ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ: ದನಗಳಿಗೆ ಈಗ ಚರ್ಮಗಂಟು ಬೇನೆ

ಜಿಲ್ಲೆಯಲ್ಲಿ 20 ದಿನಗಳಲ್ಲಿ 105 ಗ್ರಾಮಗಳಿಗೆ ವ್ಯಾಪಿಸಿದ ಸಾಂಕ್ರಾಮಿಕ
Last Updated 6 ಅಕ್ಟೋಬರ್ 2020, 13:32 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯಲ್ಲಿ ಜಾನುವಾರುಗಳಿಗೆ ಚರ್ಮ ಗಂಟು ರೋಗ (ಕ್ಯಾಪ್ರಿಫಾಕ್ಸ್) ದಿನೇ ದಿನೇ ಏರಿಕೆಯಾಗುತ್ತಿದೆ. ಇದು ರೈತಾಪಿ ವರ್ಗದಲ್ಲಿ ಆತಂಕಕ್ಕೆ ಕಾರಣವಾಗಿದೆ.ಕಳೆದ 20 ದಿನಗಳಿಂದ ಜಿಲ್ಲೆಯಲ್ಲಿ 105 ಹಳ್ಳಿಗಳಲ್ಲಿ ಈ ರೋಗ ಕಾಣಿಸಿಕೊಂಡಿದೆ. ಅದರಲ್ಲೂ ಹಸು ಹಾಗೂ ಎತ್ತುಗಳಲ್ಲಿ ಮಾತ್ರ ಹೆಚ್ಚಾಗಿ ಕಾಣಿಸಿಕೊಂಡಿದೆ.

ರಾಜ್ಯದಲ್ಲಿ ಮೊದಲು ಹಾಸನ ಜಿಲ್ಲೆ ಚನ್ನರಾಯಪಟ್ಟಣದಲ್ಲಿ ಕಾಣಿಸಿಕೊಂಡಿತ್ತು. ಈಗ ಬಹುತೇಕ ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಿಗೂ ಹರಡಿದೆ ಎಂದು ಪಶುಸಂಗೋಪನಾ ಇಲಾಖೆ ಬಾಗಲಕೋಟೆ ತಾಲ್ಲೂಕು ಸಹಾಯಕ ನಿರ್ದೇಶಕ ಡಾ.ಆರ್.ಎಸ್.ಪದರಾ ಹೇಳುತ್ತಾರೆ.

’ಮಳೆ ಜಾಸ್ತಿ ಇದ್ದ ಕಾರಣ ವೈರಸ್‌ಗೆ ಪೂರಕ ವಾತಾವರಣ ಇದ್ದು, ಬಹುಬೇಗನೇ ಹರಡಿತ್ತು. ಈಗ ಬಿಸಿಲು ಏರುತ್ತಿದ್ದಂತೆಯೇ ಹರಡುವಿಕೆ ತಗ್ಗುತ್ತಿದೆ. ರೈತರು ಒಂದಷ್ಟು ಮುಂಜಾಗರೂಕತೆ ವಹಿಸಬೇಕು‘ ಎಂದು ಡಾ.ಪದರಾ ತಿಳಿಸಿದರು.

ಗಂಭೀರ ಪರಿಣಾಮ

ವೈರಸ್‌ ಜನ್ಯವಾದ ಈ ರೋಗ ಪ್ರಮುಖವಾಗಿ ಕ್ಯುಲಿಕಾಯ್ಡ್ ಹೆಸರಿನ ಸೊಳ್ಳೆಯಿಂದ ಹಾಗೂ ಉಣ್ಣೆ, ನೊಣಗಳಿಂದ ಹರಡುತ್ತದೆ.ಚರ್ಮದ ಮೇಲೆ ದದ್ದರ (ಗಾದರಿ) ರೂಪದಲ್ಲಿ ಗಂಟು ಕಾಣಿಸಿಕೊಂಡು ನಂತರ ಅವು ಒಡೆದು ಗಾಯವಾಗುತ್ತವೆ. ಈ ವೇಳೆ ರಾಸು ಜ್ವರದಿಂದ ಬಳಲುತ್ತದೆ.

ಮುಂಗಾಲು ಭಾಗದಲ್ಲಿ ಬಾವು ಹಾಗೂ ಬಾಯಿಂದ ಜೊಲ್ಲು ಬರುತ್ತದೆ.ರೋಗ ರಾಸುಗಳಿಗೆ ಐದರಿಂದ ಏಳು ದಿನಗಳವರೆಗೆ ಕಾಡುತ್ತದೆ. ಚರ್ಮಗಂಟು ರೋಗದಿಂದ ಬಳಲುವ ಹಸುವಿನಲ್ಲಿ ಹಾಲಿನ ಇಳುವರಿ ಕಡಿಮೆಯಾಗುತ್ತದೆ. ಉಳುಮೆ ಮಾಡುವ ಎತ್ತು, ಕೆಲಸ ಮಾಡಲು ಸಾಧ್ಯವಾಗದೇ ನಿಶ್ಯಕ್ತಗೊಳ್ಳುತ್ತದೆ. ತಕ್ಷಣ ಜ್ವರ ನಿಯಂತ್ರಿಸದಿದ್ದರೆ ಸಾವು ಸಂಭವಿಸಬಹುದು. ಗಬ್ಬ ಧರಿಸಿದ ಹಸು ಫಲವಂತಿಕೆ ಕಳೆದುಕೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT