ಜಿಗಣಿ ಸಮೀಪದ ಶ್ರೀರಾಮಪುರದಲ್ಲಿ ವಾಸವಾಗಿದ್ದ ಅಸ್ಸಾಂ ಮೂಲದ ಚಂದ್ರರಾಣಿ ಮತ್ತು ಬಪ್ಪಂದಾಸ್ ದಂಪತಿಗೆ ಬುಧವಾರ ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಮಗು ಜನಿಸಿತ್ತು. ಬಾಣಂತಿ ಚಂದ್ರರಾಣಿ ಬಳಿಗೆ ಬಂದ ಅಪರಿಚಿತ ಮಹಿಳೆಯೊಬ್ಬರು ಸುಮಾರು 2 ಗಂಟೆಗಳಿಗೂ ಹೆಚ್ಚು ಕಾಲ ಸಲುಗೆಯಿಂದ ಮಾತನಾಡುತ್ತಾ ಕುಳಿತಿದ್ದರು. ತನ್ನ ಮಗಳು ಸಿಜೇರಿಯನ್ಗೆ ಬಂದಿದ್ದಾಳೆ ಎಂದು ಸುಳ್ಳು ಹೇಳಿ ಚಂದ್ರರಾಣಿಯೊಂದಿಗೆ ಮಾತುಕತೆಯಲ್ಲಿ ತೊಡಗಿ ವಿಶ್ವಾಸಗಳಿಸಿದಳು.