<p>ಮಹಾವಿಷ್ಣುವಿಗೆ ಶ್ರೀದೇವಿ ಮತ್ತು ಭೂದೇವಿಯರೆಂಬ ಇಬ್ಬರು ಹೆಂಡತಿಯರಿರುತ್ತಾರೆ. ಹಿರಣ್ಯಾಕ್ಷನು ಭೂದೇವಿಯನ್ನು ಹಿಂಸಿಸಿದಾಗ ಮಹಾವಿಷ್ಣು ವರಾಹಾವತಾರ ತಾಳಿ ಹಿರಣ್ಯಾಕ್ಷನನ್ನು ವಧಿಸುತ್ತಾನೆ. ವರಾಹ ಮತ್ತು ಭೂದೇವಿಯ ಸಂಗಮದಿಂದ ಜನಿಸಿದವನೇ ನರಕಾಸುರ ಅಥವಾ ಭೌಮಾಸುರ ಎಂಬ ನಂಬಿಕೆ ಇದೆ.</p><p>ದೈವಾಂಶದಿಂದ ನರಕಾಸುರ ಜನಿಸಿದರೂ ತಮೋಗುಣದಿಂದಾಗಿ ಆತ ರಕ್ಕಸನಾಗುತ್ತಾನೆ. ತಾಯಿಯಾದ ಭೂದೇವಿ ನರಕಾಸುರನನ್ನು ಬಿಟ್ಟು ತೆರಳುತ್ತಾಳೆ. ತಂದೆ ತಾಯಿಯರ ಅಕ್ಕರೆ ಸಿಗದೆ ಅನಾಥನಾಗಿ ಬೆಳೆದ ನರಕಾಸುರ ಚಿಕ್ಕಂದಿನಲ್ಲಿಯೇ ಪುಂಡನಾಗಿರುತ್ತಾನೆ. ದೊಡ್ಡವನಾದ ಮೇಲೆ ಲೋಕಕ್ಕೆ ಕಂಟಕನಾಗುತ್ತಾನೆ ಎಂದು ಪುರಾಣ ಕಥೆಗಳು ಹೇಳುತ್ತವೆ. </p>.ಗಮನಿಸಿ: ನವರಾತ್ರಿಯಲ್ಲಿ ಈ ಕೆಲಸಗಳನ್ನು ಮಾಡಬಾರದು ಎನ್ನುತ್ತೆ ಜ್ಯೋತಿಷ.<p>ನರಕಾಸುರ ದೊಡ್ಡವನಾದ ಮೇಲೆ ಪ್ರಾಗ್ಜೋತಿಷಪುರದ ಅರಸನಾಗುತ್ತಾನೆ. ಆದರೆ ಆತನಿಗೆ ತನ್ನ ತಂದೆ ತಾಯಿಯರು ಯಾರೆಂಬುದು ತಿಳಿದಿರುವುದಿಲ್ಲ. ಹೀಗಾಗಿ, ಹೇಗಾದರೂ ಮಾಡಿ ತನ್ನ ತಂದೆ ತಾಯಿಯರು ಯಾರೆಂಬುದನ್ನು ತಿಳಿದುಕೊಂಡು ಅವರನ್ನು ಒಮ್ಮೆಯಾದರೂ ಕಾಣಬೇಕು ಎಂಬ ತವಕದಲ್ಲಿದ್ದ ನರಕಾಸುರನು ಬ್ರಹ್ಮನನ್ನು ಕುರಿತು ತಪಸ್ಸು ಮಾಡುತ್ತಾನೆ. ತಂದೆ-ತಾಯಿಯರಿಂದಲ್ಲದೇ ಅನ್ಯರಿಂದ ತನಗೆ ಮರಣ ಬರಬಾರದು’ ಎಂಬ ವರವನ್ನು ಪಡೆಯುತ್ತಾನೆ. ವರದ ಬಲದಿಂದಾಗಿ ಭೂಲೋಕದ ಅರಸರನ್ನೆಲ್ಲ ಸೋಲಿಸಿ ಹದಿನಾರು ಸಾವಿರ ಕನ್ಯೆಯರನ್ನು ತಂದು ಸೆರೆಯಲ್ಲಿರಿಸಿಕೊಳ್ಳುತ್ತಾನೆ.