<p><strong>ಆಹವೇ ವ್ಯಸನೇ ಚೈವ ದುರ್ಭಿಕ್ಷೇ ಶತ್ರುವಿಗ್ರಹೇ ।<br />ರಾಜದ್ವಾರೇ ಶ್ಮಶಾನೇ ಚ ಯಸ್ತಿಷ್ಠತಿ ಸ ಬಾಂಧವಃ ।।</strong></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಯುದ್ಧಕಾಲದಲ್ಲಿ, ದುಃಖದಲ್ಲಿ, ದುರ್ಭಿಕ್ಷದಲ್ಲಿ, ಶತ್ರುವಿನೊಡನೆ ನಡೆಸುವ ಹೋರಾಟದಲ್ಲಿ, ರಾಜನ ಸಭೆಯಲ್ಲಿ ಮತ್ತು ಸ್ಮಶಾನದಲ್ಲಿ ಯಾವನು ನಮ್ಮ ಜೊತೆ ನಿಲ್ಲುತ್ತಾನೋ ಅವನೇ ದಿಟವಾದ ಬಂಧು.‘</p>.<p>ಮನುಷ್ಯ ಸಂಘಜೀವಿ; ಅವನು ಒಂಟಿಯಾಗಿರಲು ಸಾಧ್ಯವಿಲ್ಲ. ಹುಟ್ಟಿನಿಂದ ಮೊದಲುಗೊಂಡು ಅವನ ಅಂತ್ಯದವರೆಗೂ ಅವನು ಹಲವು ರೀತಿಯ ಬಾಂಧವ್ಯಗಳಲ್ಲಿ ಬದುಕುತ್ತಿರುತ್ತಾನೆ. ಅವನ ಹುಟ್ಟಿನ ಜೊತೆಗೇ ಅವನ ಸಂಬಂಧಗಳ ಹುಟ್ಟು ಕೂಡ ಆರಂಭವಾಗುತ್ತದೆ. ತಾಯಿ–ತಂದೆ, ಅಕ್ಕ–ಅಣ್ಣ, ಅಜ್ಜ–ಅಜ್ಜಿ – ಇಂಥ ರಕ್ತಸಂಬಂಧಗಳ ಜೊತೆಗೆ ಅವನು ಬೆಳೆಯುತ್ತಿದ್ದಂತೆ, ಮಾವ, ಹೆಂಡತಿ, ಗಂಡ, ನಾದಿನಿ, ಅಳಿಯ – ಇಂಥ ಹಲವು ಬಾಂಧವ್ಯಗಳ ಮೂಲಕ ಇನ್ನೂ ಹತ್ತಾರು ವಿಧದ ಸಂಬಂಧಗಳು ವಿಸ್ತರವಾಗುತ್ತಹೋಗುತ್ತವೆ. ನಮ್ಮ ಹುಟ್ಟಿನ ಜೊತೆಗೆ ಆಗುವಂಥದ್ದು ರಕ್ತಸಂಬಂಧ; ಇದಕ್ಕಾಗಿ ನಾವೇನೂ ಪರಿಶ್ರಮ ಪಡಬೇಕಿಲ್ಲ; ಸಹಜವಾಗಿಯೇ ಒದಗುವಂಥದ್ದು. ಅನಂತರದಲ್ಲಿ ಒಂದಾನೊಂದು ನಿಮಿತ್ತ ಕಾರಣದಿಂದ ಒದಗುವಂಥ ಸಂಬಂಧಗಳು. ಉದಾಹರಣೆಗೆ: ಗಂಡ–ಹೆಂಡತಿ ಮುಂತಾದವರು. ಈ ಸಂಬಂಧಗಳ ಮೂಲಕ ಇನ್ನಷ್ಟು ಬಾಂಧವ್ಯಗಳು. ಈ ಬಾಂಧವ್ಯಗಳ ವ್ಯಾಪ್ತಿಗೆ ಬಂದವರೆಲ್ಲರೂ ನಮಗೆ ‘ಬಂಧುಗಳು’ಎನಿಸಿಕೊಳ್ಳುತ್ತಾರೆ.</p>.