ಕೃಷ್ಣಾ ನದಿ ಕಳೆದ ಒಂದು ತಿಂಗಳಿಂದ ಬತ್ತಿ ಬರಿದಾಗಿತ್ತು, ಹಿಪ್ಪರಗಿ ಜಲಾಶಯದಿಂದ ನಗರಗಳಿಂದ ಸರಬರಾಜು ಆಗುತ್ತಿರುವ ನೀರು ಸ್ಥಗಿತಗೊಂಡಿತ್ತು. ನದಿಗೆ ನೀರು ಹರಿದು ಬಂದ ಹಿನ್ನಲೆಯಲ್ಲಿ ಮತ್ತೆ ನೀರು ಪೂರೈಕೆ ಪುನಾರಾರಂಭವಾಗಿದೆ. ರೈತರು, ನದಿಯ ಪಕ್ಕದ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ. ಒಟ್ಟು 6 ಟಿಎಂಸಿ ಸಾಮರ್ಥ್ಯ ಹೊಂದಿರುವ ಹಿಪ್ಪರಗಿ ಜಲಾಶಯದಲ್ಲಿ ಡೆಡ್ ಸ್ಟೋರೆಜ್ನಲ್ಲಿ 0.8 ಟಿಎಂಸಿಯಷ್ಟು ನೀರು ಸಂಗ್ರಹವಾಗಿದೆ.