</p><p>ಸ್ವರ್ಗದ ಮೇಲೆ ದಾಳಿ ಮಾಡಿ ಇಂದ್ರನನ್ನು ಸೋಲಿಸಿ ಅಲ್ಲಿನ ಸಂಪತ್ತನ್ನು ತನ್ನ ಆಸ್ಥಾನಕ್ಕೆ ಕೊಂಡೊಯ್ಯುತ್ತಾನೆ. ಆ ಸಮಯದಲ್ಲಿ ಮಹಾವಿಷ್ಣುವು ಕೃಷ್ಣಾವತಾರದಲ್ಲಿ ಇದ್ದುದರಿಂದ ದೇವತೆಗಳೆಲ್ಲ ಶ್ರೀಕೃಷ್ಣನ ಮೊರೆ ಹೋಗುತ್ತಾರೆ. ಶ್ರೀಕೃಷ್ಣನು ನರಕಾಸುರನನ್ನು ಕೊಲ್ಲಲು ಹೊರಡುವಾಗ ಆತನ ಜೊತೆಯಲ್ಲಿ ಸತ್ಯಭಾಮೆಯೂ ಹೊರಡುತ್ತಾಳೆ. ಆಕೆಯೇ ಭೂದೇವಿಯಾಗಿರುವುದರಿಂದ ನರಕಾಸುರ ಪಡೆದ ವರಕ್ಕೆ ಅನುಸಾರವಾಗಿ ಕೊಲ್ಲಲು ಅನುಕೂಲವಾಗುತ್ತದೆ ಎಂದು ಶ್ರೀಕೃಷ್ಣನು ಆಕೆಯನ್ನು ಕರೆದೊಯ್ಯುತ್ತಾನೆ.</p><p>ಶ್ರೀಕೃಷ್ಣನಿಗೂ ನರಕಾಸುರನಿಗೂ ಯುದ್ಧವಾಗುತ್ತದೆ. ಸತ್ಯಭಾಮೆಯು ಯುದ್ಧದಲ್ಲಿ ಕೃಷ್ಣನಿಗೆ ನೆರವಾಗುತ್ತಾಳೆ. ಯುದ್ಧದಲ್ಲಿ ತನಗೆ ಸೋಲಾದಾಗ ನರಕಾಸುರನಿಗೆ ತಾನು ಪಡೆದ ವರದ ನೆನಪಾಗುತ್ತದೆ. ಆಗ ಅವನಿಗೆ ಇವರೇ ತನ್ನ ತಂದೆ-ತಾಯಿಗಳು ಎಂಬ ಅರಿವಾಗುತ್ತದೆ. ತಂದೆ-ತಾಯಿಯರ ಪಾದಕ್ಕೆ ಬಿದ್ದು ತನ್ನ ಹೆಸರು ಚಿರಸ್ಥಾಯಿಯಾಗುವಂತೆ ಮಾಡು ಹಾಗೂ ತನಗೆ ಮೋಕ್ಷವನ್ನು ಕರುಣಿಸು ಎಂದು ಬೇಡುತ್ತಾನೆ. ಅವನ ಕೋರಿಕೆಯನ್ನು ಮನ್ನಿಸಿದ ಶ್ರೀಕೃಷ್ಣನು ತಥಾಸ್ತು ಎಂದು ಆತನನ್ನು ಕೊಂದು ಮೋಕ್ಷವನ್ನು ಕರುಣಿಸುತ್ತಾನೆ.</p><p>ಶ್ರೀಕೃಷ್ಣನು ನರಕಾಸುರನನ್ನು ಕೊಂದ ದಿನವೇ ಆಶ್ವಯುಜ ಮಾಸದ ಕೃಷ್ಣಪಕ್ಷದ ಚತುರ್ದಶಿಯಾಗಿರುತ್ತದೆ. ಹೀಗಾಗಿ ಆ ದಿನವನ್ನು ’ನರಕಚತುರ್ದಶಿ’ ಎಂಬುದಾಗಿ ಆಚರಿಸಲಾಗುತ್ತದೆ. ಶ್ರೀಕೃಷ್ಣನು ಚತುರ್ದಶಿಯ ಬೆಳಗಿನ ಜಾವದಲ್ಲಿಯೇ ನರಕಾಸುರನನ್ನು ಕೊಂದು, ಬೆಳಗಾಗುವುದರೊಳಗೆ ಅಭ್ಯಂಗ ಸ್ನಾನವನ್ನು