<p><strong>ಗುಳೇದಗುಡ್ಡ:</strong> ಸಮಯಕ್ಕೆ ಅನುಸಾರ ಶಿಸ್ತಿನಿಂದ ಪೆಂಡಾಲ್ ಹಾಕುವ ಮೂಲಕ ಯಾವುದೇ ಕಾರ್ಯಕ್ರಮ ಯಶಸ್ವಿಯಾಗಲು ಪೆಂಡಾಲ್ ಮಾಲೀಕರು ಕಾರಣಿಕರ್ತರಾಗಿರುವುದರಿಂದ ಪೆಂಡಾಲ್ ಮಾಲೀಕರ ಸೇವೆ ಸ್ಮರಣೀಯ ಎಂದು ಮಾಜಿ ಶಾಸಕ ರಾಜಶೇಖರ ಶೀಲವಂತ ಹೇಳಿದರು.</p>.<p>ಅವರು ಭಾನುವಾರ ಪೆಂಡಾಲ್,ಲೈಟಿಂಗ್, ಧ್ವನಿವರ್ಧಕ ಮತ್ತು ಡೆಕೋರೇಷನ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಖಣದ ನಗರಿ ವೈಭವ-2025ರ ಶೀರ್ಷಿಕೆಯಲ್ಲಿ ತಾಲ್ಲೂಕು ಮಟ್ಟದ ಪೆಂಡಾಲ್ ಮಾಲೀಕರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.</p>.<p>ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಸ್ತಿಗೆ ಮಹತ್ವವಿದೆ. ಯಾರು ಉತ್ತಮವಾದ ಆಕರ್ಷಿಣೀಯವಾದ ಸಮಾರಂಭ ಆರಂಭವಾಗುವ ಮುಂಚೆ ಎಲ್ಲ ಸಿದ್ಧತೆ ಮಾಡಿ ಯಶಸ್ವಿಗೆ ಕಾರಣವಾಗುವ ಪೆಂಡಾಲ್ ಮಾಲೀಕರಿಗೆ ಬೇಡಿಕೆ ಇದೆ. ಜೆಡಿಎಸ್ ಅಧ್ಯಕ್ಷ ಹನಮಂತ ಮಾವಿನಮರದ, ಮುಖಂಡ ಮಹಾಂತೇಶ ಮಮದಾಪೂರ ಮಾತನಾಡಿದರು.</p>.<p>ತಾಲ್ಲೂಕು ಪೆಂಡಾಲ್, ಲೈಟಿಂಗ್, ಧ್ವನಿವರ್ಧಕ ಮತ್ತು ಡೆಕೋರೇಷನ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶರಣಬಸು ಕರನಂದಿ ಅಧ್ಯಕ್ಷತೆವಹಿಸಿ ಮಾತನಾಡಿದರು.</p>.<p>ಮರಡಿಮಠದ ಕಾಶೀನಾಥ ಶ್ರೀ, ಕೋಟೆಕಲ್ ಅಮರೇಶ್ವರ ಮಠದ ನೀಲಕಂಠ ಶಿವಾಚಾರ್ಯ ಶ್ರೀ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಸಂಘದ ಗೌರವಾಧ್ಯಕ್ಷ ಪ್ರಭು ತಟ್ಟಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p>ಸಂಘದ ರಾಜ್ಯಾಧ್ಯಕ್ಷ ಅಬ್ದುಲ್ ಕರೀಮ ಅತ್ತಾರ, ಡಾ.