<p><strong>ಬಾಗಲಕೋಟೆ:</strong> ರಾಜ್ಯ ಸರ್ಕಾರ ನಿಗದಿಪಡಿಸಿರುವ ಪ್ರಕಾರ ಜಿಲ್ಲೆಯ ನಾಯನೇಗಲಿಯಲ್ಲಿರುವ ಇಐಡಿ ಪ್ಯಾರಿ ಕಾರ್ಖಾನೆಗೆ ಕಬ್ಬು ಪೂರೈಸುವ ರೈತರಿಗೆ ಮಾತ್ರ ಪ್ರತಿ ಮೆ.ಟನ್ ಕಬ್ಬಿಗೆ ₹3,300 ದೊರೆಯಲಿದೆ. ಉಳಿದ ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡುವ ರೈತರಿಗೆ ಕಡಿಮೆ ದರ ದೊರೆಯಲಿದೆ.</p>.<p>2024–25ರಲ್ಲಿ ಕಾರ್ಖಾನೆಗಳ ಇಳುವರಿ ಆಧರಿಸಿ ಈ ಸಾಲಿನಲ್ಲಿ ಎಫ್ಆರ್ಪಿ ದರ ನಿಗದಿ ಮಾಡಲಾಗುತ್ತದೆ. ರಾಜ್ಯ ಸರ್ಕಾರವು ಶೇ11.25ರಷ್ಟು ಇಳುವರಿ ಹೊಂದಿರುವ ಕಾರ್ಖಾನೆಗಳು ₹3,300 ನೀಡಬೇಕು ಎಂದು ಘೋಷಿಸಿದೆ. ಜಿಲ್ಲೆಯಲ್ಲಿ ಇಐಡಿ ಪ್ಯಾರಿ ಕಾರ್ಖಾನೆಯ ಇಳುವರಿ ಶೇ11.87ರಷ್ಟಿದೆ. ಉಳಿದ ಕಾರ್ಖಾನೆಗಳ ಇಳುವರಿ ಶೇ11.25ಕ್ಕಿಂತ ಕಡಿಮೆ ಇದೆ.</p>.<p>ಶೇ10.25ರಷ್ಟು ಇಳುವರಿ ಹೊಂದಿರುವ ಕಾರ್ಖಾನೆಗಳು ಮೆ.ಟನ್ ಕಬ್ಬಿಗೆ ₹3,200 ನೀಡಬೇಕು ಎಂದು ಆದೇಶ ಹೊರಡಿಸಿದ್ದು, ಪ್ರತಿ ಕ್ವಿಂಟಲ್ನ ಶೇ0.1ರಷ್ಟು ಹೆಚ್ಚಳವಾದರೆ ₹1 ರೂ ನೀಡುವಂತೆ ತಿಳಿಸಲಾಗಿದೆ. </p>.<p>₹3,300 ದರದಲ್ಲಿ ಪ್ರಥಮ ಕಂತು ₹3,200 ಅನ್ನು ಸಕ್ಕರೆ ನಿಯಂತ್ರಣ ಕಾಯ್ದೆಯಡಿ ಕಬ್ಬು ಪೂರೈಸಿದ 14 ದಿನಗಳೊಳಗೆ ನೀಡಬೇಕು. ಉಳಿದ್ದರಲ್ಲಿ ಕಾರ್ಖಾನೆ ನೀಡುವ ₹50 ಹಾಗೂ ಸರ್ಕಾರದ ₹50 ಅನ್ನು ಆರು ತಿಂಗಳ ನಂತರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.</p>.<p>‘ರಾಜ್ಯ ಸರ್ಕಾರ ರಿಕವರಿ ಆಧರಿಸಿ ಬೆಲೆ ನಿಗದಿ ಮಾಡುವ ಮೂಲಕ ಗೊಂದಲ ಸೃಷ್ಟಿ ಮಾಡಿದೆ. ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳ ರೈತರಿಗೆ ಒಂದೇ ದರ ನಿಗದಿ ಮಾಡಬೇಕು. ಪ್ರತಿ ಮೆ.ಟನ್ ಕಬ್ಬಿಗೆ ₹3,500 ನಿಗದಿ ಮಾಡಬೇಕು’ ಎಂದು ರೈತ ಮುಖಂಡ ದುಂಡಪ್ಪ ಯರಗಟ್ಟಿ ಆಗ್ರಹಿಸಿದರು.</p>.<p>‘ಕೆಲವು ಕಾರ್ಖಾನೆಗಳು ಹಿಂದಿನ ವರ್ಷದ ಬಿಲ್ ಬಾಕಿ ಉಳಿಸಿಕೊಂಡಿವೆ. ಕೂಡಲೇ ಹಳೆ ಬಾಕಿಯನ್ನು ಪಾವತಿ ಮಾಡಬೇಕು. 