ಮಾಡಿ ತನ್ನ ಮೈಗೆ ಅಂಟಿದ್ದ ರಕ್ತವನ್ನೆಲ್ಲ ತೊಳೆದುಕೊಂಡಿದ್ದನು ಎಂದು ಪುರಾಣಗಲ್ಲಿ ಹೇಳಲಾಗುತ್ತದೆ. </p><p>ನರಕಾಸುರನ ಹೆಸರನ್ನು ಚಿರಸ್ಥಾಯಿಯಾಗಿ ಮಾಡಲು ಇದೇ ಸೂಕ್ತ ಎಂದು ಆಲೋಚಿಸಿದ ಶ್ರೀಕೃಷ್ಣನು ನರಕ ಚತುರ್ದಶಿಯ ದಿನದಂದು ಯಾರು ಅಭ್ಯಂಗ ಸ್ನಾನವನ್ನು ಮಾಡುವರೋ, ಅವರಿಗೆ ನರಕ ಪ್ರಾಪ್ತಿಯಾಗದೇ ಇರಲಿ ಎಂಬ ವರವನ್ನು ಪಾಲಿಸುತ್ತಾನೆ. ಈ ಪದ್ಧತಿಯನ್ನುಅನುಸರಿಸದೇ ಇರುವವರು ಸತ್ತ ಮೇಲೆ ನರಕಕ್ಕೆ ಹೋಗುತ್ತಾರೆ ಎಂಬ ಪ್ರತೀತಿ ಇದೆ ಎಂದು ಹೇಳಲಾಗುತ್ತದೆ. </p><p>ಈ ಹಿನ್ನೆಲೆಯಿಂದ ನರಕ ಚತುರ್ದಶಿಯನ್ನು ಶ್ರದ್ಧೆಯಿಂದ ಆಚರಿಸಲಾಗುತ್ತದೆ. ತ್ರಯೋದಶಿಯ ದಿನವನ್ನು ನೀರು ತುಂಬುವ ಹಬ್ಬ ಎನ್ನುತ್ತಾರೆ. ಈ ದಿನ ಮನೆಯನ್ನು ಸ್ವಚ್ಛಗೊಳಿಸಿ , ಮನೆಯ ಮುಂದೆ ಸಗಣಿಯಿಂದ ನೆಲವನ್ನು ಸಾರಿಸಿ ರಂಗೋಲಿ ಹಾಕುತ್ತಾರೆ. ಮನೆಯನ್ನು ಮಾವು ಮತ್ತು ಹೂವಿನ ತೋರಣಗಳಿಂದ ಶೃಂಗರಿಸುತ್ತಾರೆ. ದೇವರಿಗೆ ಪೂಜೆಯನ್ನು ಸಲ್ಲಿಸುತ್ತಾರೆ. </p><p>ನರಕಚತುರ್ದಶಿಯ ಮರುದಿನ ಬೂದಿನೀರು ಹಬ್ಬ ಆಚರಿಸಲಾಗುತ್ತದೆ. ಸೂರ್ಯ ಉದಯಿಸುವ ಮುನ್ನ ಎದ್ದು, ಅಭ್ಯಂಗ ಸ್ನಾನ ಮಾಡಲಾಗುತ್ತದೆ. ಅಭ್ಯಂಗ ಸ್ನಾನ ಅಂದರೆ, ಸಂಪೂರ್ಣ ದೇಹಕ್ಕೆ ಎಳ್ಳೆಣ್ಣೆ ಅಥವಾ ತೆಂಗಿನ ಎಣ್ಣೆ ಹಚ್ಚಿ ಸ್ವಲ್ಪ ಸಮಯದ ನಂತರ ಸ್ನಾನ ಮಾಡುವುದು ಎಂದರ್ಥ. ಬಳಿಕ ದೇವರನ್ನು ಪೂಜಿಸುತ್ತಾರೆ. ಅಂದು ಉದ್ದಿನ ದೋಸೆಯನ್ನು ಆಹಾರವಾಗಿ ಬಳಸಬೇಕು ಎಂದು ಜ್ಯೋತಿಷ ಹೇಳುತ್ತದೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಹಾವಿಷ್ಣುವಿಗೆ ಶ್ರೀದೇವಿ ಮತ್ತು ಭೂದೇವಿಯರೆಂಬ ಇಬ್ಬರು ಹೆಂಡತಿಯರಿರುತ್ತಾರೆ. ಹಿರಣ್ಯಾಕ್ಷನು ಭೂದೇವಿಯನ್ನು ಹಿಂಸಿಸಿದಾಗ ಮಹಾವಿಷ್ಣು ವರಾಹಾವತಾರ ತಾಳಿ ಹಿರಣ್ಯಾಕ್ಷನನ್ನು ವಧಿಸುತ್ತಾನೆ. ವರಾಹ ಮತ್ತು ಭೂದೇವಿಯ ಸಂಗಮದಿಂದ ಜನಿಸಿದವನೇ ನರಕಾಸುರ ಅಥವಾ ಭೌಮಾಸುರ ಎಂಬ ನಂಬಿಕೆ ಇದೆ.</p><p>ದೈವಾಂಶದಿಂದ ನರಕಾಸುರ ಜನಿಸಿದರೂ ತಮೋಗುಣದಿಂದಾಗಿ ಆತ ರಕ್ಕಸನಾಗುತ್ತಾನೆ. ತಾಯಿಯಾದ ಭೂದೇವಿ ನರಕಾಸುರನನ್ನು ಬಿಟ್ಟು ತೆರಳುತ್ತಾಳೆ. ತಂದೆ ತಾಯಿಯರ ಅಕ್ಕರೆ ಸಿಗದೆ ಅನಾಥನಾಗಿ ಬೆಳೆದ ನರಕಾಸುರ ಚಿಕ್ಕಂದಿನಲ್ಲಿಯೇ ಪುಂಡನಾಗಿರುತ್ತಾನೆ. ದೊಡ್ಡವನಾದ ಮೇಲೆ ಲೋಕಕ್ಕೆ ಕಂಟಕನಾಗುತ್ತಾನೆ ಎಂದು ಪುರಾಣ ಕಥೆಗಳು ಹೇಳುತ್ತವೆ. </p>.ಗಮನಿಸಿ: ನವರಾತ್ರಿಯಲ್ಲಿ ಈ ಕೆಲಸಗಳನ್ನು ಮಾಡಬಾರದು ಎನ್ನುತ್ತೆ ಜ್ಯೋತಿಷ.<p>ನರಕಾಸುರ ದೊಡ್ಡವನಾದ ಮೇಲೆ ಪ್ರಾಗ್ಜೋತಿಷಪುರದ ಅರಸನಾಗುತ್ತಾನೆ. ಆದರೆ ಆತನಿಗೆ ತನ್ನ ತಂದೆ ತಾಯಿಯರು ಯಾರೆಂಬುದು ತಿಳಿದಿರುವುದಿಲ್ಲ. ಹೀಗಾಗಿ, ಹೇಗಾದರೂ ಮಾಡಿ ತನ್ನ ತಂದೆ ತಾಯಿಯರು ಯಾರೆಂಬುದನ್ನು ತಿಳಿದುಕೊಂಡು ಅವರನ್ನು ಒಮ್ಮೆಯಾದರೂ ಕಾಣಬೇಕು ಎಂಬ ತವಕದಲ್ಲಿದ್ದ ನರಕಾಸುರನು ಬ್ರಹ್ಮನನ್ನು ಕುರಿತು ತಪಸ್ಸು ಮಾಡುತ್ತಾನೆ. ತಂದೆ-ತಾಯಿಯರಿಂದಲ್ಲದೇ ಅನ್ಯರಿಂದ ತನಗೆ ಮರಣ ಬರಬಾರದು’ ಎಂಬ ವರವನ್ನು ಪಡೆಯುತ್ತಾನೆ. ವರದ ಬಲದಿಂದಾಗಿ ಭೂಲೋಕದ ಅರಸರನ್ನೆಲ್ಲ ಸೋಲಿಸಿ ಹದಿನಾರು ಸಾವಿರ ಕನ್ಯೆಯರನ್ನು ತಂದು ಸೆರೆಯಲ್ಲಿರಿಸಿಕೊಳ್ಳುತ್ತಾನೆ.