<p><strong>ನಿರಾನಂದಾ ದಾರಾ ವ್ಯಸನವಿಮುಖೋ ಬಾಂಧವಜನೋ</strong></p>.<p><strong>ಜಡೀಭೂತಂ ಮಿತ್ರಂ ಧನವಿರಹಶೀರ್ಣಃ ಪರಿಜನಃ ।</strong></p>.<p><strong>ಅಸಂತುಷ್ಟಂ ಚೇತಃ ಕುಲಿಶಕಠಿನಂ ಜೀವಿತಮಿದಂ</strong></p>.<p><strong>ವಿಧಿರ್ವಾಮಾರಂಭಸ್ತದಪಿ ಚ ಮನೋ ವಾಂಛತಿ ಸುಖಮ್ ।।</strong></p>.<p><strong>ಇದರ ತಾತ್ಪರ್ಯ ಹೀಗೆ:</strong></p>.<p>‘ಹೆಂಡತಿಗೆ ಸಂತೋಷವಿಲ್ಲ; ಕಷ್ಟದಲ್ಲಿ ಬಾಂಧವರು ದೂರವಾಗಿದ್ದಾರೆ; ಸ್ನೇಹಿತರು ಉಪಕಾರ ಮಾಡುತ್ತಿಲ್ಲ; ಪರಿಜನರು ಹಣವಿಲ್ಲದೆ ಕಂಗಲಾಗಿದ್ದಾರೆ; ಮನಸ್ಸಿಗೆ ಸಂತೋಷವಿಲ್ಲ; ಜೀವನ ವಜ್ರದಂತೆ ಕಠಿಣವಾಗಿದೆ; ದೈವವೂ ಪ್ರತಿಕೂಲವಾಗಿದೆ. ಹೀಗಿದ್ದರೂ ಮನಸ್ಸು ಸುಖವನ್ನೇ ಬಯಸುತ್ತದೆಯಲ್ಲಾ!’</p>.<p>ಮನುಷ್ಯನ ಸ್ವಭಾವದ ಬಗ್ಗೆ ಈ ಸುಭಾಷಿತ ಸಾಕಷ್ಟು ಸಂಗತಿಗಳನ್ನು ಹೇಳುತ್ತಿದೆ.</p>.<p>ಮನುಷ್ಯನ ಸ್ವಭಾವವೇ ಸುಖವನ್ನು ಹುಡುಕುವುದು. ಸತತವಾಗಿ ಅವನು ಸುಖವನ್ನು ಹುಡುಕುತ್ತಲೇ ಇರುತ್ತಾನೆ. ಆದರೆ ಎಲ್ಲಿ ಹುಡುಕುತ್ತಾನೆ? ಅದನ್ನೇ ಸುಭಾಷಿತ ಹೇಳಲು ಹೊರಟಿರುವುದು.</p>.<p><strong>ಕೇಳಲು:</strong> <a href="https://cms.prajavani.net/op-ed/podcast/the-quest-for-happiness-in-life-770697.html" target="_blank">Podcast-ದಿನದ ಸೂಕ್ತಿ: ಸುಖದ ಹುಡುಕಾಟ</a></p>.<p>ಕುಟುಂಬದಲ್ಲಿ ಸುಖ ಇದೆ ಎಂದುಕೊಳ್ಳುತ್ತೇವೆ; ನಂಟರಲ್ಲಿ ಅದನ್ನು ಹುಡುಕುತ್ತೇವೆ; ಸ್ನೇಹಿತರಿದ್ದರೆ ಸುಖ ಎಂದುಕೊಳ್ಳುತ್ತೇವೆ; ಸೇವಕರಿದ್ದರೆ ಸುಖವಾಗಿ ಬದುಕಬಹುದು ಎಂದು ಆಲೋಚಿಸುತ್ತೇವೆ; ಮನಸ್ಸು ಏನೇನನ್ನು ಬಯಸುತ್ತದೆಯೋ ಅವನ್ನೆಲ್ಲ ಪೂರೈಸುತ್ತ ಸುಖವನ್ನು ಪಡೆಯಲು ಹಂಬಲಿಸುತ್ತೇವೆ; ದೈವವನ್ನೂ ಸುಖಕ್ಕಾಗಿ ಪ್ರಾರ್ಥಿಸುತ್ತಲೇ ಇರುತ್ತೇವೆ.