<p>ಇಂದಿನಿಂದ (ಡಿಸೆಂಬರ್ 16) ಧನುರ್ಮಾಸ ಆರಂಭವಾಗಲಿದೆ. ಈ ದಿನ ಸೂರ್ಯನು ಧನುರ್ ರಾಶಿಗೆ ಪ್ರವೇಶ ಮಾಡುತ್ತಾನೆ. ಆದ್ದರಿಂದ ಇದನ್ನು ಧನು ಸಂಕ್ರಮಣ, ಧನುರ್ಮಾಸ ಎಂದು ಕರೆಯಲಾಗುತ್ತದೆ. ಈ ದಿನದ ಆಚರಣೆ ಹಿನ್ನೆಲೆ ಮಹತ್ವವೇನು ಎಂಬುದರ ಕುರಿತ ಮಾಹಿತಿ ತಿಳಿಯೋಣ. </p><p>ಮಾರ್ಗಶಿರ ಮಾಸ ಮುಗಿದ ತಕ್ಷಣ ಧನುರ್ಮಾಸ ಆರಂಭವಾಗುವಾಗುತ್ತದೆ. ಪಾವಿತ್ರತೆ, ದೇವಭಕ್ತಿ, ಜಪ ಹಾಗೂ ಪಾರಾಯಣ ಮಾಡುವುದಕ್ಕೆ ಅತ್ಯಂತ ಶುಭಕಾಲ ಎಂದು ಹೇಳಲಾಗುತ್ತದೆ. </p>.ಧನುರ್ಮಾಸ ಪೂಜೆ ನಾಳೆಯಿಂದ.ಧನುರ್ಮಾಸ: ದೇಗುಲಗಳಲ್ಲಿ ಪೂಜಾ ವಿಶೇಷ.<p>ಪುರಾಣ ಕಥೆಗಳ ಪ್ರಕಾರ ಈ ಮಾಸದಲ್ಲಿ ಮಹಾಲಕ್ಷ್ಮಿ ಹಾಗೂ ವಿಷ್ಣುವಿನ ಅನುಗ್ರಹ ಭಕ್ತರ ಮೇಲೆ ಇರುತ್ತದೆ.</p><p><strong>ಈ ಧನುರ್ಮಾಸದ ಎಂಟು ವಿಶೇಷತೆಗಳು: </strong></p><ul><li><p>ಬೆಳಗಿನ ಪ್ರಾತಃಕಾಲದಲ್ಲಿ ಮಾಡುವ ಪೂಜೆ ಅತ್ಯಂತ ಶ್ರೇಷ್ಠವಾಗಿದೆ. <br>ಬ್ರಹ್ಮ ಮುಹೂರ್ತ (ಬೆಳಿಗ್ಗೆ 4 ಗಂಟೆಯಿಂದ 6 ವರೆಗೆ)<br>ಈ ಸಮಯದಲ್ಲಿ ಮಾಡಿದ ದೇವಾರಾಧನೆ ಸಾವಿರ ಪಟ್ಟು ಹೆಚ್ಚಿನ ಫಲ ನೀಡುತ್ತದೆ ಎಂದು ಹೇಳಲಾಗುತ್ತದೆ.</p></li><li><p>ಧನುರ್ಮಾಸದಲ್ಲಿ ಮಹಾಲಕ್ಷ್ಮಿ ಹಾಗೂ ನಾರಾಯಣನ ಪಾರಾಯಣ ಮಾಡುವುದು ಶುಭಕರ. <br>ಮಹಾಲಕ್ಷ್ಮಿಯ 30 ಮಂತ್ರಗಳನ್ನು ಪಠಣೆ ಮಾಡುವುದರಿಂದ ಮಹಾಲಕ್ಷ್ಮಿ ಕೃಪೆಗೆ ಪಾತ್ರರಾಗಬಹುದು.</p></li><li><p>ಇಂದು ಸೂರ್ಯನು ಧನು ರಾಶಿಯಲ್ಲಿ ಇರುವುದರಿಂದ ಆಧ್ಯಾತ್ಮಿಕ ಶಕ್ತಿ ಭೂಮಿಯ ಮೇಲೆ ಪ್ರವಾಹದಂತೆ ಹರಿಯುತ್ತದೆ ಎಂದು ಹೇಳಲಾಗುತ್ತದೆ. ಇದನ್ನು ವೈಕುಂಠ ಪ್ರವೇಶ ಎಂದು ಹೇಳುತ್ತಾರೆ.