<p>ಶಾಸ್ತ್ರತೋ ಗುರುತಶ್ಚೈವ ಸ್ವತಶ್ಚೇತಿ ತ್ರಿಸಿದ್ಧಯಃ ।</p>.<p>ಸರ್ವತ್ರ ಪುರುಷಾರ್ಥಸ್ಯ ನ ದೈವಸ್ಯ ಕದಾಚನ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>‘ಶಾಸ್ತ್ರದಿಂದ, ಗುರುವಿನಿಂದ, ತನ್ನಿಂದ – ಹೀಗೆ ಕಾರ್ಯಸಿದ್ಧಿಗಳು ಮೂರು ವಿಧ. ಇವು ಮೂರು ಕೂಡ ಪೌರುಷಕ್ಕೆ ಸೇರಿರುವಂಥವು; ಎಂದಿಗೂ ದೈವಕ್ಕೆ ಸೇರಿರುವುದಲ್ಲ.’</p>.<p>ನಮಗೆಲ್ಲರಿಗೂ ಸಮಸ್ಯೆಗಳು ಇರುವಂಥವೇ; ಸಮಸ್ಯೆಗಳೇ ಇಲ್ಲದ ಮನುಷ್ಯರು ಯಾರೂ ಇರಲಾರರು. ಆದರೆ ನಾವು ನಮಗೆ ಬಂದ ಸಮಸ್ಯೆಗಳನ್ನು ಹೇಗೆ ಪರಿಹರಿಸಿಕೊಳ್ಳುತ್ತೇವೆ? ಮುಖ್ಯವಾಗಿ ಎರಡು ದಾರಿಗಳನ್ನು ಆರಿಸಿಕೊಳ್ಳುತ್ತೇವೆ. ಒಂದು: ಏನಾಗಬೇಕಿತ್ತೋ, ಅದು ಆಗಿಯೇ ತೀರುವುದು – ಎಂದು ಮುಂದುವರೆಯುವುದು. ಇನ್ನೊಂದು: ನಾನು ಪ್ರಯತ್ನಪಟ್ಟರೆ ಬದಲಾವಣೆ ಸಾಧ್ಯ – ಎಂದು ಮುಂದುವರೆಯುವುದು. ಮೊದಲನೆಯ ದಾರಿಯನ್ನು ದೈವ ಎಂದೂ, ಎರಡನೆಯ ದಾರಿಯನ್ನು ಪೌರುಷ ಎಂದೂ ಕರೆಯಬಹುದು.</p>.<p>ಪೌರುಷ ಎಂದರೆ ಪುರುಷನಿಗೆ ಸೇರಿದ್ದು; ಎಂದರೆ ಗಂಡಸರಿಗೆ ಮಾತ್ರ ಸೇರಿದ್ದು, ಹೆಂಗಸರಿಗೆ ಅಲ್ಲ ಎಂದು ಅರ್ಥವಲ್ಲ; ಎಲ್ಲ ಮನುಷ್ಯರಿಗೂ ಸೇರಿದ್ದು ಎಂದು ಅರ್ಥ. ನಾವು ಪರಿಶ್ರಮದಿಂದ ಯಾವುದಾದರು ಕೆಲಸವೊಂದನ್ನು ನೆರವೇರಿಸಿದರೆ ಆಗ ಅದು ಪುರುಷಪ್ರಯತ್ನ ಎಂದೆನಿಸಿಕೊಳ್ಳುತ್ತದೆ. ಈ ಪುರುಷಪ್ರಯತ್ನದ ದಾರಿಯಲ್ಲಿ ಒದಗುವ ಮೂರು ಬುತ್ತಿಗಳು ಯಾವುವು ಎಂದು ಸುಭಾಷಿತ ಇಲ್ಲಿ ಹೇಳಿದೆ.</p>.