</p>.<p>ಇವೆಲ್ಲವೂ ನಮಗೆ ಒಂದೊಂದಾಗಿ ಒದಗಿಬಂತು ಎಂದು ಇಟ್ಟುಕೊಳ್ಳೋಣ. ಸುಖ ನಮ್ಮಲ್ಲಿ ಆಗ ಶಾಶ್ವತವಾಗಿ ನೆಲೆಯೂರಿತೆ? ಇವೆಲ್ಲವೂ ನಮಗೆ ಒದಗಿದರೂ ಸುಖ ನಮ್ಮಿಂದ ಜಾರಿಹೋಗುತ್ತಲೇ ಇರುತ್ತದೆ. ಇನ್ನು ಇವು ನಮ್ಮಿಂದ ದೂರವಾದರೆ ಸುಖ ನಮ್ಮ ಬಳಿಗೆ ಸುಳಿದೀತೆ? ಇದನ್ನೇ ಸುಭಾಷಿತ ಇಲ್ಲಿ ಧ್ವನಿಸುತ್ತಿರುವುದು.</p>.<p>ಆರಂಭದಲ್ಲಿ ಎಲ್ಲವೂ ಚೆನ್ನಾಗಿದೆ, ಸುಖವಾಗಿದೆ – ಎಂದುಕೊಳ್ಳುತ್ತೇವೆ. ಆದರೆ ಕಾಲ ಕ್ರಮೇಣ ಅವುಗಳಲ್ಲಿ ಸುಖ ಮರೆಯಾಗುತ್ತಹೋಗುತ್ತದೆ – ಬೇರೆ ಬೇರೆ ಕಾರಣಗಳಿಂದ. ಹೆಂಡತಿಗೆ ನಮ್ಮ ಸಂಪಾದನೆ ಸಾಕಾಗದೆಹೋಗಬಹುದು; ಅದರಿಂದ ಅವಳ ಸಂತೋಷ ದೂರವಾಗಿ ಅದು ನಮ್ಮ ದುಃಖಕ್ಕೂ ಕಾರಣವಾಗಬಹುದು. ನಾವು ಕಷ್ಟದಲ್ಲಿದ್ದಾಗ ನಂಟರು ನಮ್ಮ ಕೈ ಹಿಡಿಯುತ್ತಾರೆಂದು ತಿಳಿದುಕೊಂಡಿರುತ್ತೇವೆ; ಅವರು ಕೈ ಹಿಡಿಯುವ ಬದಲಿಗೆ, ಕೈ ಕೊಟ್ಟಿರುತ್ತಾರೆ. ಸ್ನೇಹಿತರೂ ನಮ್ಮಿಂದ ದೂರವಾಗಬಹುದು. ಒಂದು ತಿಂಗಳು ಸರಿಯಾಗಿ ಸಂಬಳ ಕೊಡದಿದ್ದರೆ ಸೇವಕರೂ ನಮ್ಮನ್ನು ಬಿಡಬಹುದು. ಹೀಗೆ ಎಲ್ಲೆಲ್ಲೂ ಸುಖ ಮಾಯವಾದರೆ ಮನಸ್ಸಿಗೆ ಸಂತೋಷವಾದರೂ ಹೇಗಿದ್ದೀತು? ವಿಧಿಯೂ ನಮಗೆ ಪ್ರತಿಕೂಲವಾಗಿದೆ ಎಂದೇ ಈ ವಿದ್ಯಮಾನಗಳ ತಾತ್ಪರ್ಯ.</p>.<p>ಇಷ್ಟೆಲ್ಲ ಅನಾಹುತಗಳು ನಡೆಯುತ್ತಿದ್ದರೂ ನಾವು ಮಾತ್ರ ಸುಖದ ಬಯಕೆಯಲ್ಲಿಯೇ ಜೀವಿಸುತ್ತಿರುತ್ತೇವೆ. ಇದೊಂದು ಸೋಜಿಗದ ಸಂಗತಿ.</p>.<p>ಹಾಗಾದರೆ ನಾವು ಕೊನೆಗೆ ಮಾಡಬೇಕಾದದ್ದಾದರೂ ಏನು? ಸುಖವನ್ನು ಹುಡುಕುವುದು ತಪ್ಪೇ?</p>.<p>ತಪ್ಪಲ್ಲ; ಆದರೆ ಸುಖ ಎಂದರೇನು? ಇದರ ದಿಟವಾದ ಹುಟುಕಾಟ ನಡೆಯಬೇಕು. ಇದರ ಸರಿಯಾದ ತಿಳಿವಳಿಕೆಯೇ ನಮ್ಮ ಸುಖಕ್ಕೂ ಮೂಲವಾಗುವಂಥದ್ದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನಿರಾನಂದಾ ದಾರಾ ವ್ಯಸನವಿಮುಖೋ ಬಾಂಧವಜನೋ</strong></p>.