<p><strong>ತೆಕ್ಕಲಕೋಟೆ:</strong> ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಕಳೆದ ವಾರದಿಂದ ಮಳೆ ಬಿಡುವು ಕೊಟ್ಟಿದ್ದು, ಬೆಳೆದು ನಿಂತ ಹತ್ತಿ, ಹಸಿಮೆಣಸಿನಕಾಯಿ, ಮೆಕ್ಕೆಜೋಳದ ಕಟಾವು ಗರಿಗೆದರಿವೆ.</p>.<p>ಹತ್ತಿ, ಹಸಿಮೆಣಸಿನಕಾಯಿ ಬಿಡಿಸುವುದು ಸೇರಿದಂತೆ ಮೆಕ್ಕೆಜೋಳ ಜಿನ್ನಿಗೆ ಹಾಕಿ ಜೋಳ ಮಾಡಿಸುವ ಕಾರ್ಯ ಭರದಿಂದ ಸಾಗಿದೆ.<br><br> ಕೃಷಿ ಕಾರ್ಮಿಕರ ಬೇಡಿಕೆ ಹೆಚ್ಚಿದೆ. ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 1,010 ಹೆಕ್ಟೇರ್ ಹತ್ತಿ, 1,390 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆ ಹಾಗೂ 2,016 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ.</p>.<p>ಮಳೆಯಿಂದಾಗಿ ಹತ್ತಿಯು ಕಪ್ಪುಬಣ್ಣಕ್ಕೆ ತಿರುಗುತ್ತದೆ ಎಂದು ಆತಂಕದಲ್ಲಿಯೇ ರೈತರು ಹತ್ತಿಬಿಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ವಾರದ ಹಿಂದೆ ಕ್ವಿಂಟಲ್ಗೆ ₹7,300 ಇದ್ದ ಹತ್ತಿ, ಮಳೆಯ ಕಾರಣ ದಿಢೀರನೆ ₹6.5 ಸಾವಿರಕ್ಕೆ, ಮೆಕ್ಕೆಜೋಳ ₹2,800ದಿಂದ ₹1,800ಕ್ಕೆ ಕುಸಿದಿದೆ. ರೈತರನ್ನು ಚಿಂತೆಗೀಡುಮಾಡಿದೆ.</p>.<p>‘ಈ ಬಾರಿ ಉತ್ತಮ ಮಳೆ ಬಂದಿದೆ, ಅದರಂತೆ ಇಳುವರಿ ಚೆನ್ನಾಗಿ ಆಗಿದೆ. ಆದರೆ ಕಾಯಿ ಒಡೆಯುವ ಸಮಯದಲ್ಲಿ ಮಳೆ ಬಂದು ರೈತರ ನಿರೀಕ್ಷೆ ಉಲ್ಟಾ ಆಗಿದೆ’ ಎಂದು ಹಳೇಕೋಟೆ ಗ್ರಾಮದ ರೈತ ಪಂಪಣ್ಣ ಅಲವತ್ತುಕೊಂಡರು.</p>.<div><blockquote>ಮಳೆಯಿಂದ ಹತ್ತಿ ಬೆಳೆಗೆ ತೇವಾಂಶ ಹೆಚ್ಚಾಗಿದೆ. ಹೊಲಗಳಲ್ಲಿ ಬಸಿಗಾಲುವೆ ತೆಗೆದು ನೀರು ನಿಲ್ಲದಂತೆ ಮಾಡಬೇಕು. ಔಷಧ ಸಿಂಪಡಣೆ ಕುರಿತು ರೈತ ಸಂಪರ್ಕ ಕೇಂದ್ರದಲ್ಲಿ ಮಾಹಿತಿ ಪಡೆಯಬೇಕು </blockquote><span class="attribution">-ಮಂಜುನಾಥರೆಡ್ಡಿ, ಸಹಾಯಕ ನಿರ್ದೇಶಕ ಕೃಷಿ ಇಲಾಖೆ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೆಕ್ಕಲಕೋಟೆ:</strong> ಪಟ್ಟಣ ಸೇರಿದಂತೆ ಹೋಬಳಿಯಾದ್ಯಂತ ಕಳೆದ ವಾರದಿಂದ ಮಳೆ ಬಿಡುವು ಕೊಟ್ಟಿದ್ದು, ಬೆಳೆದು ನಿಂತ ಹತ್ತಿ, ಹಸಿಮೆಣಸಿನಕಾಯಿ, ಮೆಕ್ಕೆಜೋಳದ ಕಟಾವು ಗರಿಗೆದರಿವೆ.