<p>ಬಂಧುಗಳು ಎಂದರೆ ಯಾರು? ನಮ್ಮವರು, ನಮ್ಮ ಹತ್ತಿರದವರು; ನಮ್ಮ ಜೀವನದ ಎಲ್ಲ ಆಗುಹೋಗುಗಳೊಂದಿಗೂ ಸಾಧಕ–ಬಾಧಕಗಳ ನೇರ ಸಂಪರ್ಕವನ್ನು ಹೊಂದಿದವರು. ಎಂದರೆ ನಮ್ಮ ಬದುಕು, ಉತ್ಕರ್ಷ, ಸಂತೋಷ, ದುಃಖ, ಆರೋಗ್ಯ – ಹೀಗೆ ನಮ್ಮ ಜೀವನದ ಎಲ್ಲ ಕ್ಷಣಗಳೂ ಯಾರ ಬೆಂಬಲ, ಪ್ರಭಾವ, ಸಂಪರ್ಕಗಳಲ್ಲಿ ಇರುತ್ತವೆಯೋ ಅಂಥವರು ನಮ್ಮ ಬಂಧುಗಳು. ನಾವು ನಮ್ಮ ಸಂತೋಷವನ್ನೂ ದುಃಖವನ್ನೂ ಯಾರೊಂದಿಗೆ ಹಂಚಿಕೊಳ್ಳಬಲ್ಲೆವೋ, ಯಾರು ಅವರ ಸಂತೋಷ–ದುಃಖಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಾರೋ, ಅಂಥವರು ನಮ್ಮ ಬಂಧುಗಳು.</p>.<p>ಆದರೆ ಸುಭಾಷಿತ ನಮ್ಮ ಬಾಂಧವ್ಯಗಳ ಲಕ್ಷಣವನ್ನು, ಸ್ವರೂಪವನ್ನು ಬೇರೆಯದೇ ರೀತಿಯಲ್ಲಿ ನಿರೂಪಿಸುತ್ತಿದೆ.</p>.<p>ಸಂತೋಷದಲ್ಲಿ ನಮ್ಮೊಂದಿಗೆ ಬಂಧುಗಳು ಇರಬಲ್ಲರು; ಆದರೆ ಅವರು ನಮ್ಮ ಕಷ್ಟದಲ್ಲೂ ಜೊತೆಯಲ್ಲಿ ನಿಲ್ಲಬಲ್ಲರೆ?</p>.<p>ಯಾರು ನಮ್ಮ ಕಷ್ಟದಲ್ಲಿ ನಮ್ಮೊಂದಿಗೆ ನಿಲ್ಲುತ್ತಾರೆಯೋ, ಅಂಥವರೇ ದಿಟವಾದ ನಮ್ಮ ಬಂಧುಗಳು – ಎನ್ನುತ್ತಿದೆ, ಸುಭಾಷಿತ. ನಮಗೆ ಕಷ್ಟ ಬರುವಂಥ ಕೆಲವು ಸಂದರ್ಭಗಳನ್ನೂ ಸುಭಾಷಿತ ಸೂಚಿಸುತ್ತಿದೆ. ಯುದ್ಧ, ದುಃಖ, ಬಡತನ, ಕಲಹ, ಸಾವು – ಇಂಥವು ನಮ್ಮನ್ನು ಕೇಳಿ ಬರುವಂಥ ಕಷ್ಟಗಳಲ್ಲ; ಇವು ಯಾವಾಗ ಬೇಕಾದರೂ ನಮ್ಮ ಮೇಲೆ ಎರುಗಬಹುದು. ಈ ಕಷ್ಟಗಳು ನಮ್ಮಲ್ಲಿಗೆ ಬಂದಾಗ ನಮ್ಮ ಜೊತೆ ನಿಲ್ಲಬಲ್ಲವರೇ ದಿಟವಾದ ಬಂಧುಗಳು – ಎನ್ನುತ್ತಿದೆ ಸುಭಾಷಿತ.</p>.<p>ಸದ್ಯದ ಪರಿಸ್ಥಿತಿಯಲ್ಲಿ ಈ ಸುಭಾಷಿತವನ್ನು ಮನನ ಮಾಡಿದಷ್ಟೂ ಹೆಚ್ಚೆಚ್ಚು ಅರ್ಥಗಳು ತೆರೆದುಕೊಳ್ಳುತ್ತವೆ, ಅಲ್ಲವೆ? ಸಾವನ್ನು ಕಂಡು ಓಡುತ್ತಿರುವ ರಕ್ತಸಂಬಂಧಗಳ ನಡುವೆ ದಿಟವಾದ ಬಾಂಧವ್ಯಗಳನ್ನು ಹುಡುಕಬೇಕಾದ ಕಾಲವಿದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಹವೇ ವ್ಯಸನೇ ಚೈವ ದುರ್ಭಿಕ್ಷೇ ಶತ್ರುವಿಗ್ರಹೇ ।