<p><strong>ಆನೇಕಲ್: </strong>ಆರಂಭದಲ್ಲಿ ಮಳೆ ಕೊರತೆ–ಕಟಾವಿಗೆ ಬಂದಾಗ ಮಳೆ ಭೀತಿಯ ನಡುವೆಯೂ ರಾಗಿ ಉತ್ತಮ ಫಸಲು ನೀಡಿದ್ದು, ರಾಗಿಯ ಕಣಜ ಬ ಖ್ಯಾತಿಯ ಆನೇಕಲ್ನಲ್ಲಿ ಈ ಬಾರಿ ಭರ್ಜರಿ ಫಸಲು ಬಂದಿದೆ. ರಾಗಿ ಕಟಾವು ಮಾಡಿ ತಾಲ್ಲೂಕಿನ ರೈತರು ಸಂತಸದಿಂದ ರಾಗಿ ರಾಶಿಗೆ ಪೂಜೆ ಸಲ್ಲಿಸುತ್ತಿದ್ದಾರೆ.</p>.<p>ಆನೇಕಲ್ ತಾಲ್ಲೂಕಿನಾದ್ಯಂತ 2,375 ಹೆಕ್ಟೇರ್ನಲ್ಲಿ ರಾಗಿಯ ಬೆಳೆ ಬೆಳೆಯಲಾಗಿದ್ದು, ಭರ್ಜರಿ ಬೆಳೆ ರೈತರಲ್ಲಿ ಸಂತಸ ಮೂಡಿಸಿದೆ.</p>.<p>ರಾಗಿಯ ಕಣದಲ್ಲಿ ರಾಗಿಯ ರಾಶಿಗೆ ಕುಟುಂಬದವರೆಲ್ಲರೂ ಒಗ್ಗೂಡಿ ಪೂಜೆ ಸಲ್ಲಿಸಿ ವರ್ಷದ ಬೆಳೆಯನ್ನು ಮನೆ ತುಂಬಿಕೊಳ್ಳುವ ಸಂತಸ ಎಲ್ಲರಲ್ಲಿ ಮನೆ ಮಾಡಿತ್ತು. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬಂತೆ ವರ್ಷವಿಡೀ ಬೆಳೆದ ಬೆಳೆ ವಿವಿಧ ಕಾರಣಗಳಿಂದ ಕೈತಪ್ಪಿ ಹೋಗುತ್ತಿತ್ತು. ಆದರೆ ಈ ವರ್ಷ ಆನೆಗಳ ಹಾವಳಿಯಿಲ್ಲ, ಮಳೆಯ ತೊಡಕಿಲ್ಲದೇ ಗ್ರಾಮಗಳ ಮನೆ ಮನೆಗಳ ಮುಂದೆ ರಾಗಿಯನ್ನು ಒಣಗಿಸುತ್ತಿರುವುದು, ಇಲ್ಲವೇ ಕಣದಲ್ಲಿ ರಾಶಿ ಮಾಡುತ್ತಿರುವುದು ಎಲ್ಲೆಡೆ ಕಂಡು ಬಂದಿದೆ.</p>.<p>ಸುಮಾರು 20 ಎಕರೆ ಪ್ರದೇಶದಲ್ಲಿ ರಾಗಿ ಬೆಳೆಯನ್ನು ಬೆಳೆದಿದ್ದು 200 ಕ್ವಿಂಟಾಲ್ಗೂ ಹೆಚ್ಚು ರಾಗಿ ಫಸಲು ಬಂದಿದೆ. ಕೊಯ್ಲಿಗೆ ಬಂದ ಬೆಳೆ ಕೊಯ್ಯಲು ಕೂಲಿಯ ಕೆಲಸದವರು ಸಿಗುವುದು ಕಷ್ಟವಾಗಿದೆ. ಹಾಗಾಗಿ ಯಂತ್ರದ ಮೂಲಕ ಕೊಯ್ಲು ಮಾಡಲಾಗಿದೆ. ಒಂದು ಗಂಟೆಗೆ 3.5 ಸಾವಿರದಿಂದ ₹4 ಸಾವಿರ ಯಂತ್ರಕ್ಕೆ ಬಾಡಿಗೆ ನೀಡಬೇಕು. ಒಂದು ಎಕರೆ ಕೊಯ್ಯಲು ಎರಡು ಗಂಟೆ ಸಮಯ ತಗುಲುತ್ತದೆ ಎಂದು ಆನೇಕಲ್ ತಾಲ್ಲೂಕಿನ ಇಂಡ್ಲವಾಡಿಯ ರೈತರಾದದ ರೇಣುಕಪ್ರಸಾದ್, ದೇವರಾಜ್, ರುದ್ರೇಶ್, ಅವಿನಾಶ್ ತಿಳಿಸಿದರು.</p>.<h2> ಸವಾಲು ಗೆದ್ದ ಅನ್ನದಾತ</h2><p> ರಾಗಿಯ ಬೆಳೆಯನ್ನು ಮಳೆಯಿಂದ ಕಾಪಾಡಿಕೊಳ್ಳುವುದೇ ದೊಡ್ಡ ಸವಾಲಾಗಿತ್ತು. ಕಳೆದ ಕೆಲ ದಿನಗಳಿಂದ ಮಳೆ ಹೆಚ್ಚಿತ್ತು. ಈ ನಡುವೆ ಭಾರಿ ಗಾಳಿಯಿಂದ ರಾಗಿಯ ಬೆಳೆಯು ನೆಲಕಚ್ಚಿತ್ತು. ರೈತರು ರಾಗಿಯನ್ನು ಬಿಸಿಲಿಗೆ ಹಾಕಿ ಕಾಟವು ಮಾಡಿ ರಾಗಿಯನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಇಂತಹ ಫಸಲೇ ಬಂದಿರಲಿಲ್ಲ. ಈ ಬಾರಿ ಉತ್ತಮ ರಾಗಿ ಫಸಲು ಬಂದಿದೆ ಎಂದು ರೈತ ಚಂದ್ರಶೇಖರ್ ತಿಳಿಸಿದರು. ರಾಗಿಯ ಕಾಲ ಬಂತೆಂದರೆ ಕಾಡಾನೆಗಳ ಕಾಟವೇ ಹೆಚ್ಚಿರುತ್ತದೆ. ಈ ನಡುವೆ ಈ ಬಾರಿ ಕಾಡಾನೆಗಳು ಕರ್ನಾಟಕದತ್ತ ಸುಳಿಯದೇ ತಮಿಳುನಾಡಿನ ಗಡಿಯಲ್ಲಿಯೇ ಓಡಾಡಿದ್ದರಿಂದ ಈ ಭಾಗದ ರೈತರು ರಾಗಿಯ ಬೆಳೆಗೆ ರಕ್ಷಣೆ ಸಿಕ್ಕಂತಾಯಿತು. ಆನೇಕಲ್ ಅರಣ್ಯ ಪ್ರದೇಶದ ಗಡಿಗಳಲ್ಲಿ ಕಾಡಾನೆಗಳು ನಿರಂತರವಾಗಿ ಓಡಾಡುತ್ತಿವೆ. ಈ ನಡುವೆ ರಾಗಿಯನ್ನು ಕಟಾವು ಮಾಡಿಕೊಂಡು ರಾಗಿಯನ್ನು ಬೆಳೆಯನ್ನು ರೈತರು ಮನೆಗೆ ಸಾಗಿಸಿದ್ದಾರೆ. ಇದರಿಂದಾಗಿ ರೈತರಲ್ಲಿ ಉತ್ಸಾಹ ಮನೆ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆನೇಕಲ್: </strong>ಆರಂಭದಲ್ಲಿ ಮಳೆ ಕೊರತೆ–ಕಟಾವಿಗೆ ಬಂದಾಗ ಮಳೆ ಭೀತಿಯ ನಡುವೆಯೂ ರಾಗಿ ಉತ್ತಮ ಫಸಲು ನೀಡಿದ್ದು, ರಾಗಿಯ ಕಣಜ ಬ ಖ್ಯಾತಿಯ ಆನೇಕಲ್ನಲ್ಲಿ ಈ ಬಾರಿ ಭರ್ಜರಿ ಫಸಲು ಬಂದಿದೆ. ರಾಗಿ ಕಟಾವು ಮಾಡಿ ತಾಲ್ಲೂಕಿನ ರೈತರು ಸಂತಸದಿಂದ ರಾಗಿ ರಾಶಿಗೆ ಪೂಜೆ ಸಲ್ಲಿಸುತ್ತಿದ್ದಾರೆ.</p>.<p>ಆನೇಕಲ್ ತಾಲ್ಲೂಕಿನಾದ್ಯಂತ 2,375 ಹೆಕ್ಟೇರ್ನಲ್ಲಿ ರಾಗಿಯ ಬೆಳೆ ಬೆಳೆಯಲಾಗಿದ್ದು, ಭರ್ಜರಿ ಬೆಳೆ ರೈತರಲ್ಲಿ ಸಂತಸ ಮೂಡಿಸಿದೆ.</p>.<p>ರಾಗಿಯ ಕಣದಲ್ಲಿ ರಾಗಿಯ ರಾಶಿಗೆ ಕುಟುಂಬದವರೆಲ್ಲರೂ ಒಗ್ಗೂಡಿ ಪೂಜೆ ಸಲ್ಲಿಸಿ ವರ್ಷದ ಬೆಳೆಯನ್ನು ಮನೆ ತುಂಬಿಕೊಳ್ಳುವ ಸಂತಸ ಎಲ್ಲರಲ್ಲಿ ಮನೆ ಮಾಡಿತ್ತು. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬಂತೆ ವರ್ಷವಿಡೀ ಬೆಳೆದ ಬೆಳೆ ವಿವಿಧ ಕಾರಣಗಳಿಂದ ಕೈತಪ್ಪಿ ಹೋಗುತ್ತಿತ್ತು. ಆದರೆ ಈ ವರ್ಷ ಆನೆಗಳ ಹಾವಳಿಯಿಲ್ಲ, ಮಳೆಯ ತೊಡಕಿಲ್ಲದೇ ಗ್ರಾಮಗಳ ಮನೆ ಮನೆಗಳ ಮುಂದೆ ರಾಗಿಯನ್ನು ಒಣಗಿಸುತ್ತಿರುವುದು, ಇಲ್ಲವೇ ಕಣದಲ್ಲಿ ರಾಶಿ ಮಾಡುತ್ತಿರುವುದು ಎಲ್ಲೆಡೆ ಕಂಡು ಬಂದಿದೆ.