<p>ಶಾಸ್ತ್ರದಿಂದ, ಗುರುವಿನಿಂದ ಮತ್ತು ತನ್ನಿಂದ ಕಾರ್ಯಸಿದ್ಧಿಗಳು ಆಗುತ್ತವೆ ಎಂಬುದು ಸುಭಾಷಿತದ ನಿಲುವು.</p>.<p>ನಾವು ಕಲಿತ ವಿದ್ಯೆಯಿಂದ ಅಥವಾ ಓದಿರುವ ಪುಸ್ತಕಗಳ ಸಹಾಯದಿಂದ ನಾವು ನಮ್ಮ ಕೆಲಸವನ್ನು ನೆರವೇರಿಸಿಕೊಳ್ಳುತ್ತೇವೆ. ಇದನ್ನೇ ಶಾಸ್ತ್ರಗಳ ನೆರವು ಎಂದಿರುವುದು ಇಲ್ಲಿ. ನಮಗೆ ಯಾರು ಮಾರ್ಗದರ್ಶನ ಮಾಡುತ್ತಾರೋ, ನಮ್ಮ ಅವಿದ್ಯೆಯನ್ನು ಹೋಗಲಾಡಿಸುತ್ತಾರೋ, ಅವರೆಲ್ಲರೂ ಗುರುಗಳೇ ಹೌದು. ಇವರು ಯಾರೂ ಆಗಬಹುದು; ನಮಗೆ ಶಾಲಾಕಾಲೇಜುಗಳಲ್ಲಿ ವಿದ್ಯೆ ಹೇಳಿಕೊಟ್ಟ ಶಿಕ್ಷಕರು ಆಗಿರಬಹುದು; ನಮ್ಮ ತಂದೆ–ತಾಯಿಗಳು, ಹೆಂಡತಿ, ಮಕ್ಕಳು, ಸ್ನೇಹಿತರು – ಯಾರೂ ಆಗಿರಬಹುದು; ಒಟ್ಟಿನಲ್ಲಿ ಅವರು ನಮ್ಮ ಹಿತೈಷಿಗಳು ಆಗಿರಬೇಕು; ನಮ್ಮ ಮುಂದೆ ಕವಿದಿರುವ ಕತ್ತಲನ್ನು ಹೋಗಲಾಡಿಸಿ ಬೆಳಕನ್ನು ನೀಡಬಲ್ಲವರಾಗಿರಬೇಕು, ಅಷ್ಟೇ. ಅಂಥವರ ನೆರವಿನಿಂದಲೂ ನಮ್ಮ ಕಾರ್ಯಗಳು ಸಿದ್ಧಿಯನ್ನು ಪಡೆಯುತ್ತವೆ.</p>.<p>ಯಾರು ಎಷ್ಟು ನೆರವಾದರೂ ಕೊನೆಗೆ ಕೆಲಸವನ್ನು ಮಾಡಬೇಕಾದವರು ನಾವೇ! ಹೀಗಾಗಿ ನಮ್ಮ ಕಾರ್ಯಸಿದ್ಧಿ ನಮ್ಮ ಕ್ರಿಯಾಶೀಲತೆಯನ್ನೇ ಹೆಚ್ಚಾಗಿ ಅವಲಂಬಿಸಿರುತ್ತದೆ ಎನ್ನುವುದನ್ನು ಮರೆಯುವಂತಿಲ್ಲ.</p>.<p>ನಮ್ಮ ಏಳಿಗೆಯಾಲೀ ಅವನತಿಯಾಗಲೀ ನಮ್ಮ ಸಾಧನೆಯನ್ನೇ ಅವಲಂಬಿಸಿರುತ್ತದೆ. ಇದನ್ನು ಬಿಟ್ಟು ನಮ್ಮ ಸೋಲು–ಗೆಲವುಗಳ ಭಾರವನ್ನು ಬೇರೊಬ್ಬರ ಮೇಲೆ ಹಾಕುವಂಥಪಲಾಯನವಾದವನ್ನು ‘ಯೋಗವಾಸಿಷ್ಠ‘ದ ಈ ಶ್ಲೋಕ ನಿರಾಕರಿಸುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಾಸ್ತ್ರತೋ ಗುರುತಶ್ಚೈವ ಸ್ವತಶ್ಚೇತಿ ತ್ರಿಸಿದ್ಧಯಃ ।