್ಷಣ. ಹೀಗಲ್ಲದೆ, ‘ನಾನು ಯಾರು ಗೊತ್ತಾ, ನಮ್ಮ ತಂದೆ ಆ ಆಫೀಸರ್, ನಮ್ಮ ಮಾವ ಈ ಮಂತ್ರಿ, ನಮ್ಮ ಅಜ್ಜ ಎಂಪಿ, ನಮ್ಮ ಭಾವಮೈದ ಎಂಎಲ್ಎ‘ – ಹೀಗೆ ಹೇಳಿಕೊಂಡು ಜೀವನವನ್ನು ನಡೆಸುವುದು ಅತ್ಯಂತ ಹೇಯವಾದುದು.</p>.<p>ನಾವೆಲ್ಲರೂ ಸ್ವಾಭಿಮಾನದಿಂದ ಬದುಕೋಣ; ನಿಜವಾದ ನಮ್ಮ ಜೀವನವನ್ನು ಜೀವಿಸೋಣ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಉತ್ತಮಾ ಆತ್ಮನಾ ಖ್ಯಾತಾಃ ಪಿತ್ರಾ ಖ್ಯಾತಾಶ್ಚ ಮಧ್ಯಮಾಃ ।</p>.<p>ಮಾತುಲೇನಾಧಮಾಃ ಖ್ಯಾತಾಃ ಶ್ವಶುರೇಣಾಧಮಾಧಮಾಃ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>‘ತನ್ನ ಕಾರಣದಿಂದ ತಾನೇ ಖ್ಯಾತಿಯನ್ನು ಗಳಿಸಿದವರು ಉತ್ತಮರು; ತಂದೆಯಿಂದ ಖ್ಯಾತಿಗೆ ಬಂದವರು ಮಧ್ಯಮರು; ಸೋದರಮಾವನಿಂದ ಖ್ಯಾತರಾದವರು ಅಧಮರು. ಹೆಣ್ಣು ಕೊಟ್ಟ ಮಾವನಿಂದ ಖ್ಯಾತಿಯನ್ನು ಗಳಿಸಿದವರು ಅಧಮರಲ್ಲಿಯೇ ಅಧಮರು!’</p>.<p>ಸ್ವಂತಿಕೆ ಎನ್ನುವುದು ನಮ್ಮ ವ್ಯಕ್ತಿತ್ವದ ಪ್ರಧಾನ ಗುಣ ಆಗಬೇಕು; ಹೀಗಲ್ಲದೆ ಬೇರೊಬ್ಬರ ಹೆಸರನ್ನು ಬಳಸಿಕೊಂಡು ಮೆರೆಯವುದು ನಮ್ಮ ವ್ಯಕ್ತಿತ್ವಕ್ಕೆ ಭೂಷಣವಲ್ಲ – ಎಂಬುದನ್ನು ಸುಭಾಷಿತ ಹೇಳುತ್ತಿದೆ.</p>.<p>ಮಂತ್ರಿಯೋ ಎಂಪಿಯೋ ಎಂಎಲ್ಎಯೋ ಅಲ್ಲ, ಅವರ ಬಂಧುಗಳು, ಅವರ ಬಂಧುಗಳ ಬಂಧುಗಳು ಸಮಾಜದಲ್ಲಿ ಉಂಟುಮಾಡುವ ಉಪದ್ವ್ಯಾಪಗಳನ್ನು ನಾವು ಆಗಾಗ ಅನುಭವಿಸುತ್ತಲೇ ಇರುತ್ತೇವೆ. ಹೀಗೆಯೇ ಅಧಿಕಾರಿಗಳು, ಅವರ ಮಕ್ಕಳ, ಅವರ ಸ್ನೇಹಿತರು – ಇವರ ದರ್ಪಗಳನ್ನೂ ನಾವು ಅನುಭವಿಸಿರುತ್ತೇವೆ. ಇಂಥ ಹಲವು ರೀತಿಯ ಪರಾವಲಂಬಿಗಳನ್ನು ಸುಭಾಷಿತ ಇಲ್ಲಿ ಟೀಕೆ ಮಾಡುತ್ತಿದೆ.</p>.