ದಾಳಿ ಕುರಿತು ತಮ್ಮ ಕಚೇರಿಯಲ್ಲಿ ಮಾಹಿತಿ ನೀಡಿದ ಅವರು, ‘ಕೇಂದ್ರಿಯ ಕೃಷಿ ಜಾಗೃತ ದಳದ ಹೆಚ್ಚುವರಿ ಕೃಷಿ ನಿರ್ದೇಶಕ ಅನೂಪ್, ಕೃಷಿ ಜಂಟಿ ನಿರ್ದೇಶಕ ಶಿವಕುಮಾರ್, ಉಪಕೃಷಿ ನಿರ್ದೇಶಕಿ ಜಾವಿದಾ ಅವರ ತಂಡ ದಾಳಿ ನಡೆಸಿತ್ತು. ನೋಂದಣಿ ಇಲ್ಲದ ವಿವಿಧ ಖಾಸಗಿ ಕಂಪನಿಗಳಿಂದ ಜೈವಿಕ ಗೊಬ್ಬರ, ಕೀಟನಾಶಕ ಮತ್ತು ಬಿತ್ತನೆ ಬೀಜ ಮಾರಾಟಕ್ಕೆ ಕಡಿವಾಣ ಹಾಕಲು ಜಾಗೃತಿ ದಳದ ತಂಡ ಅನಿರೀಕ್ಷಿತವಾಗಿ ಗ್ರಾಹಕರ ಸೊಗಿನಲ್ಲಿ ದಾಳಿ ನಡೆಸಿತ್ತು. ಕೃಷಿ ಪರಿಕರ ಜೈವಿಕ ಗೊಬ್ಬರ, ಬೀಜ ಮತ್ತು ಕೀಟನಾಶಕ ಮಾರಾಟ ಮಾಡಲು ಅಧಿಕೃತ ಪರವಾನಗಿ ಪಡೆದಿರಬೇಕು. ಇಲಾಖೆ ನಿಯಮದಂತೆ ನವೀಕರಣ ಮಾಡಿಸಬೇಕು. ನೊಂದಣಿ ಮಾಡಿಸದೆ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ’ ಎಂದು ಹೇಳಿದರು .