ಮಹಾಲಿಂಗಪುರ: ಸ್ಥಳೀಯ ಶಾಂತಿನಿಕೇತನ ಕಾಲೊನಿಯ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಜರುಗಿತು. ಜಾತ್ರೆಯ ನಿಮಿತ್ತ ಬೆಳಿಗ್ಗೆ 6 ಘಂಟೆಗೆ ಅಯ್ಯಪ್ಪ ಮಾಲಾಧಾರಿಗಳಿಂದ ರುದ್ರಾಭಿಷೇಕ, 10 ಘಂಟೆಗೆ ಮಹಾಪೂಜೆ, 11 ಘಂಟೆಗೆ ಉಡಿತುಂಬವ ಕಾರ್ಯಕ್ರಮಗಳು ಜರುಗಿದವು.
12 ಘಂಟೆಗೆ ಲಕ್ಷ್ಮಿದೇವಿಯ ಅರ್ಚಕಿ ಶಾಂತವ್ವ ನಂದಿಯವರು ಅಗ್ನಿಕುಂಡ ಹಾಯ್ದು ಭಕ್ತಿ ಮೆರೆದರು. ನಂತರ ಮಹಾಮಂಗಳಾರತಿ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರುಗಿದವು. ಭಕ್ತರ ಭಾಗ್ಯದಾತೆ, ಮಹಿಮಾಶಾಲಿ ಲಕ್ಷ್ಮೀದೇವಿಯ ಜಾತ್ರೆಗೆ ಮಹಾಲಿಂಗಪುರ ಹಾಗೂ ಸುತ್ತ-ಮುತ್ತಲಿನ ಊರುಗಳ ಭಕ್ತರು ಆಗಮಿಸಿದ್ದರು.