<br />ರಾಜದ್ವಾರೇ ಶ್ಮಶಾನೇ ಚ ಯಸ್ತಿಷ್ಠತಿ ಸ ಬಾಂಧವಃ ।।</strong></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಯುದ್ಧಕಾಲದಲ್ಲಿ, ದುಃಖದಲ್ಲಿ, ದುರ್ಭಿಕ್ಷದಲ್ಲಿ, ಶತ್ರುವಿನೊಡನೆ ನಡೆಸುವ ಹೋರಾಟದಲ್ಲಿ, ರಾಜನ ಸಭೆಯಲ್ಲಿ ಮತ್ತು ಸ್ಮಶಾನದಲ್ಲಿ ಯಾವನು ನಮ್ಮ ಜೊತೆ ನಿಲ್ಲುತ್ತಾನೋ ಅವನೇ ದಿಟವಾದ ಬಂಧು.‘</p>.<p>ಮನುಷ್ಯ ಸಂಘಜೀವಿ; ಅವನು ಒಂಟಿಯಾಗಿರಲು ಸಾಧ್ಯವಿಲ್ಲ. ಹುಟ್ಟಿನಿಂದ ಮೊದಲುಗೊಂಡು ಅವನ ಅಂತ್ಯದವರೆಗೂ ಅವನು ಹಲವು ರೀತಿಯ ಬಾಂಧವ್ಯಗಳಲ್ಲಿ ಬದುಕುತ್ತಿರುತ್ತಾನೆ. ಅವನ ಹುಟ್ಟಿನ ಜೊತೆಗೇ ಅವನ ಸಂಬಂಧಗಳ ಹುಟ್ಟು ಕೂಡ ಆರಂಭವಾಗುತ್ತದೆ. ತಾಯಿ–ತಂದೆ, ಅಕ್ಕ–ಅಣ್ಣ, ಅಜ್ಜ–ಅಜ್ಜಿ – ಇಂಥ ರಕ್ತಸಂಬಂಧಗಳ ಜೊತೆಗೆ ಅವನು ಬೆಳೆಯುತ್ತಿದ್ದಂತೆ, ಮಾವ, ಹೆಂಡತಿ, ಗಂಡ, ನಾದಿನಿ, ಅಳಿಯ – ಇಂಥ ಹಲವು ಬಾಂಧವ್ಯಗಳ ಮೂಲಕ ಇನ್ನೂ ಹತ್ತಾರು ವಿಧದ ಸಂಬಂಧಗಳು ವಿಸ್ತರವಾಗುತ್ತಹೋಗುತ್ತವೆ. ನಮ್ಮ ಹುಟ್ಟಿನ ಜೊತೆಗೆ ಆಗುವಂಥದ್ದು ರಕ್ತಸಂಬಂಧ; ಇದಕ್ಕಾಗಿ ನಾವೇನೂ ಪರಿಶ್ರಮ ಪಡಬೇಕಿಲ್ಲ; ಸಹಜವಾಗಿಯೇ ಒದಗುವಂಥದ್ದು. ಅನಂತರದಲ್ಲಿ ಒಂದಾನೊಂದು ನಿಮಿತ್ತ ಕಾರಣದಿಂದ ಒದಗುವಂಥ ಸಂಬಂಧಗಳು. ಉದಾಹರಣೆಗೆ: ಗಂಡ–ಹೆಂಡತಿ ಮುಂತಾದವರು. ಈ ಸಂಬಂಧಗಳ ಮೂಲಕ ಇನ್ನಷ್ಟು ಬಾಂಧವ್ಯಗಳು. ಈ ಬಾಂಧವ್ಯಗಳ ವ್ಯಾಪ್ತಿಗೆ ಬಂದವರೆಲ್ಲರೂ ನಮಗೆ ‘ಬಂಧುಗಳು’ಎನಿಸಿಕೊಳ್ಳುತ್ತಾರೆ.</p>.