</p>.<p>ಸರ್ವತ್ರ ಪುರುಷಾರ್ಥಸ್ಯ ನ ದೈವಸ್ಯ ಕದಾಚನ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>‘ಶಾಸ್ತ್ರದಿಂದ, ಗುರುವಿನಿಂದ, ತನ್ನಿಂದ – ಹೀಗೆ ಕಾರ್ಯಸಿದ್ಧಿಗಳು ಮೂರು ವಿಧ. ಇವು ಮೂರು ಕೂಡ ಪೌರುಷಕ್ಕೆ ಸೇರಿರುವಂಥವು; ಎಂದಿಗೂ ದೈವಕ್ಕೆ ಸೇರಿರುವುದಲ್ಲ.’</p>.<p>ನಮಗೆಲ್ಲರಿಗೂ ಸಮಸ್ಯೆಗಳು ಇರುವಂಥವೇ; ಸಮಸ್ಯೆಗಳೇ ಇಲ್ಲದ ಮನುಷ್ಯರು ಯಾರೂ ಇರಲಾರರು. ಆದರೆ ನಾವು ನಮಗೆ ಬಂದ ಸಮಸ್ಯೆಗಳನ್ನು ಹೇಗೆ ಪರಿಹರಿಸಿಕೊಳ್ಳುತ್ತೇವೆ? ಮುಖ್ಯವಾಗಿ ಎರಡು ದಾರಿಗಳನ್ನು ಆರಿಸಿಕೊಳ್ಳುತ್ತೇವೆ. ಒಂದು: ಏನಾಗಬೇಕಿತ್ತೋ, ಅದು ಆಗಿಯೇ ತೀರುವುದು – ಎಂದು ಮುಂದುವರೆಯುವುದು. ಇನ್ನೊಂದು: ನಾನು ಪ್ರಯತ್ನಪಟ್ಟರೆ ಬದಲಾವಣೆ ಸಾಧ್ಯ – ಎಂದು ಮುಂದುವರೆಯುವುದು. ಮೊದಲನೆಯ ದಾರಿಯನ್ನು ದೈವ ಎಂದೂ, ಎರಡನೆಯ ದಾರಿಯನ್ನು ಪೌರುಷ ಎಂದೂ ಕರೆಯಬಹುದು.</p>.<p>ಪೌರುಷ ಎಂದರೆ ಪುರುಷನಿಗೆ ಸೇರಿದ್ದು; ಎಂದರೆ ಗಂಡಸರಿಗೆ ಮಾತ್ರ ಸೇರಿದ್ದು, ಹೆಂಗಸರಿಗೆ ಅಲ್ಲ ಎಂದು ಅರ್ಥವಲ್ಲ; ಎಲ್ಲ ಮನುಷ್ಯರಿಗೂ ಸೇರಿದ್ದು ಎಂದು ಅರ್ಥ. ನಾವು ಪರಿಶ್ರಮದಿಂದ ಯಾವುದಾದರು ಕೆಲಸವೊಂದನ್ನು ನೆರವೇರಿಸಿದರೆ ಆಗ ಅದು ಪುರುಷಪ್ರಯತ್ನ ಎಂದೆನಿಸಿಕೊಳ್ಳುತ್ತದೆ. ಈ ಪುರುಷಪ್ರಯತ್ನದ ದಾರಿಯಲ್ಲಿ ಒದಗುವ ಮೂರು ಬುತ್ತಿಗಳು ಯಾವುವು ಎಂದು ಸುಭಾಷಿತ ಇಲ್ಲಿ ಹೇಳಿದೆ.</p>.