ಶ್ರೀರಾಮ ಸೇನೆಯ ಕಾರ್ಯಕರ್ತರ ವಿರುದ್ಧ ದರೋಡೆ, ಕೋಮುಗಲಭೆಗೆ ಪ್ರಚೋದನೆ ನೀಡಿದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹಾಗೆಯೇ ಅಕ್ರಮವಾಗಿ ಗೋಮಾಂಸ ಸಾಗಿಸುತ್ತಿದ್ದ ಐದು ವಾಹನಗಳ ಮಾಲೀಕರು,ಚಾಲಕರ ವಿರುದ್ಧ ಕರ್ನಾಟಕ ಗೋ ಹತ್ಯೆ ಪ್ರತಿಬಂಧಕ ಮತ್ತು ಸಾಗಾಟ ಅಧಿನಿಯಮ-2020 ಹಾಗೂ ಐಪಿಸಿ ಕಲಂ 504,506 ಅಡಿ ಪ್ರಕರಣ ದಾಖಲಾಗಿದೆ.