</p></li><li><p>ದೈಹಿಕ ಹಾಗೂ ಮಾನಸಿಕ ಕಲ್ಮಶಗಳು ಹೊರಹೋಗುತ್ತವೆ. ಜಪ, ಪಾರಾಯಣ, ತಪಸ್ಸು ಹಾಗೂ ಧ್ಯಾನ ಮಾಡುವುದರಿಂದ ಮನಸ್ಸಿಗೆ ಶಾಂತಿ, ದೇಹಕ್ಕೆ ಚೈತನ್ಯ ದೊರೆಯುತ್ತದೆ.</p></li><li><p>ದೇವಾಲಯಗಳಲ್ಲಿ ಪೂಜೆ ಮತ್ತು ವಿಶೇಷ ಸೇವೆ ಮಾಡುವುದು ಶುಭದಾಯಕವಾಗಿದೆ. ಧನುರ್ಮಾಸದಲ್ಲಿ ವೈಷ್ಣವ ದೇವಾಲಯಗಳಲ್ಲಿ ವಿಶೇಷ ಅನ್ನದಾನ ಮಾಡುವುದು ಒಳ್ಳೆಯದು.</p></li><li><p>ಧನುರ್ಮಾಸದಲ್ಲಿ ಮಂಗಳ ಕಾರ್ಯಗಳು, ವಿವಾಹಗಳಂತಹ ಶುಭಕಾರ್ಯಗಳನ್ನು ಮಾಡುವುದಿಲ್ಲ.ಈ ತಿಂಗಳು ಸಂಪೂರ್ಣವಾಗಿ ಪಾರಾಯಣ, ಪೂಜೆ, ಜಪ ಹಾಗೂ ವ್ರತಗಳ ಸಮಯವಾಗಿದೆ. ಈ ಅವಧಿ ಜನವರಿ 16ರ ವರೆಗೆ ಇರುತ್ತದೆ. ನಂತರ ಸೂರ್ಯ ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ. ಇದನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ.</p></li><li><p>ಧನುರ್ಮಾಸವನ್ನು ಲಕ್ಷ್ಮೀ ಕಟಾಕ್ಷದ ಮಾಸವೆಂದು ಕರೆಯುತ್ತಾರೆ. ಮನೆಯವರಿಗೆ ಸಂಪತ್ತು, ಕೀರ್ತಿ ಹಾಗೂ ಮೋಕ್ಷ ದೊರೆಯುತ್ತದೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ.</p></li></ul><p><strong>ಧನುರ್ಮಾಸದ ಪೂಜೆಯ ಸಾರಾಂಶ</strong></p><p>ಧನುರ್ಮಾಸ ಭಕ್ತಿ, ಪೂಜೆ, ಪ್ರಾರ್ಥನೆಗೆ ಮಹಾ ಪವಿತ್ರ ಕಾಲ ಎಂದು ಕರೆಯಲಾಗುತ್ತದೆ. ಸೂರ್ಯೋದಯಕ್ಕೆ ಮೊದಲು ಮಾಡುವ ಪೂಜೆಗೆ ಸಾವಿರ ಪಟ್ಟು ಹೆಚ್ಚಿನ ಫಲ ದೊರೆಯುತ್ತದೆ. ಮನೆಯಲ್ಲಿ ಮಂಗಳಕರ ಶಕ್ತಿ, ಮನಸ್ಸಿನಲ್ಲಿ ಶಾಂತಿ, ಜೀವನದಲ್ಲಿ ಸುಖ, ಸಮೃದ್ಧಿ ದೊರೆಯುತ್ತದೆ ಎಂಬ ನಂಬಿಕೆ ಇದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇಂದಿನಿಂದ (ಡಿಸೆಂಬರ್ 16) ಧನುರ್ಮಾಸ ಆರಂಭವಾಗಲಿದೆ. ಈ ದಿನ ಸೂರ್ಯನು ಧನುರ್ ರಾಶಿಗೆ ಪ್ರವೇಶ ಮಾಡುತ್ತಾನೆ. ಆದ್ದರಿಂದ ಇದನ್ನು ಧನು ಸಂಕ್ರಮಣ, ಧನುರ್ಮಾಸ ಎಂದು ಕರೆಯಲಾಗುತ್ತದೆ. ಈ ದಿನದ ಆಚರಣೆ ಹಿನ್ನೆಲೆ ಮಹತ್ವವೇನು ಎಂಬುದರ ಕುರಿತ ಮಾಹಿತಿ ತಿಳಿಯೋಣ. </p><p>ಮಾರ್ಗಶಿರ ಮಾಸ ಮುಗಿದ ತಕ್ಷಣ ಧನುರ್ಮಾಸ ಆರಂಭವಾಗುವಾಗುತ್ತದೆ. ಪಾವಿತ್ರತೆ, ದೇವಭಕ್ತಿ, ಜಪ ಹಾಗೂ ಪಾರಾಯಣ ಮಾಡುವುದಕ್ಕೆ ಅತ್ಯಂತ ಶುಭಕಾಲ ಎಂದು ಹೇಳಲಾಗುತ್ತದೆ. </p>.ಧನುರ್ಮಾಸ ಪೂಜೆ ನಾಳೆಯಿಂದ.ಧನುರ್ಮಾಸ: ದೇಗುಲಗಳಲ್ಲಿ ಪೂಜಾ ವಿಶೇಷ.<p>ಪುರಾಣ ಕಥೆಗಳ ಪ್ರಕಾರ ಈ ಮಾಸದಲ್ಲಿ ಮಹಾಲಕ್ಷ್ಮಿ ಹಾಗೂ ವಿಷ್ಣುವಿನ ಅನುಗ್ರಹ ಭಕ್ತರ ಮೇಲೆ ಇರುತ್ತದೆ.</p><p><strong>ಈ ಧನುರ್ಮಾಸದ ಎಂಟು ವಿಶೇಷತೆಗಳು: </strong></p><ul><li><p>ಬೆಳಗಿನ ಪ್ರಾತಃಕಾಲದಲ್ಲಿ ಮಾಡುವ ಪೂಜೆ ಅತ್ಯಂತ ಶ್ರೇಷ್ಠವಾಗಿದೆ. <br>ಬ್ರಹ್ಮ ಮುಹೂರ್ತ (ಬೆಳಿಗ್ಗೆ 4 ಗಂಟೆಯಿಂದ 6 ವರೆಗೆ)<br>ಈ ಸಮಯದಲ್ಲಿ ಮಾಡಿದ ದೇವಾರಾಧನೆ ಸಾವಿರ ಪಟ್ಟು ಹೆಚ್ಚಿನ ಫಲ ನೀಡುತ್ತದೆ ಎಂದು ಹೇಳಲಾಗುತ್ತದೆ.</p></li><li><p>ಧನುರ್ಮಾಸದಲ್ಲಿ ಮಹಾಲಕ್ಷ್ಮಿ ಹಾಗೂ ನಾರಾಯಣನ ಪಾರಾಯಣ ಮಾಡುವುದು ಶುಭಕರ. <br>ಮಹಾಲಕ್ಷ್ಮಿಯ 30 ಮಂತ್ರಗಳನ್ನು ಪಠಣೆ ಮಾಡುವುದರಿಂದ ಮಹಾಲಕ್ಷ್ಮಿ ಕೃಪೆಗೆ ಪಾತ್ರರಾಗಬಹುದು.</p></li><li><p>ಇಂದು ಸೂರ್ಯನು ಧನು ರಾಶಿಯಲ್ಲಿ ಇರುವುದರಿಂದ ಆಧ್ಯಾತ್ಮಿಕ ಶಕ್ತಿ ಭೂಮಿಯ ಮೇಲೆ ಪ್ರವಾಹದಂತೆ ಹರಿಯುತ್ತದೆ ಎಂದು ಹೇಳಲಾಗುತ್ತದೆ. ಇದನ್ನು ವೈಕುಂಠ ಪ್ರವೇಶ ಎಂದು ಹೇಳುತ್ತಾರೆ.