ನಾಗರಾಜ ಕುರಿ, ರಾಘು ಬಳಿಗಾರ, ಮೋಹನ ಕರನಂದಿ, ರಾಜು ಮನವಳ್ಳಿ, ಮಹೇಶ ಮೊಕಾಶಿ, ವೆಂಕಟೇಶ ಮಹೇಂದ್ರಕರ, ಮಂಜುನಾಥ ಭಗವತಿ, ಲಕ್ಷ್ಮಣ ಗಾಡದ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಳೇದಗುಡ್ಡ:</strong> ಸಮಯಕ್ಕೆ ಅನುಸಾರ ಶಿಸ್ತಿನಿಂದ ಪೆಂಡಾಲ್ ಹಾಕುವ ಮೂಲಕ ಯಾವುದೇ ಕಾರ್ಯಕ್ರಮ ಯಶಸ್ವಿಯಾಗಲು ಪೆಂಡಾಲ್ ಮಾಲೀಕರು ಕಾರಣಿಕರ್ತರಾಗಿರುವುದರಿಂದ ಪೆಂಡಾಲ್ ಮಾಲೀಕರ ಸೇವೆ ಸ್ಮರಣೀಯ ಎಂದು ಮಾಜಿ ಶಾಸಕ ರಾಜಶೇಖರ ಶೀಲವಂತ ಹೇಳಿದರು.</p>.<p>ಅವರು ಭಾನುವಾರ ಪೆಂಡಾಲ್,ಲೈಟಿಂಗ್, ಧ್ವನಿವರ್ಧಕ ಮತ್ತು ಡೆಕೋರೇಷನ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಖಣದ ನಗರಿ ವೈಭವ-2025ರ ಶೀರ್ಷಿಕೆಯಲ್ಲಿ ತಾಲ್ಲೂಕು ಮಟ್ಟದ ಪೆಂಡಾಲ್ ಮಾಲೀಕರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.</p>.<p>ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಸ್ತಿಗೆ ಮಹತ್ವವಿದೆ. ಯಾರು ಉತ್ತಮವಾದ ಆಕರ್ಷಿಣೀಯವಾದ ಸಮಾರಂಭ ಆರಂಭವಾಗುವ ಮುಂಚೆ ಎಲ್ಲ ಸಿದ್ಧತೆ ಮಾಡಿ ಯಶಸ್ವಿಗೆ ಕಾರಣವಾಗುವ ಪೆಂಡಾಲ್ ಮಾಲೀಕರಿಗೆ ಬೇಡಿಕೆ ಇದೆ. ಜೆಡಿಎಸ್ ಅಧ್ಯಕ್ಷ ಹನಮಂತ ಮಾವಿನಮರದ, ಮುಖಂಡ ಮಹಾಂತೇಶ ಮಮದಾಪೂರ ಮಾತನಾಡಿದರು.</p>.<p>ತಾಲ್ಲೂಕು ಪೆಂಡಾಲ್, ಲೈಟಿಂಗ್, ಧ್ವನಿವರ್ಧಕ ಮತ್ತು ಡೆಕೋರೇಷನ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶರಣಬಸು ಕರನಂದಿ ಅಧ್ಯಕ್ಷತೆವಹಿಸಿ ಮಾತನಾಡಿದರು.</p>.<p>ಮರಡಿಮಠದ ಕಾಶೀನಾಥ ಶ್ರೀ, ಕೋಟೆಕಲ್ ಅಮರೇಶ್ವರ ಮಠದ ನೀಲಕಂಠ ಶಿವಾಚಾರ್ಯ ಶ್ರೀ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಸಂಘದ ಗೌರವಾಧ್ಯಕ್ಷ ಪ್ರಭು ತಟ್ಟಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.</p>.<p>ಸಂಘದ ರಾಜ್ಯಾಧ್ಯಕ್ಷ ಅಬ್ದುಲ್ ಕರೀಮ ಅತ್ತಾರ, ಡಾ.ನಾಗರಾಜ ಕುರಿ, ರಾಘು ಬಳಿಗಾರ, ಮೋಹನ ಕರನಂದಿ, ರಾಜು ಮನವಳ್ಳಿ, ಮಹೇಶ ಮೊಕಾಶಿ, ವೆಂಕಟೇಶ ಮಹೇಂದ್ರಕರ, ಮಂಜುನಾಥ ಭಗವತಿ, ಲಕ್ಷ್ಮಣ ಗಾಡದ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>