<p><strong>ಮಹಾಲಿಂಗಪುರ:</strong> ‘ಹಿಂದೂ ವಿರೋಧಿ ಕಾಂಗ್ರೆಸ್ಗೆ ಮತ ಹಾಕಿ ಆ ಪಕ್ಷದವರನ್ನು ದೊಡ್ಡ ಸ್ಥಾನದಲ್ಲಿ ಕೂರಿಸಿ ಅವರಿಗೆ ಲೂಟಿ ಮಾಡಲು ಅವಕಾಶ ನೀಡುತ್ತಿದ್ದೇವೆ’ ಎಂದು ಶಿವಸೇನಾ ರಾಜ್ಯ ಘಟಕದ ಅಧ್ಯಕ್ಷ ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ ಆರೋಪಿಸಿದರು.</p>.<p>ಪಟ್ಟಣದ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಶಿವಸೇನೆ ಪಕ್ಷದಿಂದ ಭಾನುವಾರ ಹಮ್ಮಿಕೊಂಡ ಬಾಗಲಕೋಟೆ ಜಿಲ್ಲಾ ಪರಿವರ್ತನಾ ಪರ್ವ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಹಿಂದುತ್ವವನ್ನು ಗುರಾಣಿಯಾಗಿ ಹಿಡಿದು ಅಧಿಕಾರ ಪಡೆಯಲು ಕರ್ನಾಟಕದಲ್ಲಿ ಶಿವಸೇನೆ ಪಕ್ಷವನ್ನು ತಂದಿಲ್ಲ. ಶಿವಸೇನೆಯ ಅಧ್ಯಕ್ಷ ಏಕನಾಥ ಸಿಂಧೆ ಅವರು ಕೃಷಿ ಅಭಿವೃದ್ಧಿಗೆ ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿರುವಂತೆ ಕರ್ನಾಟಕದ ಶಿವಸೇನೆ ಕಾರ್ಯ ಪ್ರವೃತ್ತವಾಗಲಿದೆ’ ಎಂದರು.</p>.<p>‘ಹಿಂದೂಗಳ ಮತ ಪಡೆದ ರಾಜಕಾರಣಿಗಳು ಅವರು ಸಂಕಷ್ಟದಲ್ಲಿದ್ದಾಗ ಅವರ ಸಹಾಯಕ್ಕೆ ಬರಲಿಲ್ಲ. ವಂಶಪಾರಂಪರಿಕ ಆಡಳಿತ ಕರ್ನಾಟಕದಲ್ಲಿ ನಡೆಯುತ್ತಿದೆ. ಮತ ಹಾಕಿರುವ ಕಾರ್ಯಕರ್ತರು ಕೇಸ್ ಹಾಕಿಕೊಂಡು ಜೈಲ್ಗೆ ಹೋಗುತ್ತಿದ್ದಾರೆ. ಆದರೆ, ಮತ ಪಡೆದ ಶಾಸಕರು, ಅವರ ಮಕ್ಕಳು ವಿಧಾನಸಭೆ ಪ್ರವೇಶ ಮಾಡುತ್ತಿದ್ದಾರೆ’ ಎಂದರು.</p>.<p>ರಾಜ್ಯ ಸಂಘಟನಾ ಕಾರ್ಯದರ್ಶಿ ಮಹಾಲಿಂಗಪ್ಪ ಗುಂಜಿಗಾಂವಿ ಮಾತನಾಡಿದರು. ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ ಸಹಜಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪಕ್ಷದ ಗಂಗಾಧರ ಕುಲಕರ್ಣಿ, ಎಸ್.ಭಾಸ್ಕರನ್, ಅಮರನಾಥ, ಎಂ.ಎಸ್.