</p><p>ಸ್ವರ್ಗದ ಮೇಲೆ ದಾಳಿ ಮಾಡಿ ಇಂದ್ರನನ್ನು ಸೋಲಿಸಿ ಅಲ್ಲಿನ ಸಂಪತ್ತನ್ನು ತನ್ನ ಆಸ್ಥಾನಕ್ಕೆ ಕೊಂಡೊಯ್ಯುತ್ತಾನೆ. ಆ ಸಮಯದಲ್ಲಿ ಮಹಾವಿಷ್ಣುವು ಕೃಷ್ಣಾವತಾರದಲ್ಲಿ ಇದ್ದುದರಿಂದ ದೇವತೆಗಳೆಲ್ಲ ಶ್ರೀಕೃಷ್ಣನ ಮೊರೆ ಹೋಗುತ್ತಾರೆ. ಶ್ರೀಕೃಷ್ಣನು ನರಕಾಸುರನನ್ನು ಕೊಲ್ಲಲು ಹೊರಡುವಾಗ ಆತನ ಜೊತೆಯಲ್ಲಿ ಸತ್ಯಭಾಮೆಯೂ ಹೊರಡುತ್ತಾಳೆ. ಆಕೆಯೇ ಭೂದೇವಿಯಾಗಿರುವುದರಿಂದ ನರಕಾಸುರ ಪಡೆದ ವರಕ್ಕೆ ಅನುಸಾರವಾಗಿ ಕೊಲ್ಲಲು ಅನುಕೂಲವಾಗುತ್ತದೆ ಎಂದು ಶ್ರೀಕೃಷ್ಣನು ಆಕೆಯನ್ನು ಕರೆದೊಯ್ಯುತ್ತಾನೆ.</p><p>ಶ್ರೀಕೃಷ್ಣನಿಗೂ ನರಕಾಸುರನಿಗೂ ಯುದ್ಧವಾಗುತ್ತದೆ. ಸತ್ಯಭಾಮೆಯು ಯುದ್ಧದಲ್ಲಿ ಕೃಷ್ಣನಿಗೆ ನೆರವಾಗುತ್ತಾಳೆ. ಯುದ್ಧದಲ್ಲಿ ತನಗೆ ಸೋಲಾದಾಗ ನರಕಾಸುರನಿಗೆ ತಾನು ಪಡೆದ ವರದ ನೆನಪಾಗುತ್ತದೆ. ಆಗ ಅವನಿಗೆ ಇವರೇ ತನ್ನ ತಂದೆ-ತಾಯಿಗಳು ಎಂಬ ಅರಿವಾಗುತ್ತದೆ. ತಂದೆ-ತಾಯಿಯರ ಪಾದಕ್ಕೆ ಬಿದ್ದು ತನ್ನ ಹೆಸರು ಚಿರಸ್ಥಾಯಿಯಾಗುವಂತೆ ಮಾಡು ಹಾಗೂ ತನಗೆ ಮೋಕ್ಷವನ್ನು ಕರುಣಿಸು ಎಂದು ಬೇಡುತ್ತಾನೆ. ಅವನ ಕೋರಿಕೆಯನ್ನು ಮನ್ನಿಸಿದ ಶ್ರೀಕೃಷ್ಣನು ತಥಾಸ್ತು ಎಂದು ಆತನನ್ನು ಕೊಂದು ಮೋಕ್ಷವನ್ನು ಕರುಣಿಸುತ್ತಾನೆ.</p><p>ಶ್ರೀಕೃಷ್ಣನು ನರಕಾಸುರನನ್ನು ಕೊಂದ ದಿನವೇ ಆಶ್ವಯುಜ ಮಾಸದ ಕೃಷ್ಣಪಕ್ಷದ ಚತುರ್ದಶಿಯಾಗಿರುತ್ತದೆ. ಹೀಗಾಗಿ ಆ ದಿನವನ್ನು ’ನರಕಚತುರ್ದಶಿ’ ಎಂಬುದಾಗಿ ಆಚರಿಸಲಾಗುತ್ತದೆ. ಶ್ರೀಕೃಷ್ಣನು ಚತುರ್ದಶಿಯ ಬೆಳಗಿನ ಜಾವದಲ್ಲಿಯೇ ನರಕಾಸುರನನ್ನು ಕೊಂದು, ಬೆಳಗಾಗುವುದರೊಳಗೆ ಅಭ್ಯಂಗ ಸ್ನಾನವನ್ನು