ಬಿರುಬಿಸಿಲು ಲೆಕ್ಕಿಸದೇ ಜಿಲ್ಲೆಯ ವಿವಿಧ ಕಡೆಗಳಿಂದ ಬಂದಿದ್ದ ಕ್ರೀಡಾಪ್ರೇಮಿಗಳು ಕದಲದೇ ಪಂದ್ಯವನ್ನು ವೀಕ್ಷಿಸಿ, ಸಾಹಸಿಗರಿಗೆ ಚಪ್ಪಾಳೆ, ಕೇಕೆ ಹಾಕಿ ಬೆಂಬಲ ಸೂಚಿಸಿದರು. ಹೊಸಪೇಟೆಯ ಆನಂದ್ 125 ಕೆ.ಜಿ.ತೂಕದ ಗುಂಡನ್ನು 11.1 ಸೆಕೆಂಡುಗಳಲ್ಲಿ ಎತ್ತಿದರು, ಬಳಿಕ 135 ಕೆ.ಜಿ.ತೂಕದ ಗುಂಡನ್ನು 6.34 ಸೆಕೆಂಡ್ಗಳಲ್ಲಿ ಸಲೀಸಾಗಿ ಎತ್ತಿದ ಬಳಿಕ ಪ್ರಶಸ್ತಿ ಸುತ್ತಿನಲ್ಲಿ ಭಾರಿ ಕಸರತ್ತು ನಡೆಸಿದರಾದರೂ ಗುಂಡು ತೊಡೆಯಿಂದ ಮೇಲಕ್ಕೇರಲಿಲ್ಲ.