2024–25ನೇ ಸಾಲಿನ ಎರಡನೇ ಕಂತಿನ ಬಿಲ್ ಅನ್ನು ಕೊಡಬೇಕು’ ಎಂದು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ರಾಜ್ಯ ಸರ್ಕಾರ ನಿಗದಿಪಡಿಸಿರುವ ಪ್ರಕಾರ ಜಿಲ್ಲೆಯ ನಾಯನೇಗಲಿಯಲ್ಲಿರುವ ಇಐಡಿ ಪ್ಯಾರಿ ಕಾರ್ಖಾನೆಗೆ ಕಬ್ಬು ಪೂರೈಸುವ ರೈತರಿಗೆ ಮಾತ್ರ ಪ್ರತಿ ಮೆ.ಟನ್ ಕಬ್ಬಿಗೆ ₹3,300 ದೊರೆಯಲಿದೆ. ಉಳಿದ ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡುವ ರೈತರಿಗೆ ಕಡಿಮೆ ದರ ದೊರೆಯಲಿದೆ.</p>.<p>2024–25ರಲ್ಲಿ ಕಾರ್ಖಾನೆಗಳ ಇಳುವರಿ ಆಧರಿಸಿ ಈ ಸಾಲಿನಲ್ಲಿ ಎಫ್ಆರ್ಪಿ ದರ ನಿಗದಿ ಮಾಡಲಾಗುತ್ತದೆ. ರಾಜ್ಯ ಸರ್ಕಾರವು ಶೇ11.25ರಷ್ಟು ಇಳುವರಿ ಹೊಂದಿರುವ ಕಾರ್ಖಾನೆಗಳು ₹3,300 ನೀಡಬೇಕು ಎಂದು ಘೋಷಿಸಿದೆ. ಜಿಲ್ಲೆಯಲ್ಲಿ ಇಐಡಿ ಪ್ಯಾರಿ ಕಾರ್ಖಾನೆಯ ಇಳುವರಿ ಶೇ11.87ರಷ್ಟಿದೆ. ಉಳಿದ ಕಾರ್ಖಾನೆಗಳ ಇಳುವರಿ ಶೇ11.25ಕ್ಕಿಂತ ಕಡಿಮೆ ಇದೆ.</p>.<p>ಶೇ10.25ರಷ್ಟು ಇಳುವರಿ ಹೊಂದಿರುವ ಕಾರ್ಖಾನೆಗಳು ಮೆ.ಟನ್ ಕಬ್ಬಿಗೆ ₹3,200 ನೀಡಬೇಕು ಎಂದು ಆದೇಶ ಹೊರಡಿಸಿದ್ದು, ಪ್ರತಿ ಕ್ವಿಂಟಲ್ನ ಶೇ0.1ರಷ್ಟು ಹೆಚ್ಚಳವಾದರೆ ₹1 ರೂ ನೀಡುವಂತೆ ತಿಳಿಸಲಾಗಿದೆ. </p>.<p>₹3,300 ದರದಲ್ಲಿ ಪ್ರಥಮ ಕಂತು ₹3,200 ಅನ್ನು ಸಕ್ಕರೆ ನಿಯಂತ್ರಣ ಕಾಯ್ದೆಯಡಿ ಕಬ್ಬು ಪೂರೈಸಿದ 14 ದಿನಗಳೊಳಗೆ ನೀಡಬೇಕು. ಉಳಿದ್ದರಲ್ಲಿ ಕಾರ್ಖಾನೆ ನೀಡುವ ₹50 ಹಾಗೂ ಸರ್ಕಾರದ ₹50 ಅನ್ನು ಆರು ತಿಂಗಳ ನಂತರ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.</p>.<p>‘ರಾಜ್ಯ ಸರ್ಕಾರ ರಿಕವರಿ ಆಧರಿಸಿ ಬೆಲೆ ನಿಗದಿ ಮಾಡುವ ಮೂಲಕ ಗೊಂದಲ ಸೃಷ್ಟಿ ಮಾಡಿದೆ. ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳ ರೈತರಿಗೆ ಒಂದೇ ದರ ನಿಗದಿ ಮಾಡಬೇಕು. ಪ್ರತಿ ಮೆ.ಟನ್ ಕಬ್ಬಿಗೆ ₹3,500 ನಿಗದಿ ಮಾಡಬೇಕು’ ಎಂದು ರೈತ ಮುಖಂಡ ದುಂಡಪ್ಪ ಯರಗಟ್ಟಿ ಆಗ್ರಹಿಸಿದರು.</p>.<p>‘ಕೆಲವು ಕಾರ್ಖಾನೆಗಳು ಹಿಂದಿನ ವರ್ಷದ ಬಿಲ್ ಬಾಕಿ ಉಳಿಸಿಕೊಂಡಿವೆ. ಕೂಡಲೇ ಹಳೆ ಬಾಕಿಯನ್ನು ಪಾವತಿ ಮಾಡಬೇಕು. 2024–25ನೇ ಸಾಲಿನ ಎರಡನೇ ಕಂತಿನ ಬಿಲ್ ಅನ್ನು ಕೊಡಬೇಕು’ ಎಂದು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>