<p>ತನ್ನದೇ ಕಾರ್ಯಶೀಲತೆಯಿಂದ ಕೀರ್ತಿಯನ್ನು ಸಂಪಾದಿಸಿದವರು ಉತ್ತಮ ವ್ಯಕ್ತಿತ್ವದವರು ಎಂದು ಅದು ಘೋಷಿಸಿದೆ. ಹೀಗೆ ಹೆಸರನ್ನು ಸಂಪಾದಿಸಿದಾಗ ನಮಗೆ ಸಂತೋಷ, ಆತ್ಮತೃಪ್ತಿಗಳು ಉಂಟಾಗುವುದು ಸುಳ್ಳಲ್ಲ. ಶ್ರೀರಾಮ ಅವನ ವ್ಯಕ್ತಿತ್ವದ ಮೂಲಕವೇ ಲೋಕದಲ್ಲಿ ಕೀರ್ತಿಯನ್ನು ಸಂಪಾದಿಸಿದ್ದು.</p>.<p>ತಂದೆಯ ಕಾರಣದಿಂದ ಅಥವಾ ಸೋದರಮಾವ – ಎಂದರೆ ತಾಯಿಯ ಕಡೆಯಿಂದ ಅಥವಾ ಮಾವನ ಆಶ್ರಯದಲ್ಲಿ ಹೆಸರನ್ನು ಪಡೆದು, ಮೆರೆಯುವವರನ್ನು ಸುಭಾಚಿತ ಚೆನ್ನಾಗಿಯೇ ಟೀಕಿಸಿದೆ. ಆತ್ಮಾಭಿಮಾನ ಎಂಬುದು ನಮ್ಮ ವ್ಯಕ್ತಿತ್ವದ ಸ್ವಭಾವವಾಗಬೇಕು. ಹೀಗಲ್ಲದೆ ಬೇರೊಬ್ಬರ ನೆರಳಿನಲ್ಲಿ ನಮ್ಮ ಅಸ್ತಿತ್ವವನ್ನು ಕಂಡುಕೊಳ್ಳುವುದು ಉತ್ತಮರ ಲಕ್ಷಣವಲ್ಲವಷ್ಟೆ.</p>.<p>ನಮ್ಮ ಕಾರಣದಿಂದ ನಮ್ಮ ಕುಟುಂಬಕ್ಕಾಗಲೀ, ಬಂಧುಗಳಿಗಾಗಲೀ ಅಥವಾ ಸ್ನೇಹಿತರಿಗಾಗಲೀ ಒಳ್ಳೆಯ ಹೆಸರು ದಕ್ಕಬೇಕು. ಹೀಗಲ್ಲದೆ ಅವರ ಹೆಸರನ್ನು ಬಳಸಿಕೊಂಡು, ನಾವು ಮೀಸೆ ತಿರುಗಿಸುವುದು ಅಯೋಗ್ಯತನವೇ ಆಗುತ್ತದೆ.</p>.<p>ಜಗತ್ತಿನಲ್ಲಿ ಹಲವರು ಸಾಧಕರು ಅವರ ತಂದೆ–ತಾಯಿಗಳ ಹೆಸರನ್ನು ತಮ್ಮ ಸಾಧನೆಯ ಮೂಲಕವಾಗಿಯೇ ಶಾಶ್ವತಗೊಳಿಸಿದ್ದಾರೆ. ಶ್ರೀನಿವಾಸ ರಾಮಾನುಜನ್, ಐಸಾಕ್ ನ್ಯೂಟನ್, ಐನ್ಸ್ಟೈನ್, ಎಸ್. ಪಿ. ಬಾಲಸುಬ್ರಹ್ಮಣ್ಯಂ, ಗಾಂಧೀಜಿ, ಸ್ವಾಮಿ ವಿವೇಕಾನಂದ, ಬಿ. ಆರ್. ಅಂಬೇಡ್ಕರ್ – ಹೀಗೆ ಸಾವಿರಾರು ಮಹಾಪುರುಷರು ತಮ್ಮ ಸಾಧನೆಯಿಂದಲೇ ಅವರ ಕುಟುಂಬಕ್ಕೆ ಕೀರ್ತಿ ತಂದಿದ್ದಾರೆ. ಇಂಥದ್ದು ಧನ್ಯಜೀವನದ ಲಕ್ಷಣ. ಹೀಗಲ್ಲದೆ, ‘ನಾನು ಯಾರು ಗೊತ್ತಾ, ನಮ್ಮ ತಂದೆ ಆ ಆಫೀಸರ್, ನಮ್ಮ ಮಾವ ಈ ಮಂತ್ರಿ, ನಮ್ಮ ಅಜ್ಜ ಎಂಪಿ, ನಮ್ಮ ಭಾವಮೈದ ಎಂಎಲ್ಎ‘ – ಹೀಗೆ ಹೇಳಿಕೊಂಡು ಜೀವನವನ್ನು ನಡೆಸುವುದು ಅತ್ಯಂತ ಹೇಯವಾದುದು.</p>.<p>ನಾವೆಲ್ಲರೂ ಸ್ವಾಭಿಮಾನದಿಂದ ಬದುಕೋಣ; ನಿಜವಾದ ನಮ್ಮ ಜೀವನವನ್ನು ಜೀವಿಸೋಣ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>