</p>.<p>ಸುಮಾರು 20 ಎಕರೆ ಪ್ರದೇಶದಲ್ಲಿ ರಾಗಿ ಬೆಳೆಯನ್ನು ಬೆಳೆದಿದ್ದು 200 ಕ್ವಿಂಟಾಲ್ಗೂ ಹೆಚ್ಚು ರಾಗಿ ಫಸಲು ಬಂದಿದೆ. ಕೊಯ್ಲಿಗೆ ಬಂದ ಬೆಳೆ ಕೊಯ್ಯಲು ಕೂಲಿಯ ಕೆಲಸದವರು ಸಿಗುವುದು ಕಷ್ಟವಾಗಿದೆ. ಹಾಗಾಗಿ ಯಂತ್ರದ ಮೂಲಕ ಕೊಯ್ಲು ಮಾಡಲಾಗಿದೆ. ಒಂದು ಗಂಟೆಗೆ 3.5 ಸಾವಿರದಿಂದ ₹4 ಸಾವಿರ ಯಂತ್ರಕ್ಕೆ ಬಾಡಿಗೆ ನೀಡಬೇಕು. ಒಂದು ಎಕರೆ ಕೊಯ್ಯಲು ಎರಡು ಗಂಟೆ ಸಮಯ ತಗುಲುತ್ತದೆ ಎಂದು ಆನೇಕಲ್ ತಾಲ್ಲೂಕಿನ ಇಂಡ್ಲವಾಡಿಯ ರೈತರಾದದ ರೇಣುಕಪ್ರಸಾದ್, ದೇವರಾಜ್, ರುದ್ರೇಶ್, ಅವಿನಾಶ್ ತಿಳಿಸಿದರು.</p>.<h2> ಸವಾಲು ಗೆದ್ದ ಅನ್ನದಾತ</h2><p> ರಾಗಿಯ ಬೆಳೆಯನ್ನು ಮಳೆಯಿಂದ ಕಾಪಾಡಿಕೊಳ್ಳುವುದೇ ದೊಡ್ಡ ಸವಾಲಾಗಿತ್ತು. ಕಳೆದ ಕೆಲ ದಿನಗಳಿಂದ ಮಳೆ ಹೆಚ್ಚಿತ್ತು. ಈ ನಡುವೆ ಭಾರಿ ಗಾಳಿಯಿಂದ ರಾಗಿಯ ಬೆಳೆಯು ನೆಲಕಚ್ಚಿತ್ತು. ರೈತರು ರಾಗಿಯನ್ನು ಬಿಸಿಲಿಗೆ ಹಾಕಿ ಕಾಟವು ಮಾಡಿ ರಾಗಿಯನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಇಂತಹ ಫಸಲೇ ಬಂದಿರಲಿಲ್ಲ. ಈ ಬಾರಿ ಉತ್ತಮ ರಾಗಿ ಫಸಲು ಬಂದಿದೆ ಎಂದು ರೈತ ಚಂದ್ರಶೇಖರ್ ತಿಳಿಸಿದರು. ರಾಗಿಯ ಕಾಲ ಬಂತೆಂದರೆ ಕಾಡಾನೆಗಳ ಕಾಟವೇ ಹೆಚ್ಚಿರುತ್ತದೆ. ಈ ನಡುವೆ ಈ ಬಾರಿ ಕಾಡಾನೆಗಳು ಕರ್ನಾಟಕದತ್ತ ಸುಳಿಯದೇ ತಮಿಳುನಾಡಿನ ಗಡಿಯಲ್ಲಿಯೇ ಓಡಾಡಿದ್ದರಿಂದ ಈ ಭಾಗದ ರೈತರು ರಾಗಿಯ ಬೆಳೆಗೆ ರಕ್ಷಣೆ ಸಿಕ್ಕಂತಾಯಿತು. ಆನೇಕಲ್ ಅರಣ್ಯ ಪ್ರದೇಶದ ಗಡಿಗಳಲ್ಲಿ ಕಾಡಾನೆಗಳು ನಿರಂತರವಾಗಿ ಓಡಾಡುತ್ತಿವೆ. ಈ ನಡುವೆ ರಾಗಿಯನ್ನು ಕಟಾವು ಮಾಡಿಕೊಂಡು ರಾಗಿಯನ್ನು ಬೆಳೆಯನ್ನು ರೈತರು ಮನೆಗೆ ಸಾಗಿಸಿದ್ದಾರೆ. ಇದರಿಂದಾಗಿ ರೈತರಲ್ಲಿ ಉತ್ಸಾಹ ಮನೆ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>