<p><strong>ಹಗರಿಬೊಮ್ಮನಹಳ್ಳಿ:</strong> ಪಟ್ಟಣದ ಬೈಪಾಸ್ ರಸ್ತೆ ಮೇಲೆ ಎರಡು ಅಡಿಗಳಷ್ಟು ನೀರು ಹರಿದ ಪರಿಣಾಮ ಭಾನುವಾರ ವಾಹನಗಳ ಸಂಚಾರಕ್ಕೆ ತೊಂದರೆಯಾಗಿತ್ತು.</p>.<p>ಜಲಾಶಯದ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ<br> ಜಲಾಶಯದಿಂದ ಹಗರಿ ಹಳ್ಳದ ಮೂಲಕ ತುಂಗಭದ್ರೆಗೆ ನೀರು ಹರಿಸಲಾಯಿತು.</p>.<p>ಪಟ್ಟಣದ ಬೈಪಾಸ್ ರಸ್ತೆ ಸೇತುವೆ ಕೆಳಗೆ ನೀರು ಹರಿಯಲು ಪೈಪ್ಗಳಲ್ಲಿ ಹುಲ್ಲು ಸೇರಿದ್ದರಿಂದ ಸರಾಗವಾಗಿ ನೀರು ಹರಿಯಲು ಸಾಧ್ಯವಾಗದೆ ಸೇತುವೆ ಮೇಲೆ ಹರಿಯಿತು.</p>.<p>ತಾಲ್ಲೂಕಿನ ತಂಬ್ರಹಳ್ಳಿ, ಹಂಪಸಾಗರ, ನಂದಿಪುರ, ಗದ್ದಿಕೇರಿ, ಬನ್ನಿಗೋಳ, ಬ್ಯಾಸಿಗಿದೇರಿ, ಸೊಬಟಿ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಈ ಬೈಪಾಸ್ ರಸ್ತೆ ಅನುಕೂಲವಾಗಿತ್ತು, ಖಾಸಗಿ ಕಾಲೇಜ್ಗೆ ಈ ರಸ್ತೆಯಲ್ಲಿ ನೂರಾರು ವಿದ್ಯಾರ್ಥಿಗಳು ಸಂಚರಿಸುತ್ತಾರೆ.</p>.<p>ಜಲಾಶಯದಿಂದ ಅಂದಾಜು 150 ಕ್ಯುಸೆಕ್ ನೀರು ತುಂಗಭದ್ರಾ ಜಲಾಶಯಕ್ಕೆ ಹೊರ ಬಿಡಲಾಗಿದೆ.<br> ಪುರಸಭೆ ಅಧಿಕಾರಿಗಳು ಬೆಳಗಿನ ಜಾವದಿಂದಲೇ ಸೇತುವೆ ಪೈಪ್ಗಳ ಬಳಿ ಸಿಕ್ಕಿಹಾಕಿಕೊಂಡಿದ್ದ ಹುಲ್ಲು, ಗಿಡಗಂಟಿಗಳನ್ನು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಿದರು. ನೀರು ಹರಿದ ರಭಸಕ್ಕೆ ವಿದ್ಯುತ್ ಕಂಬವೊಂದು ನೆಲಕ್ಕೆ ಉರುಳಿದ ಆ ಲೈನ್ ವಿದ್ಯುತ್ ಸಂಪರ್ಕವನ್ನು ಜೆಸ್ಕಾಂ ಎಂಜಿನಿಯರ್ ಕಡಿತಗೊಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಗರಿಬೊಮ್ಮನಹಳ್ಳಿ:</strong> ಪಟ್ಟಣದ ಬೈಪಾಸ್ ರಸ್ತೆ ಮೇಲೆ ಎರಡು ಅಡಿಗಳಷ್ಟು ನೀರು ಹರಿದ ಪರಿಣಾಮ ಭಾನುವಾರ ವಾಹನಗಳ ಸಂಚಾರಕ್ಕೆ ತೊಂದರೆಯಾಗಿತ್ತು.</p>.<p>ಜಲಾಶಯದ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ<br> ಜಲಾಶಯದಿಂದ ಹಗರಿ ಹಳ್ಳದ ಮೂಲಕ ತುಂಗಭದ್ರೆಗೆ ನೀರು ಹರಿಸಲಾಯಿತು.</p>.<p>ಪಟ್ಟಣದ ಬೈಪಾಸ್ ರಸ್ತೆ ಸೇತುವೆ ಕೆಳಗೆ ನೀರು ಹರಿಯಲು ಪೈಪ್ಗಳಲ್ಲಿ ಹುಲ್ಲು ಸೇರಿದ್ದರಿಂದ ಸರಾಗವಾಗಿ ನೀರು ಹರಿಯಲು ಸಾಧ್ಯವಾಗದೆ ಸೇತುವೆ ಮೇಲೆ ಹರಿಯಿತು.</p>.<p>ತಾಲ್ಲೂಕಿನ ತಂಬ್ರಹಳ್ಳಿ, ಹಂಪಸಾಗರ, ನಂದಿಪುರ, ಗದ್ದಿಕೇರಿ, ಬನ್ನಿಗೋಳ, ಬ್ಯಾಸಿಗಿದೇರಿ, ಸೊಬಟಿ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಈ ಬೈಪಾಸ್ ರಸ್ತೆ ಅನುಕೂಲವಾಗಿತ್ತು, ಖಾಸಗಿ ಕಾಲೇಜ್ಗೆ ಈ ರಸ್ತೆಯಲ್ಲಿ ನೂರಾರು ವಿದ್ಯಾರ್ಥಿಗಳು ಸಂಚರಿಸುತ್ತಾರೆ.</p>.<p>ಜಲಾಶಯದಿಂದ ಅಂದಾಜು 150 ಕ್ಯುಸೆಕ್ ನೀರು ತುಂಗಭದ್ರಾ ಜಲಾಶಯಕ್ಕೆ ಹೊರ ಬಿಡಲಾಗಿದೆ.<br> ಪುರಸಭೆ ಅಧಿಕಾರಿಗಳು ಬೆಳಗಿನ ಜಾವದಿಂದಲೇ ಸೇತುವೆ ಪೈಪ್ಗಳ ಬಳಿ ಸಿಕ್ಕಿಹಾಕಿಕೊಂಡಿದ್ದ ಹುಲ್ಲು, ಗಿಡಗಂಟಿಗಳನ್ನು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಿದರು. ನೀರು ಹರಿದ ರಭಸಕ್ಕೆ ವಿದ್ಯುತ್ ಕಂಬವೊಂದು ನೆಲಕ್ಕೆ ಉರುಳಿದ ಆ ಲೈನ್ ವಿದ್ಯುತ್ ಸಂಪರ್ಕವನ್ನು ಜೆಸ್ಕಾಂ ಎಂಜಿನಿಯರ್ ಕಡಿತಗೊಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>