<p><strong>ಜಡೀಭೂತಂ ಮಿತ್ರಂ ಧನವಿರಹಶೀರ್ಣಃ ಪರಿಜನಃ ।</strong></p>.<p><strong>ಅಸಂತುಷ್ಟಂ ಚೇತಃ ಕುಲಿಶಕಠಿನಂ ಜೀವಿತಮಿದಂ</strong></p>.<p><strong>ವಿಧಿರ್ವಾಮಾರಂಭಸ್ತದಪಿ ಚ ಮನೋ ವಾಂಛತಿ ಸುಖಮ್ ।।</strong></p>.<p><strong>ಇದರ ತಾತ್ಪರ್ಯ ಹೀಗೆ:</strong></p>.<p>‘ಹೆಂಡತಿಗೆ ಸಂತೋಷವಿಲ್ಲ; ಕಷ್ಟದಲ್ಲಿ ಬಾಂಧವರು ದೂರವಾಗಿದ್ದಾರೆ; ಸ್ನೇಹಿತರು ಉಪಕಾರ ಮಾಡುತ್ತಿಲ್ಲ; ಪರಿಜನರು ಹಣವಿಲ್ಲದೆ ಕಂಗಲಾಗಿದ್ದಾರೆ; ಮನಸ್ಸಿಗೆ ಸಂತೋಷವಿಲ್ಲ; ಜೀವನ ವಜ್ರದಂತೆ ಕಠಿಣವಾಗಿದೆ; ದೈವವೂ ಪ್ರತಿಕೂಲವಾಗಿದೆ. ಹೀಗಿದ್ದರೂ ಮನಸ್ಸು ಸುಖವನ್ನೇ ಬಯಸುತ್ತದೆಯಲ್ಲಾ!’</p>.<p>ಮನುಷ್ಯನ ಸ್ವಭಾವದ ಬಗ್ಗೆ ಈ ಸುಭಾಷಿತ ಸಾಕಷ್ಟು ಸಂಗತಿಗಳನ್ನು ಹೇಳುತ್ತಿದೆ.</p>.<p>ಮನುಷ್ಯನ ಸ್ವಭಾವವೇ ಸುಖವನ್ನು ಹುಡುಕುವುದು. ಸತತವಾಗಿ ಅವನು ಸುಖವನ್ನು ಹುಡುಕುತ್ತಲೇ ಇರುತ್ತಾನೆ. ಆದರೆ ಎಲ್ಲಿ ಹುಡುಕುತ್ತಾನೆ? ಅದನ್ನೇ ಸುಭಾಷಿತ ಹೇಳಲು ಹೊರಟಿರುವುದು.</p>.<p><strong>ಕೇಳಲು:</strong> <a href="https://cms.prajavani.net/op-ed/podcast/the-quest-for-happiness-in-life-770697.html" target="_blank">Podcast-ದಿನದ ಸೂಕ್ತಿ: ಸುಖದ ಹುಡುಕಾಟ</a></p>.<p>ಕುಟುಂಬದಲ್ಲಿ ಸುಖ ಇದೆ ಎಂದುಕೊಳ್ಳುತ್ತೇವೆ; ನಂಟರಲ್ಲಿ ಅದನ್ನು ಹುಡುಕುತ್ತೇವೆ; ಸ್ನೇಹಿತರಿದ್ದರೆ ಸುಖ ಎಂದುಕೊಳ್ಳುತ್ತೇವೆ; ಸೇವಕರಿದ್ದರೆ ಸುಖವಾಗಿ ಬದುಕಬಹುದು ಎಂದು ಆಲೋಚಿಸುತ್ತೇವೆ; ಮನಸ್ಸು ಏನೇನನ್ನು ಬಯಸುತ್ತದೆಯೋ ಅವನ್ನೆಲ್ಲ ಪೂರೈಸುತ್ತ ಸುಖವನ್ನು ಪಡೆಯಲು ಹಂಬಲಿಸುತ್ತೇವೆ; ದೈವವನ್ನೂ ಸುಖಕ್ಕಾಗಿ ಪ್ರಾರ್ಥಿಸುತ್ತಲೇ ಇರುತ್ತೇವೆ.