<p><strong>ಹೊಸಕೋಟೆ:</strong> ನಗರದಲ್ಲಿ ಮೇ12 ರಂದು ನಡೆಯಲಿರುವ ಅವಿಮುಕ್ತೇಶ್ವರ ರಥೋತ್ಸವ, ಧರ್ಮರಾಯ ಮತ್ತು ದ್ರೌಪದಾಂಬ ಕರಗ ಮಹೋತ್ಸವದ ಅಂಗವಾಗಿ ವಿವಿಧ ಇಲಾಖೆಗಳ ಅಧಿಕಾರಿಗಳ ಮತ್ತು ಮುಖಂಡರ ಸಭೆಯನ್ನು ನಗರದ ತಾಲ್ಲೂಕು ಕಚೇರಿಯಲ್ಲಿ ಬುಧವಾರ ಕರೆಯಕಲಾಗಿತ್ತು.</p>.<p>ರಥೋತ್ಸವ ಮತ್ತು ಕರಗ ಮಹೋತ್ಸವ ಸುಸೂತ್ರವಾಗಿ ನಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕ ಶರತ್ ಬಚ್ಚೇಗೌಡ, ಅಧಿಕಾರಿಗಳಿಗೆ ಸೂಚಿಸಿದರು. ರಥೋತ್ಸವ ಸಮಿತಿ ಸಂಚಾಲಕರನ್ನಾಗಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೇಶವಮೂರ್ತಿ ಅವರನ್ನು ನೇಮಕ ಮಾಡಲಾಯಿತು.</p>.<p>ರಥ ನಿರ್ಮಾಣಕ್ಕೆ ಹುಣಸೂರಿನಿಂದ ತರಿಸಲಾದ ಮರದ ದಿಮ್ಮೆಗಳಿಗೆ ಪೂಜೆ ಸಲ್ಲಿಸಲಾಯಿತು. ಹೊಸ ರಥ ನಿರ್ಮಾಣಕ್ಕೆ ಹುಣಸೂರಿನಿಂದ ಮರದ ತುಂಡುಗಳನ್ನು ತರಲಾಗಿದ್ದು ಆರು ತಿಂಗಳಲ್ಲಿ ರಥ ನಿರ್ಮಾಣ ಕಾರ್ಯ ಮುಗಿಯಲಿದೆ. ಮುಂದಿನ ವರ್ಷ ರಥೋತ್ಸವಕ್ಕೆ ಈ ಹೊಸ ರಥ ಬಳಸಲಾಗುವುದು. ಈ ಬಾರಿ ಹಳೆಯ ರಥವನ್ನೇ ಬಳಸಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.<br /><br />ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ, ತಹಸೀಲ್ದಾರ್ ಸೋಮಶೇಖರ್, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾ ಅಧಿಕಾರಿ ಡಾ.ಸಿ.ಎನ್.ನಾರಾಯಣಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ್, ಕೇಶವ್ ಮೂರ್ತಿ, ಎಚ್.ಎಂ.ಸುಬ್ಬರಾಜು, ಬಿ.ವಿ.ಬೈರೇಗೌಡ, ವಾಸುದೇವಯ್ಯ, ರಾಮಚಂದ್ರಪ್ಪ, ಜಯರಾಜ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಕೋಟೆ:</strong> ನಗರದಲ್ಲಿ ಮೇ12 ರಂದು ನಡೆಯಲಿರುವ ಅವಿಮುಕ್ತೇಶ್ವರ ರಥೋತ್ಸವ, ಧರ್ಮರಾಯ ಮತ್ತು ದ್ರೌಪದಾಂಬ ಕರಗ ಮಹೋತ್ಸವದ ಅಂಗವಾಗಿ ವಿವಿಧ ಇಲಾಖೆಗಳ ಅಧಿಕಾರಿಗಳ ಮತ್ತು ಮುಖಂಡರ ಸಭೆಯನ್ನು ನಗರದ ತಾಲ್ಲೂಕು ಕಚೇರಿಯಲ್ಲಿ ಬುಧವಾರ ಕರೆಯಕಲಾಗಿತ್ತು.</p>.<p>ರಥೋತ್ಸವ ಮತ್ತು ಕರಗ ಮಹೋತ್ಸವ ಸುಸೂತ್ರವಾಗಿ ನಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕ ಶರತ್ ಬಚ್ಚೇಗೌಡ, ಅಧಿಕಾರಿಗಳಿಗೆ ಸೂಚಿಸಿದರು. ರಥೋತ್ಸವ ಸಮಿತಿ ಸಂಚಾಲಕರನ್ನಾಗಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೇಶವಮೂರ್ತಿ ಅವರನ್ನು ನೇಮಕ ಮಾಡಲಾಯಿತು.</p>.<p>ರಥ ನಿರ್ಮಾಣಕ್ಕೆ ಹುಣಸೂರಿನಿಂದ ತರಿಸಲಾದ ಮರದ ದಿಮ್ಮೆಗಳಿಗೆ ಪೂಜೆ ಸಲ್ಲಿಸಲಾಯಿತು. ಹೊಸ ರಥ ನಿರ್ಮಾಣಕ್ಕೆ ಹುಣಸೂರಿನಿಂದ ಮರದ ತುಂಡುಗಳನ್ನು ತರಲಾಗಿದ್ದು ಆರು ತಿಂಗಳಲ್ಲಿ ರಥ ನಿರ್ಮಾಣ ಕಾರ್ಯ ಮುಗಿಯಲಿದೆ. ಮುಂದಿನ ವರ್ಷ ರಥೋತ್ಸವಕ್ಕೆ ಈ ಹೊಸ ರಥ ಬಳಸಲಾಗುವುದು. ಈ ಬಾರಿ ಹಳೆಯ ರಥವನ್ನೇ ಬಳಸಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.<br /><br />ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ, ತಹಸೀಲ್ದಾರ್ ಸೋಮಶೇಖರ್, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾ ಅಧಿಕಾರಿ ಡಾ.ಸಿ.ಎನ್.ನಾರಾಯಣಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ್, ಕೇಶವ್ ಮೂರ್ತಿ, ಎಚ್.ಎಂ.ಸುಬ್ಬರಾಜು, ಬಿ.ವಿ.ಬೈರೇಗೌಡ, ವಾಸುದೇವಯ್ಯ, ರಾಮಚಂದ್ರಪ್ಪ, ಜಯರಾಜ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>