</p></li><li><p>ದೈಹಿಕ ಹಾಗೂ ಮಾನಸಿಕ ಕಲ್ಮಶಗಳು ಹೊರಹೋಗುತ್ತವೆ. ಜಪ, ಪಾರಾಯಣ, ತಪಸ್ಸು ಹಾಗೂ ಧ್ಯಾನ ಮಾಡುವುದರಿಂದ ಮನಸ್ಸಿಗೆ ಶಾಂತಿ, ದೇಹಕ್ಕೆ ಚೈತನ್ಯ ದೊರೆಯುತ್ತದೆ.</p></li><li><p>ದೇವಾಲಯಗಳಲ್ಲಿ ಪೂಜೆ ಮತ್ತು ವಿಶೇಷ ಸೇವೆ ಮಾಡುವುದು ಶುಭದಾಯಕವಾಗಿದೆ. ಧನುರ್ಮಾಸದಲ್ಲಿ ವೈಷ್ಣವ ದೇವಾಲಯಗಳಲ್ಲಿ ವಿಶೇಷ ಅನ್ನದಾನ ಮಾಡುವುದು ಒಳ್ಳೆಯದು.</p></li><li><p>ಧನುರ್ಮಾಸದಲ್ಲಿ ಮಂಗಳ ಕಾರ್ಯಗಳು, ವಿವಾಹಗಳಂತಹ ಶುಭಕಾರ್ಯಗಳನ್ನು ಮಾಡುವುದಿಲ್ಲ.ಈ ತಿಂಗಳು ಸಂಪೂರ್ಣವಾಗಿ ಪಾರಾಯಣ, ಪೂಜೆ, ಜಪ ಹಾಗೂ ವ್ರತಗಳ ಸಮಯವಾಗಿದೆ. ಈ ಅವಧಿ ಜನವರಿ 16ರ ವರೆಗೆ ಇರುತ್ತದೆ. ನಂತರ ಸೂರ್ಯ ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ. ಇದನ್ನು ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ.</p></li><li><p>ಧನುರ್ಮಾಸವನ್ನು ಲಕ್ಷ್ಮೀ ಕಟಾಕ್ಷದ ಮಾಸವೆಂದು ಕರೆಯುತ್ತಾರೆ. ಮನೆಯವರಿಗೆ ಸಂಪತ್ತು, ಕೀರ್ತಿ ಹಾಗೂ ಮೋಕ್ಷ ದೊರೆಯುತ್ತದೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ.</p></li></ul><p><strong>ಧನುರ್ಮಾಸದ ಪೂಜೆಯ ಸಾರಾಂಶ</strong></p><p>ಧನುರ್ಮಾಸ ಭಕ್ತಿ, ಪೂಜೆ, ಪ್ರಾರ್ಥನೆಗೆ ಮಹಾ ಪವಿತ್ರ ಕಾಲ ಎಂದು ಕರೆಯಲಾಗುತ್ತದೆ. ಸೂರ್ಯೋದಯಕ್ಕೆ ಮೊದಲು ಮಾಡುವ ಪೂಜೆಗೆ ಸಾವಿರ ಪಟ್ಟು ಹೆಚ್ಚಿನ ಫಲ ದೊರೆಯುತ್ತದೆ. ಮನೆಯಲ್ಲಿ ಮಂಗಳಕರ ಶಕ್ತಿ, ಮನಸ್ಸಿನಲ್ಲಿ ಶಾಂತಿ, ಜೀವನದಲ್ಲಿ ಸುಖ, ಸಮೃದ್ಧಿ ದೊರೆಯುತ್ತದೆ ಎಂಬ ನಂಬಿಕೆ ಇದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>