</p>.<p>ಹತ್ತಿ, ಹಸಿಮೆಣಸಿನಕಾಯಿ ಬಿಡಿಸುವುದು ಸೇರಿದಂತೆ ಮೆಕ್ಕೆಜೋಳ ಜಿನ್ನಿಗೆ ಹಾಕಿ ಜೋಳ ಮಾಡಿಸುವ ಕಾರ್ಯ ಭರದಿಂದ ಸಾಗಿದೆ.<br><br> ಕೃಷಿ ಕಾರ್ಮಿಕರ ಬೇಡಿಕೆ ಹೆಚ್ಚಿದೆ. ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 1,010 ಹೆಕ್ಟೇರ್ ಹತ್ತಿ, 1,390 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆ ಹಾಗೂ 2,016 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ.</p>.<p>ಮಳೆಯಿಂದಾಗಿ ಹತ್ತಿಯು ಕಪ್ಪುಬಣ್ಣಕ್ಕೆ ತಿರುಗುತ್ತದೆ ಎಂದು ಆತಂಕದಲ್ಲಿಯೇ ರೈತರು ಹತ್ತಿಬಿಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ವಾರದ ಹಿಂದೆ ಕ್ವಿಂಟಲ್ಗೆ ₹7,300 ಇದ್ದ ಹತ್ತಿ, ಮಳೆಯ ಕಾರಣ ದಿಢೀರನೆ ₹6.5 ಸಾವಿರಕ್ಕೆ, ಮೆಕ್ಕೆಜೋಳ ₹2,800ದಿಂದ ₹1,800ಕ್ಕೆ ಕುಸಿದಿದೆ. ರೈತರನ್ನು ಚಿಂತೆಗೀಡುಮಾಡಿದೆ.</p>.<p>‘ಈ ಬಾರಿ ಉತ್ತಮ ಮಳೆ ಬಂದಿದೆ, ಅದರಂತೆ ಇಳುವರಿ ಚೆನ್ನಾಗಿ ಆಗಿದೆ. ಆದರೆ ಕಾಯಿ ಒಡೆಯುವ ಸಮಯದಲ್ಲಿ ಮಳೆ ಬಂದು ರೈತರ ನಿರೀಕ್ಷೆ ಉಲ್ಟಾ ಆಗಿದೆ’ ಎಂದು ಹಳೇಕೋಟೆ ಗ್ರಾಮದ ರೈತ ಪಂಪಣ್ಣ ಅಲವತ್ತುಕೊಂಡರು.</p>.<div><blockquote>ಮಳೆಯಿಂದ ಹತ್ತಿ ಬೆಳೆಗೆ ತೇವಾಂಶ ಹೆಚ್ಚಾಗಿದೆ. ಹೊಲಗಳಲ್ಲಿ ಬಸಿಗಾಲುವೆ ತೆಗೆದು ನೀರು ನಿಲ್ಲದಂತೆ ಮಾಡಬೇಕು. ಔಷಧ ಸಿಂಪಡಣೆ ಕುರಿತು ರೈತ ಸಂಪರ್ಕ ಕೇಂದ್ರದಲ್ಲಿ ಮಾಹಿತಿ ಪಡೆಯಬೇಕು </blockquote><span class="attribution">-ಮಂಜುನಾಥರೆಡ್ಡಿ, ಸಹಾಯಕ ನಿರ್ದೇಶಕ ಕೃಷಿ ಇಲಾಖೆ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>