<p>ಶಾಸ್ತ್ರದಿಂದ, ಗುರುವಿನಿಂದ ಮತ್ತು ತನ್ನಿಂದ ಕಾರ್ಯಸಿದ್ಧಿಗಳು ಆಗುತ್ತವೆ ಎಂಬುದು ಸುಭಾಷಿತದ ನಿಲುವು.</p>.<p>ನಾವು ಕಲಿತ ವಿದ್ಯೆಯಿಂದ ಅಥವಾ ಓದಿರುವ ಪುಸ್ತಕಗಳ ಸಹಾಯದಿಂದ ನಾವು ನಮ್ಮ ಕೆಲಸವನ್ನು ನೆರವೇರಿಸಿಕೊಳ್ಳುತ್ತೇವೆ. ಇದನ್ನೇ ಶಾಸ್ತ್ರಗಳ ನೆರವು ಎಂದಿರುವುದು ಇಲ್ಲಿ. ನಮಗೆ ಯಾರು ಮಾರ್ಗದರ್ಶನ ಮಾಡುತ್ತಾರೋ, ನಮ್ಮ ಅವಿದ್ಯೆಯನ್ನು ಹೋಗಲಾಡಿಸುತ್ತಾರೋ, ಅವರೆಲ್ಲರೂ ಗುರುಗಳೇ ಹೌದು. ಇವರು ಯಾರೂ ಆಗಬಹುದು; ನಮಗೆ ಶಾಲಾಕಾಲೇಜುಗಳಲ್ಲಿ ವಿದ್ಯೆ ಹೇಳಿಕೊಟ್ಟ ಶಿಕ್ಷಕರು ಆಗಿರಬಹುದು; ನಮ್ಮ ತಂದೆ–ತಾಯಿಗಳು, ಹೆಂಡತಿ, ಮಕ್ಕಳು, ಸ್ನೇಹಿತರು – ಯಾರೂ ಆಗಿರಬಹುದು; ಒಟ್ಟಿನಲ್ಲಿ ಅವರು ನಮ್ಮ ಹಿತೈಷಿಗಳು ಆಗಿರಬೇಕು; ನಮ್ಮ ಮುಂದೆ ಕವಿದಿರುವ ಕತ್ತಲನ್ನು ಹೋಗಲಾಡಿಸಿ ಬೆಳಕನ್ನು ನೀಡಬಲ್ಲವರಾಗಿರಬೇಕು, ಅಷ್ಟೇ. ಅಂಥವರ ನೆರವಿನಿಂದಲೂ ನಮ್ಮ ಕಾರ್ಯಗಳು ಸಿದ್ಧಿಯನ್ನು ಪಡೆಯುತ್ತವೆ.</p>.<p>ಯಾರು ಎಷ್ಟು ನೆರವಾದರೂ ಕೊನೆಗೆ ಕೆಲಸವನ್ನು ಮಾಡಬೇಕಾದವರು ನಾವೇ! ಹೀಗಾಗಿ ನಮ್ಮ ಕಾರ್ಯಸಿದ್ಧಿ ನಮ್ಮ ಕ್ರಿಯಾಶೀಲತೆಯನ್ನೇ ಹೆಚ್ಚಾಗಿ ಅವಲಂಬಿಸಿರುತ್ತದೆ ಎನ್ನುವುದನ್ನು ಮರೆಯುವಂತಿಲ್ಲ.</p>.<p>ನಮ್ಮ ಏಳಿಗೆಯಾಲೀ ಅವನತಿಯಾಗಲೀ ನಮ್ಮ ಸಾಧನೆಯನ್ನೇ ಅವಲಂಬಿಸಿರುತ್ತದೆ. ಇದನ್ನು ಬಿಟ್ಟು ನಮ್ಮ ಸೋಲು–ಗೆಲವುಗಳ ಭಾರವನ್ನು ಬೇರೊಬ್ಬರ ಮೇಲೆ ಹಾಕುವಂಥಪಲಾಯನವಾದವನ್ನು ‘ಯೋಗವಾಸಿಷ್ಠ‘ದ ಈ ಶ್ಲೋಕ ನಿರಾಕರಿಸುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>