<p><strong>ಹರಪನಹಳ್ಳಿ:</strong> ಉತ್ತಮ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಉತ್ತಮ ಇಳುವರಿ ನಿರೀಕ್ಷೆಯಲ್ಲಿರುವ ರೈತರು ಯೂರಿಯಾ ಗೊಬ್ಬರಕ್ಕಾಗಿ ಬುಧವಾರ ಪರದಾಡಿದರು.</p>.<p>ಪಟ್ಟಣದ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಮತ್ತು ವಿವಿದೋದ್ಧೇಶ ಗ್ರಾಮೀಣ ಕೃಷಿ ಸಹಕಾರ ಸಂಘ (ಬಿ90)ದ ಮುಂದೆ ಬೆಳಿಗ್ಗೆ 8 ಗಂಟೆಗೆ ಜಮಾಯಿಸಿದ್ದ ರೈತರು ಗೊಬ್ಬರ ಖರೀದಿಗೆ ಮುಗಿಬಿದ್ದಿದ್ದರು.</p>.<p>ಪಟ್ಟಣದ ಎರಡು ಸೊಸೈಟಿಗಳಲ್ಲಿ 15 ಟನ್ ಮಾತ್ರ ಗೊಬ್ಬರ ಬಂದಿತ್ತು. ಅದನ್ನು 500 ರೈತರಿಗೆ ವಿತರಿಸಲು ಸೊಸೈಟಿ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಕೊನೆಗೆ ಪೊಲೀಸ್ ಸಿಬ್ಬಂದಿ ಆಗಮಿಸಿ ಸರದಿಯಲ್ಲಿ ನಿಲ್ಲಿಸಿದ ನಂತರ ಟೋಕನ್ ಕೊಟ್ಟು ಒಬ್ಬೊಬ್ಬರಿಗೆ ಗೊಬ್ಬರದ ಚೀಲ ವಿತರಿಸಿದರು.</p>.<p>ಚೀಲವೊಂದಕ್ಕೆ 266 ಮತ್ತು ಸಾರಿಗೆ ವೆಚ್ಚ ₹34 ಪಾವತಿಸಿ ಪ್ರತಿ ರೈತರು ಎರಡು ಚೀಲ ಪಡೆದುಕೊಂಡರು. ಸರದಿಯಲ್ಲಿ ಕಾದಿದ್ದರೂ ಗೊಬ್ಬರ ಸಿಗದೇ ಕೆಲ ರೈತರು ನಿರಾಸೆಯಿಂದ ಅಧಿಕಾರಿಗಳನ್ನು ಶಪಿಸುತ್ತಾ ಮರಳಿದರು.</p>.<p>ತಾಲ್ಲೂಕಿನ ಅರಸೀಕೆರೆ, ಉಚ್ಚಂಗಿದುರ್ಗ, ಪುಣಬಘಟ್ಟ, ತೌಡೂರು ಹಾಗೂ ಹೊಸಕೋಟೆ ಗ್ರಾಮಗಳಲ್ಲೂ ಯೂರಿಯಾ ಸಿಗದೇ ರೈತರು ಪರದಾಡಿದ್ದಾರೆ. ಅಖಿಲ ಭಾರತ ಕಿಸಾನ್ ಸಭಾದ ಜಿಲ್ಲಾಧ್ಯಕ್ಷ ಕೆರೆಗುಡಿಹಳ್ಳಿ ಹಾಲೇಶ, ರೈತ ಮುಖಂಡರಾದ ರಾಮಪ್ಪ, ಹನುಮಂತಪ್ಪ, ನರಸಿಂಹಪ್ಪ,ಮಂಜುನಾಥ್, ಪ್ರವೀಣ್,ಮಹಾಂತೇಶ್, ನಾಗರಾಜ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹರಪನಹಳ್ಳಿ:</strong> ಉತ್ತಮ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಉತ್ತಮ ಇಳುವರಿ ನಿರೀಕ್ಷೆಯಲ್ಲಿರುವ ರೈತರು ಯೂರಿಯಾ ಗೊಬ್ಬರಕ್ಕಾಗಿ ಬುಧವಾರ ಪರದಾಡಿದರು.</p>.<p>ಪಟ್ಟಣದ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ಮತ್ತು ವಿವಿದೋದ್ಧೇಶ ಗ್ರಾಮೀಣ ಕೃಷಿ ಸಹಕಾರ ಸಂಘ (ಬಿ90)ದ ಮುಂದೆ ಬೆಳಿಗ್ಗೆ 8 ಗಂಟೆಗೆ ಜಮಾಯಿಸಿದ್ದ ರೈತರು ಗೊಬ್ಬರ ಖರೀದಿಗೆ ಮುಗಿಬಿದ್ದಿದ್ದರು.</p>.<p>ಪಟ್ಟಣದ ಎರಡು ಸೊಸೈಟಿಗಳಲ್ಲಿ 15 ಟನ್ ಮಾತ್ರ ಗೊಬ್ಬರ ಬಂದಿತ್ತು. ಅದನ್ನು 500 ರೈತರಿಗೆ ವಿತರಿಸಲು ಸೊಸೈಟಿ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಕೊನೆಗೆ ಪೊಲೀಸ್ ಸಿಬ್ಬಂದಿ ಆಗಮಿಸಿ ಸರದಿಯಲ್ಲಿ ನಿಲ್ಲಿಸಿದ ನಂತರ ಟೋಕನ್ ಕೊಟ್ಟು ಒಬ್ಬೊಬ್ಬರಿಗೆ ಗೊಬ್ಬರದ ಚೀಲ ವಿತರಿಸಿದರು.</p>.<p>ಚೀಲವೊಂದಕ್ಕೆ 266 ಮತ್ತು ಸಾರಿಗೆ ವೆಚ್ಚ ₹34 ಪಾವತಿಸಿ ಪ್ರತಿ ರೈತರು ಎರಡು ಚೀಲ ಪಡೆದುಕೊಂಡರು. ಸರದಿಯಲ್ಲಿ ಕಾದಿದ್ದರೂ ಗೊಬ್ಬರ ಸಿಗದೇ ಕೆಲ ರೈತರು ನಿರಾಸೆಯಿಂದ ಅಧಿಕಾರಿಗಳನ್ನು ಶಪಿಸುತ್ತಾ ಮರಳಿದರು.</p>.<p>ತಾಲ್ಲೂಕಿನ ಅರಸೀಕೆರೆ, ಉಚ್ಚಂಗಿದುರ್ಗ, ಪುಣಬಘಟ್ಟ, ತೌಡೂರು ಹಾಗೂ ಹೊಸಕೋಟೆ ಗ್ರಾಮಗಳಲ್ಲೂ ಯೂರಿಯಾ ಸಿಗದೇ ರೈತರು ಪರದಾಡಿದ್ದಾರೆ. ಅಖಿಲ ಭಾರತ ಕಿಸಾನ್ ಸಭಾದ ಜಿಲ್ಲಾಧ್ಯಕ್ಷ ಕೆರೆಗುಡಿಹಳ್ಳಿ ಹಾಲೇಶ, ರೈತ ಮುಖಂಡರಾದ ರಾಮಪ್ಪ, ಹನುಮಂತಪ್ಪ, ನರಸಿಂಹಪ್ಪ,ಮಂಜುನಾಥ್, ಪ್ರವೀಣ್,ಮಹಾಂತೇಶ್, ನಾಗರಾಜ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>