</p>.<p>ಇವೆಲ್ಲವೂ ನಮಗೆ ಒಂದೊಂದಾಗಿ ಒದಗಿಬಂತು ಎಂದು ಇಟ್ಟುಕೊಳ್ಳೋಣ. ಸುಖ ನಮ್ಮಲ್ಲಿ ಆಗ ಶಾಶ್ವತವಾಗಿ ನೆಲೆಯೂರಿತೆ? ಇವೆಲ್ಲವೂ ನಮಗೆ ಒದಗಿದರೂ ಸುಖ ನಮ್ಮಿಂದ ಜಾರಿಹೋಗುತ್ತಲೇ ಇರುತ್ತದೆ. ಇನ್ನು ಇವು ನಮ್ಮಿಂದ ದೂರವಾದರೆ ಸುಖ ನಮ್ಮ ಬಳಿಗೆ ಸುಳಿದೀತೆ? ಇದನ್ನೇ ಸುಭಾಷಿತ ಇಲ್ಲಿ ಧ್ವನಿಸುತ್ತಿರುವುದು.</p>.<p>ಆರಂಭದಲ್ಲಿ ಎಲ್ಲವೂ ಚೆನ್ನಾಗಿದೆ, ಸುಖವಾಗಿದೆ – ಎಂದುಕೊಳ್ಳುತ್ತೇವೆ. ಆದರೆ ಕಾಲ ಕ್ರಮೇಣ ಅವುಗಳಲ್ಲಿ ಸುಖ ಮರೆಯಾಗುತ್ತಹೋಗುತ್ತದೆ – ಬೇರೆ ಬೇರೆ ಕಾರಣಗಳಿಂದ. ಹೆಂಡತಿಗೆ ನಮ್ಮ ಸಂಪಾದನೆ ಸಾಕಾಗದೆಹೋಗಬಹುದು; ಅದರಿಂದ ಅವಳ ಸಂತೋಷ ದೂರವಾಗಿ ಅದು ನಮ್ಮ ದುಃಖಕ್ಕೂ ಕಾರಣವಾಗಬಹುದು. ನಾವು ಕಷ್ಟದಲ್ಲಿದ್ದಾಗ ನಂಟರು ನಮ್ಮ ಕೈ ಹಿಡಿಯುತ್ತಾರೆಂದು ತಿಳಿದುಕೊಂಡಿರುತ್ತೇವೆ; ಅವರು ಕೈ ಹಿಡಿಯುವ ಬದಲಿಗೆ, ಕೈ ಕೊಟ್ಟಿರುತ್ತಾರೆ. ಸ್ನೇಹಿತರೂ ನಮ್ಮಿಂದ ದೂರವಾಗಬಹುದು. ಒಂದು ತಿಂಗಳು ಸರಿಯಾಗಿ ಸಂಬಳ ಕೊಡದಿದ್ದರೆ ಸೇವಕರೂ ನಮ್ಮನ್ನು ಬಿಡಬಹುದು. ಹೀಗೆ ಎಲ್ಲೆಲ್ಲೂ ಸುಖ ಮಾಯವಾದರೆ ಮನಸ್ಸಿಗೆ ಸಂತೋಷವಾದರೂ ಹೇಗಿದ್ದೀತು? ವಿಧಿಯೂ ನಮಗೆ ಪ್ರತಿಕೂಲವಾಗಿದೆ ಎಂದೇ ಈ ವಿದ್ಯಮಾನಗಳ ತಾತ್ಪರ್ಯ.</p>.<p>ಇಷ್ಟೆಲ್ಲ ಅನಾಹುತಗಳು ನಡೆಯುತ್ತಿದ್ದರೂ ನಾವು ಮಾತ್ರ ಸುಖದ ಬಯಕೆಯಲ್ಲಿಯೇ ಜೀವಿಸುತ್ತಿರುತ್ತೇವೆ. ಇದೊಂದು ಸೋಜಿಗದ ಸಂಗತಿ.</p>.<p>ಹಾಗಾದರೆ ನಾವು ಕೊನೆಗೆ ಮಾಡಬೇಕಾದದ್ದಾದರೂ ಏನು? ಸುಖವನ್ನು ಹುಡುಕುವುದು ತಪ್ಪೇ?</p>.<p>ತಪ್ಪಲ್ಲ; ಆದರೆ ಸುಖ ಎಂದರೇನು? ಇದರ ದಿಟವಾದ ಹುಟುಕಾಟ ನಡೆಯಬೇಕು. ಇದರ ಸರಿಯಾದ ತಿಳಿವಳಿಕೆಯೇ ನಮ್ಮ ಸುಖಕ್ಕೂ ಮೂಲವಾಗುವಂಥದ್ದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>