ಹರೀಶ, ನಾಗರಾಜ ಭಜಂತ್ರಿ, ಅನೀಲ ಕಿರಿಕಿರಿ, ಪ್ರಹ್ಲಾದ ನೂಲಿ, ರಾಜು ಪರಮಾನಟ್ಟಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಹಾಲಿಂಗಪುರ:</strong> ‘ಹಿಂದೂ ವಿರೋಧಿ ಕಾಂಗ್ರೆಸ್ಗೆ ಮತ ಹಾಕಿ ಆ ಪಕ್ಷದವರನ್ನು ದೊಡ್ಡ ಸ್ಥಾನದಲ್ಲಿ ಕೂರಿಸಿ ಅವರಿಗೆ ಲೂಟಿ ಮಾಡಲು ಅವಕಾಶ ನೀಡುತ್ತಿದ್ದೇವೆ’ ಎಂದು ಶಿವಸೇನಾ ರಾಜ್ಯ ಘಟಕದ ಅಧ್ಯಕ್ಷ ಆಂದೋಲಾದ ಸಿದ್ಧಲಿಂಗ ಸ್ವಾಮೀಜಿ ಆರೋಪಿಸಿದರು.</p>.<p>ಪಟ್ಟಣದ ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದಲ್ಲಿ ಶಿವಸೇನೆ ಪಕ್ಷದಿಂದ ಭಾನುವಾರ ಹಮ್ಮಿಕೊಂಡ ಬಾಗಲಕೋಟೆ ಜಿಲ್ಲಾ ಪರಿವರ್ತನಾ ಪರ್ವ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಹಿಂದುತ್ವವನ್ನು ಗುರಾಣಿಯಾಗಿ ಹಿಡಿದು ಅಧಿಕಾರ ಪಡೆಯಲು ಕರ್ನಾಟಕದಲ್ಲಿ ಶಿವಸೇನೆ ಪಕ್ಷವನ್ನು ತಂದಿಲ್ಲ. ಶಿವಸೇನೆಯ ಅಧ್ಯಕ್ಷ ಏಕನಾಥ ಸಿಂಧೆ ಅವರು ಕೃಷಿ ಅಭಿವೃದ್ಧಿಗೆ ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿರುವಂತೆ ಕರ್ನಾಟಕದ ಶಿವಸೇನೆ ಕಾರ್ಯ ಪ್ರವೃತ್ತವಾಗಲಿದೆ’ ಎಂದರು.</p>.<p>‘ಹಿಂದೂಗಳ ಮತ ಪಡೆದ ರಾಜಕಾರಣಿಗಳು ಅವರು ಸಂಕಷ್ಟದಲ್ಲಿದ್ದಾಗ ಅವರ ಸಹಾಯಕ್ಕೆ ಬರಲಿಲ್ಲ. ವಂಶಪಾರಂಪರಿಕ ಆಡಳಿತ ಕರ್ನಾಟಕದಲ್ಲಿ ನಡೆಯುತ್ತಿದೆ. ಮತ ಹಾಕಿರುವ ಕಾರ್ಯಕರ್ತರು ಕೇಸ್ ಹಾಕಿಕೊಂಡು ಜೈಲ್ಗೆ ಹೋಗುತ್ತಿದ್ದಾರೆ. ಆದರೆ, ಮತ ಪಡೆದ ಶಾಸಕರು, ಅವರ ಮಕ್ಕಳು ವಿಧಾನಸಭೆ ಪ್ರವೇಶ ಮಾಡುತ್ತಿದ್ದಾರೆ’ ಎಂದರು.</p>.<p>ರಾಜ್ಯ ಸಂಘಟನಾ ಕಾರ್ಯದರ್ಶಿ ಮಹಾಲಿಂಗಪ್ಪ ಗುಂಜಿಗಾಂವಿ ಮಾತನಾಡಿದರು. ಸಿದ್ಧಾರೂಢ ಬ್ರಹ್ಮವಿದ್ಯಾಶ್ರಮದ ಸಹಜಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪಕ್ಷದ ಗಂಗಾಧರ ಕುಲಕರ್ಣಿ, ಎಸ್.ಭಾಸ್ಕರನ್, ಅಮರನಾಥ, ಎಂ.ಎಸ್.ಹರೀಶ, ನಾಗರಾಜ ಭಜಂತ್ರಿ, ಅನೀಲ ಕಿರಿಕಿರಿ, ಪ್ರಹ್ಲಾದ ನೂಲಿ, ರಾಜು ಪರಮಾನಟ್ಟಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>