ಮಾಡಿ ತನ್ನ ಮೈಗೆ ಅಂಟಿದ್ದ ರಕ್ತವನ್ನೆಲ್ಲ ತೊಳೆದುಕೊಂಡಿದ್ದನು ಎಂದು ಪುರಾಣಗಲ್ಲಿ ಹೇಳಲಾಗುತ್ತದೆ. </p><p>ನರಕಾಸುರನ ಹೆಸರನ್ನು ಚಿರಸ್ಥಾಯಿಯಾಗಿ ಮಾಡಲು ಇದೇ ಸೂಕ್ತ ಎಂದು ಆಲೋಚಿಸಿದ ಶ್ರೀಕೃಷ್ಣನು ನರಕ ಚತುರ್ದಶಿಯ ದಿನದಂದು ಯಾರು ಅಭ್ಯಂಗ ಸ್ನಾನವನ್ನು ಮಾಡುವರೋ, ಅವರಿಗೆ ನರಕ ಪ್ರಾಪ್ತಿಯಾಗದೇ ಇರಲಿ ಎಂಬ ವರವನ್ನು ಪಾಲಿಸುತ್ತಾನೆ. ಈ ಪದ್ಧತಿಯನ್ನುಅನುಸರಿಸದೇ ಇರುವವರು ಸತ್ತ ಮೇಲೆ ನರಕಕ್ಕೆ ಹೋಗುತ್ತಾರೆ ಎಂಬ ಪ್ರತೀತಿ ಇದೆ ಎಂದು ಹೇಳಲಾಗುತ್ತದೆ. </p><p>ಈ ಹಿನ್ನೆಲೆಯಿಂದ ನರಕ ಚತುರ್ದಶಿಯನ್ನು ಶ್ರದ್ಧೆಯಿಂದ ಆಚರಿಸಲಾಗುತ್ತದೆ. ತ್ರಯೋದಶಿಯ ದಿನವನ್ನು ನೀರು ತುಂಬುವ ಹಬ್ಬ ಎನ್ನುತ್ತಾರೆ. ಈ ದಿನ ಮನೆಯನ್ನು ಸ್ವಚ್ಛಗೊಳಿಸಿ , ಮನೆಯ ಮುಂದೆ ಸಗಣಿಯಿಂದ ನೆಲವನ್ನು ಸಾರಿಸಿ ರಂಗೋಲಿ ಹಾಕುತ್ತಾರೆ. ಮನೆಯನ್ನು ಮಾವು ಮತ್ತು ಹೂವಿನ ತೋರಣಗಳಿಂದ ಶೃಂಗರಿಸುತ್ತಾರೆ. ದೇವರಿಗೆ ಪೂಜೆಯನ್ನು ಸಲ್ಲಿಸುತ್ತಾರೆ. </p><p>ನರಕಚತುರ್ದಶಿಯ ಮರುದಿನ ಬೂದಿನೀರು ಹಬ್ಬ ಆಚರಿಸಲಾಗುತ್ತದೆ. ಸೂರ್ಯ ಉದಯಿಸುವ ಮುನ್ನ ಎದ್ದು, ಅಭ್ಯಂಗ ಸ್ನಾನ ಮಾಡಲಾಗುತ್ತದೆ. ಅಭ್ಯಂಗ ಸ್ನಾನ ಅಂದರೆ, ಸಂಪೂರ್ಣ ದೇಹಕ್ಕೆ ಎಳ್ಳೆಣ್ಣೆ ಅಥವಾ ತೆಂಗಿನ ಎಣ್ಣೆ ಹಚ್ಚಿ ಸ್ವಲ್ಪ ಸಮಯದ ನಂತರ ಸ್ನಾನ ಮಾಡುವುದು ಎಂದರ್ಥ. ಬಳಿಕ ದೇವರನ್ನು ಪೂಜಿಸುತ್ತಾರೆ. ಅಂದು ಉದ್ದಿನ ದೋಸೆಯನ್ನು ಆಹಾರವಾಗಿ ಬಳಸಬೇಕು ಎಂದು ಜ್ಯೋತಿಷ ಹೇಳುತ್ತದೆ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>