<p>ಬಂಧುಗಳು ಎಂದರೆ ಯಾರು? ನಮ್ಮವರು, ನಮ್ಮ ಹತ್ತಿರದವರು; ನಮ್ಮ ಜೀವನದ ಎಲ್ಲ ಆಗುಹೋಗುಗಳೊಂದಿಗೂ ಸಾಧಕ–ಬಾಧಕಗಳ ನೇರ ಸಂಪರ್ಕವನ್ನು ಹೊಂದಿದವರು. ಎಂದರೆ ನಮ್ಮ ಬದುಕು, ಉತ್ಕರ್ಷ, ಸಂತೋಷ, ದುಃಖ, ಆರೋಗ್ಯ – ಹೀಗೆ ನಮ್ಮ ಜೀವನದ ಎಲ್ಲ ಕ್ಷಣಗಳೂ ಯಾರ ಬೆಂಬಲ, ಪ್ರಭಾವ, ಸಂಪರ್ಕಗಳಲ್ಲಿ ಇರುತ್ತವೆಯೋ ಅಂಥವರು ನಮ್ಮ ಬಂಧುಗಳು. ನಾವು ನಮ್ಮ ಸಂತೋಷವನ್ನೂ ದುಃಖವನ್ನೂ ಯಾರೊಂದಿಗೆ ಹಂಚಿಕೊಳ್ಳಬಲ್ಲೆವೋ, ಯಾರು ಅವರ ಸಂತೋಷ–ದುಃಖಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಾರೋ, ಅಂಥವರು ನಮ್ಮ ಬಂಧುಗಳು.</p>.<p>ಆದರೆ ಸುಭಾಷಿತ ನಮ್ಮ ಬಾಂಧವ್ಯಗಳ ಲಕ್ಷಣವನ್ನು, ಸ್ವರೂಪವನ್ನು ಬೇರೆಯದೇ ರೀತಿಯಲ್ಲಿ ನಿರೂಪಿಸುತ್ತಿದೆ.</p>.<p>ಸಂತೋಷದಲ್ಲಿ ನಮ್ಮೊಂದಿಗೆ ಬಂಧುಗಳು ಇರಬಲ್ಲರು; ಆದರೆ ಅವರು ನಮ್ಮ ಕಷ್ಟದಲ್ಲೂ ಜೊತೆಯಲ್ಲಿ ನಿಲ್ಲಬಲ್ಲರೆ?</p>.<p>ಯಾರು ನಮ್ಮ ಕಷ್ಟದಲ್ಲಿ ನಮ್ಮೊಂದಿಗೆ ನಿಲ್ಲುತ್ತಾರೆಯೋ, ಅಂಥವರೇ ದಿಟವಾದ ನಮ್ಮ ಬಂಧುಗಳು – ಎನ್ನುತ್ತಿದೆ, ಸುಭಾಷಿತ. ನಮಗೆ ಕಷ್ಟ ಬರುವಂಥ ಕೆಲವು ಸಂದರ್ಭಗಳನ್ನೂ ಸುಭಾಷಿತ ಸೂಚಿಸುತ್ತಿದೆ. ಯುದ್ಧ, ದುಃಖ, ಬಡತನ, ಕಲಹ, ಸಾವು – ಇಂಥವು ನಮ್ಮನ್ನು ಕೇಳಿ ಬರುವಂಥ ಕಷ್ಟಗಳಲ್ಲ; ಇವು ಯಾವಾಗ ಬೇಕಾದರೂ ನಮ್ಮ ಮೇಲೆ ಎರುಗಬಹುದು. ಈ ಕಷ್ಟಗಳು ನಮ್ಮಲ್ಲಿಗೆ ಬಂದಾಗ ನಮ್ಮ ಜೊತೆ ನಿಲ್ಲಬಲ್ಲವರೇ ದಿಟವಾದ ಬಂಧುಗಳು – ಎನ್ನುತ್ತಿದೆ ಸುಭಾಷಿತ.</p>.<p>ಸದ್ಯದ ಪರಿಸ್ಥಿತಿಯಲ್ಲಿ ಈ ಸುಭಾಷಿತವನ್ನು ಮನನ ಮಾಡಿದಷ್ಟೂ ಹೆಚ್ಚೆಚ್ಚು ಅರ್ಥಗಳು ತೆರೆದುಕೊಳ್ಳುತ್ತವೆ, ಅಲ್ಲವೆ? ಸಾವನ್ನು ಕಂಡು ಓಡುತ್ತಿರುವ ರಕ್ತಸಂಬಂಧಗಳ ನಡುವೆ ದಿಟವಾದ ಬಾಂಧವ್ಯಗಳನ್ನು ಹುಡುಕಬೇಕಾದ ಕಾಲವಿದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>